ಬಿಹಾರದಲ್ಲಿಯೂ ಅಭಿವೃದ್ಧಿ ಮಂತ್ರ ಪಠಿಸಲಿದೆ ಬಿಜೆಪಿ
ಬೆಂಗಳೂರು, ಸೆಪ್ಟೆಂಬರ್, 14 : ಬಿಹಾರ ವಿಧಾನಸಭೆ ಚುನಾವಣೆಯಲ್ಲೂ ಬಿಜೆಪಿ ಅಭಿವೃದ್ಧಿ ಮಂತ್ರ ಪಠಿಸಲಿದೆ. ಬಿಜೆಪಿ ಮತ್ತು ಮಿತ್ರಪಕ್ಷಗಳ ಸೀಟು ಹಂಚಿಕೆ ಕಸರತ್ತನ್ನು ಪೂರ್ಣಗೊಳಿಸಿವೆ. ಕೆಲವೇ ದಿನಗಳಲ್ಲಿ ಪಕ್ಷದ ಪ್ರಣಾಳಿಕೆಯನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ.
ಅಭಿವೃದ್ಧಿಯ
ಮಂತ್ರದೊಂದಿಗೆ
ಚುನಾವಣೆಯನ್ನು
ಎದುರಿಸಲಿದ್ದೇವೆ
ಎಂದು
ಅಮಿತ್
ಶಾ
ಹೇಳಿದ್ದಾರೆ.
ಬಿಜೆಪಿ
ಪ್ರಣಾಳಿಕೆಯಲ್ಲಿ
ಪ್ರಧಾನಿ
ನರೇಂದ್ರ
ಮೋದಿ
ಸರ್ಕಾರದ
ನೀತಿಗಳ
ಬಗ್ಗೆ
ಜನರಿಗೆ
ಮಾಹಿತಿ
ತಿಳಿಸಲಾಗುತ್ತದೆ.
ಬಿಹಾರದಲ್ಲಿ
ಹದಗೆಟ್ಟಿರುವ
ಕಾನೂನು
ಸುವ್ಯವಸ್ಥೆ
ಬಗ್ಗೆಯೂ
ಜನರ
ಗಮನಸೆಳೆಯಲು
ಬಿಜೆಪಿ
ನಿರ್ಧರಿಸಿದೆ.
[ಬಿಹಾರ
ಚುನಾವಣಾ
ವೇಳಾಪಟ್ಟಿ]
ರಾಜ್ಯದಲ್ಲಿ ನಿತೀಶ್ ಕುಮಾರ್ ಅವರ ಆಡಳಿತದಲ್ಲಿ ಅಭಿವೃದ್ಧಿಯ ಸೂಚ್ಯಂಕ ಶೇ 15 ರಿಂದ 9ಕ್ಕೆ ಹೇಗೆ ಇಳಿಕೆಯಾಗಿದೆ? ಎಂದು ಬಿಜೆಪಿ ಚುನಾವಣಾ ಪ್ರಚಾರದ ಸಂರ್ಭದಲ್ಲಿ ಜನರಿಗೆ ತಿಳಿಸಲಿದೆ. 'ಮುಖ್ಯಮಂತ್ರಿ ನಿತೀಶ್ ಕುಮಾರ್ ಹೇಳುವ ಅಭಿವೃದ್ಧಿಯ ಅಂಕಿ-ಸಂಖ್ಯೆಗಳನ್ನು ಮತ್ತೊಮ್ಮೆ ಪರಿಶೀಲಿಸಬೇಕು' ಎಂದು ಅಮಿತ್ ಶಾ ಸೋಮವಾರ ಲೇವಡಿ ಮಾಡಿದ್ದಾರೆ.[ಸಮರಕ್ಕೂ ಮುನ್ನವೇ ಹಿಂದೆಸರಿದ ಮೈತ್ರಿ ಕೂಟದ ಕಿಂಗ್]
ಅಭಿವೃದ್ಧಿ
ನಂತರ
ಕಾನೂನು
ಸುವ್ಯವಸ್ಥೆ
:
ಬಿಹಾರದ
ಅಭಿವೃದ್ಧಿ
ಮಂತ್ರದ
ಜೊತೆ
ರಾಜ್ಯದಲ್ಲಿ
ಹದಗೆಟ್ಟಿರುವ
ಕಾನೂನು
ಸುವ್ಯವಸ್ಥೆಯನ್ನು
ಬಿಜೆಪಿ
ಚುನಾವಣಾ
ಅಸ್ತ್ರವಾಗಿ
ಉಪಯೋಗಿಸಿಕೊಳ್ಳಲಿದೆ.
ಅಂಕಿ-ಸಂಖ್ಯೆಗಳ
ಸಮೇತ
ರಾಜ್ಯದಲ್ಲಿ
ಹದಗೆಟ್ಟಿರುವ
ಕಾನೂನು
ಸುವ್ಯವಸ್ಥೆ
ಬಗ್ಗೆ
ವರದಿಯನ್ನು
ಬಿಜೆಪಿ
ಜನರ
ಮುಂದಿಡಲಿದೆ.
NDA
Seat
Sharing
Bihar
Elections
BJP
will
contest
160
seats,
LJP
40
seats,
RLSP
23
seats
and
HAM
20
seats
pic.twitter.com/umoty4025v
—
Ananthkumar
(@AnanthKumar_BJP)
September
14,
2015
ರಾಜ್ಯದಲ್ಲಿ ಅತ್ಯಾಚಾರ ಪ್ರಕರಣಗಳು ಶೇ 22ರಷ್ಟು ಹೆಚ್ಚಾಗಿವೆ. ಅಪಹರಣ ಪ್ರಕರಣಗಳು 4,738ರಿಂದ 6,570ಕ್ಕೆ ಏರಿಕೆಯಾಗಿದೆ. ಬಿಜೆಪಿ ಜೊತೆಗಿನ ಮೈತ್ರಿಯನ್ನು ನಿತೀಶ್ ಕುಮಾರ್ ಕಡಿದುಕೊಂಡ ಬಳಿಕ ರಾಜ್ಯದ ಅಭಿವೃದ್ಧಿ ಬಗ್ಗೆ ಗಮನಹರಿಸಿಲ್ಲ ಎಂದು ಬಿಜೆಪಿ ಆರೋಪಿಸಿದೆ.
ಅಂದಹಾಗೆ 243 ಸದಸ್ಯ ಬಲದ ಬಿಹಾರ ವಿಧಾನಸಭೆಯ ಅಧಿಕಾರಾವಧಿ ನವೆಂಬರ್ 29ಕ್ಕೆ ಮುಕ್ತಾಯವಾಗಲಿದ್ದು, ಅದಕ್ಕೆ ಮುನ್ನ ಹೊಸ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ. ಸೆ.15ರ ಮಂಗಳವಾರ ಚುನಾವಣಾ ಅಧಿಸೂಚನೆ ಹೊರಬೀಳಲಿದ್ದು, ಒಟ್ಟು 5 ಹಂತಗಳಲ್ಲಿ ಚುನಾವಣೆ ನಡೆಯಲಿದೆ. ನವೆಂಬರ್ 8ರಂದು ಚುನಾವಣಾ ಫಲಿತಾಂಶ ಪ್ರಕಟಗೊಳ್ಳಲಿದೆ. [ಪಿಟಿಐ ಚಿತ್ರ]