ಆತ್ಮಹತ್ಯೆಗೆ ಯತ್ನಿಸುವುದು ಇನ್ನು ಅಪರಾಧವಲ್ಲ!
ನವದೆಹಲಿ, ಡಿ. 10 : ಇನ್ನು ಮುಂದೆ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿ ಬದುಕುಳಿದರೆ ಪೊಲೀಸರು ಅವರ ಮೇಲೆ ಪ್ರಕರಣ ದಾಖಲಿಸಿಕೊಳ್ಳುವುದಿಲ್ಲ. ಭಾರತೀಯ ದಂಡ ಸಂಹಿತೆಯಲ್ಲಿ ತಿದ್ದುಪಡಿ ತರಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ಅಪರಾಧ ಪ್ರಕರಣಗಳ ಪಟ್ಟಿಯಿಂದ ಆತ್ಮಹತ್ಯೆ ಯತ್ನವನ್ನು ತೆಗೆದುಹಾಕಲು ನಿರ್ಧರಿಸಿದೆ.
ಕೇಂದ್ರ
ಸರ್ಕಾರದ
ಈ
ನಿರ್ಧಾರಕ್ಕೆ
18
ರಾಜ್ಯಗಳು
ಮತ್ತು
4
ಕೇಂದ್ರಾಡಳಿತ
ಪ್ರದೇಶಗಳು
ಸಮ್ಮತಿ
ಸೂಚಿಸಿದ್ದು,
ಸೆಕ್ಷನ್
309ಅನ್ನು
ತೆಗೆದು
ಹಾಕಲು
ಸರ್ಕಾರ
ಮುಂದಾಗಿದೆ.
ಆತ್ಮಹತ್ಯೆಗೆ
ಯತ್ನಿಸಿ
ಬದುಕುಳಿದವರ
ವಿರುದ್ಧ
ದೂರು
ದಾಖಲು
ಮಾಡದೆ
ಅವರಲ್ಲಿ
ಜೀವನೋಲ್ಲಾಸ
ತುಂಬಲು
ಈ
ತೀರ್ಮಾನ
ಕೈಗೊಳ್ಳಲಾಗಿದೆ.
ಇನ್ನು ಮುಂದೆ 309 ಸೆಕ್ಷನ್ ತೆಗೆದು ಹಾಕಲು ನಿರ್ಧರಿಸಲಾಗಿದ್ದು, ಆತ್ಮಹತ್ಯೆ ಯತ್ನ ಮಾಡಿ ಬದುಕುಳಿದ ವ್ಯಕ್ತಿಯ ವಿರುದ್ಧ ದೂರು ಸ್ವೀಕರಿಸುವಂತಿಲ್ಲ. ವಿಚಾರಣೆ ಅಥವಾ ತನಿಖೆ ನಡೆಸುವಂತಿಲ್ಲ ಎಂಬ ನಿಯಮವನ್ನು ರೂಪಿಸಲಾಗುತ್ತದೆ. [ಕಡಿಮೆ ಕಾನೂನು, ಹೆಚ್ಚಿನ ಪ್ರಭಾವ : ಗೌಡರ ಘೋಷಣೆ]
ಸದ್ಯ ಐಪಿಸಿ ಸೆಕ್ಷನ್ 309ರ ಅಡಿ ಆತ್ಮಹತ್ಯೆಗೆ ಯತ್ನಿಸಿದವರಿಗೆ 1 ವರ್ಷ ಜೈಲು ಮತ್ತು ದಂಡ ವಿಧಿಸಲಾಗುತ್ತಿತ್ತು. ಕೇಂದ್ರದಲ್ಲಿ ಹೊಸ ಸರ್ಕಾರ ಜಾರಿಗೆ ಬಂದಾಗಲೇ ಅನಗತ್ಯ ಕಾನೂನುಗಳನ್ನು ತೆಗೆದುಹಾಕುವ ಬಗ್ಗೆ ಚರ್ಚೆ ಆರಂಭವಾಗಿತ್ತು.