ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಹ್ಮದ್ ಪಟೇಲ್ ಗೆಲುವು ಪ್ರಶ್ನಿಸಿ ನ್ಯಾಯಲಯಕ್ಕೆ ಬಿಜೆಪಿ ದೂರು

By ವಿಕಾಸ್ ನಂಜಪ್ಪ
|
Google Oneindia Kannada News

ನವದೆಹಲಿ, ಆಗಸ್ಟ್ 10: ಗುಜರಾತ್ ರಾಜಸಭಾ ಚುನಾವಣೆಯಲ್ಲಿ ಅಹ್ಮದ್ ಪಟೇಲ್ ಗೆಲುವು ಸಾಧಿಸಿದ್ದನ್ನು ಪ್ರಶ್ನಿಸಿ ಬಿಜೆಪಿ ಕೋರ್ಟ್ ಮೊರೆ ಹೋಗಲಿದೆ. ಮಂಗಳವಾರ ನಡೆದಿದ್ದ ಚುನಾವಣೆಯಲ್ಲಿ ಚುಣಾವಣಾ ಆಯೋಗ ಇಬ್ಬರು ಕಾಂಗ್ರೆಸ್ ಶಾಸಕರ ಮತವನ್ನು ರದ್ದುಗೊಳಿಸಿದ್ದರಿಂದ ಅಹ್ಮದ್ ಪಟೇಲ್ ವಿಜಯಿಯಾಗಿದ್ದರು.

ವಿಪ್ ಉಲ್ಲಂಘಿಸಿದ ಗುಜರಾತ್ ನ ಎಂಟು ಶಾಸಕರ ಉಚ್ಚಾಟನೆವಿಪ್ ಉಲ್ಲಂಘಿಸಿದ ಗುಜರಾತ್ ನ ಎಂಟು ಶಾಸಕರ ಉಚ್ಚಾಟನೆ

ಚುನಾವಣಾ ಆಯೋಗದ ಕ್ರಮ ಸರಿ ಇಲ್ಲ ಎಂದಿರುವ ಬಿಜೆಪಿ ಇದನ್ನು ಕೋರ್ಟ್ ನಲ್ಲಿ ಪ್ರಶ್ನೆ ಮಾಡುವುದಾಗಿ ಹೇಳಿದೆ. ಆರಂಭದಲ್ಲಿ ಗುಜರಾತ್ ಹೈಕೋರ್ಟ್ ಮೊರೆ ಹೋಗಲು ಪಕ್ಷ ನಿರ್ಧರಿಸಿದೆ. ಇಲ್ಲಿ ವ್ಯತಿರಿಕ್ತವಾದ ತೀರ್ಪು ಬಂದಲ್ಲಿ ಮುಂದೆ ಸುಪ್ರಿಂ ಕೋರ್ಟ್ ಮೊರೆ ಹೋಗಲಿದೆ ಎಂದು ಪಕ್ಷದ ಮೂಲಗಳು ಹೇಳಿವೆ.

ಚಿತ್ರಗಳು : ಬಿಜೆಪಿ ಅಧ್ಯಕ್ಷ ಅಮಿತ್ ಶಾ ಕರ್ನಾಟಕ ಪ್ರವಾಸ

BJP to set challenge Ahmed Patel's RS win in court

ಮಂಗಳವಾರ ಗುಜರಾತ್ ವಿಧಾನಸಭೆಗೆ ನಡೆದಿದ್ದ ಚುನಾವಣೆಯಲ್ಲಿ ಬಿಜೆಪಿಯ ಅಮಿತ್ ಶಾ ಮತ್ತು ಸ್ಮೃತಿ ಇರಾನಿ ತಲಾ 46 ಮತಗಳನ್ನು ಪಡೆದು ಹಾಗೂ ಕಾಂಗ್ರೆಸ್ ನ ಅಹ್ಮದ್ ಪಟೇಲ್ 44 ಮತಗಳನ್ನು ಪಡೆದು ಜಯಶಾಲಿಯಾಗಿದ್ದರು. 38 ಮತಗಳನ್ನು ಪಡೆದ ಬಿಜೆಪಿಯ ಬಲ್ವಂತ್ ಸಿನ್ಹಾ ರಜಪೂತ್ ಸೋಲೊಪ್ಪಿಕೊಂಡಿದ್ದರು.

ಪಟೇಲ್ ಗೆಲುವಿಂದ ಸಂತೋಷ, ನಿರಾಳವಾಗಿದೆ ಎಂದ ಸೋನಿಯಾ ಗಾಂಧಿಪಟೇಲ್ ಗೆಲುವಿಂದ ಸಂತೋಷ, ನಿರಾಳವಾಗಿದೆ ಎಂದ ಸೋನಿಯಾ ಗಾಂಧಿ

ಒಟ್ಟು 8 ಕಾಂಗ್ರೆಸ್ ಶಾಸಕರು ಅಡ್ಡ ಮತದಾನ ಮಾಡಿದ್ದರು. ಇದರಲ್ಲಿ ಇಬ್ಬರು ಶಾಸಕರುತಮ್ಮ ಮತವನ್ನು ಬಿಜೆಪಿಯವರಿಗೆ ತೋರಿಸುವ ಮೂಲಕ ತಮ್ಮ ಆಯ್ಕೆಯನ್ನು ಬಹರಂಗಗೊಳಿಸಿದ್ದಾರೆ ಎಂದು ಕಾಂಗ್ರೆಸ್ ಚುನಾವಣಾ ಆಯೋಗದ ಮೊರೆ ಹೊಗಿತ್ತು. ಕೊನೆಗೆ ಈ ಚುನಾವಣಾ ಆಯೋಗ ಈ ಎರಡು ಮತಗಳನ್ನು ರದ್ದುಗೊಳಿಸಿದ್ದರಿಂದ ಅಹ್ಮದ್ ಪಟೇಲ್ ಜಯಶಾಲಿಯಾಗಿದ್ದರು.

English summary
The BJP is set to challenge the victory of Ahmed Patel in the Rajya Sabha elections from Gujarat that were held on Tuesday. Patel of the Congress won after the ECI invalidated two votes.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X