ನ.12 ರಿಂದ ಅಖಿಲ ಭಾರತ ಬ್ಯಾಂಕ್ ಮುಷ್ಕರ
ಬೆಂಗಳೂರು, ಅ.29: ವೇತನ ಪರಿಷ್ಕರಣೆಗೆ ಆಗ್ರಹಿಸಿ ನ.12ರಿಂದ ಅಖಿಲ ಭಾರತ ಬ್ಯಾಂಕ್ ಮುಷ್ಕರ ಹಮ್ಮಿಕೊಳ್ಳಲಾಗಿದೆ. ವಲಯವಾರು ಮುಷ್ಕರಕ್ಕೆ ಬೇರೆ ಬೇರೆ ದಿನಾಂಕಗಳನ್ನು ನಿಗದಿ ಪಡಿಸಲಾಗಿದೆ ಎಂದು ಬ್ಯಾಂಕ್ ನೌಕರರ ಸಂಘ ಪ್ರಕಟಿಸಿದೆ.
ಬಂದ್ ದಿನದಂದು ಬ್ಯಾಂಕ್, ಎಟಿಎಂಗಳು ಕಾರ್ಯ ನಿರ್ವಹಿಸುವುದಿಲ್ಲ, ಇದರಿಂದ ಗ್ರಾಹಕರಿಗೆ ಆಗುವ ತೊಂದರೆಗಳಿಗೆ ವಿಷಾದಿಸುತ್ತೇವೆ. ಆದರೆ ತೊಂದರೆಗೆ ನಾವು ಕಾರಣರಲ್ಲ, ಸರ್ಕಾರವೇ ಕಾರಣ ಎಂದು ಅಖಿಲ ಭಾರತ ಬ್ಯಾಂಕ್ ಯೂನಿಯನ್ ಪ್ರಧಾನ ಕಾರ್ಯದರ್ಶಿ ಸಿ.ಎಚ್ ವೆಂಕಟಾಚಲಂ ಹೇಳಿದ್ದಾರೆ.
ಯುನೈಟೆಡ್
ಫೋರಂ
ಆಫ್
ಬ್ಯಾಂಕ್
ಯೂನಿಯನ್ಸ್
ಸಂಚಾಲಕ
ವಸಂತ
ರೈ
ಮಾತನಾಡಿ,
ವೇತನ
ಪರಿಷ್ಕರಣೆಗೊಳಿಸುವಂತೆ
ನಾವು
ಹಲವು
ಬಾರಿ
ಮುಷ್ಕರ
ನಡೆಸಿದರೂ
ಪ್ರಯೋಜನವಾಗಿಲ್ಲ.
ಹಾಗಾಗಿ
ಅನಿವಾರ್ಯವಾಗಿ
ಎರಡು
ಹಂತದಲ್ಲಿ
ಮುಷ್ಕರ
ಹಮ್ಮಿಕೊಂಡಿದ್ದೇವೆ
ಎಂದಿದ್ದಾರೆ.
31.10.2012ರಿಂದ
ವೇತನ
ಪರಿಷ್ಕರಣೆಯಾಗಬೇಕಿದೆ
ಎಂದು
ಹೇಳಿದ
ಅವರು
ಡಿ.2
ರಿಂದ
5ರವರೆಗೆ
ವಲಯವಾರು
ಮುಷ್ಕರವನ್ನು
ಹಮ್ಮಿಕೊಂಡಿದ್ದೇವೆ
ಎಂದು
ಹೇಳಿದರು.
ಡಿ.2
ರಂದು
ದಕ್ಷಿಣ
ವಲಯ:
ಆಂಧ್ರಪ್ರದೇಶ,
ಕರ್ನಾಟಕ,
ಕೇರಳ,
ತಮಿಳುನಾಡು,
ತೆಲಂಗಾಣ,
ಲಕ್ಷದ್ವೀಪ,
ಪುದುಚೇರಿ.
ಡಿ.3
ರಂದು
ಉತ್ತರ
ವಲಯ:
ಛತ್ತೀಸ್ಗಡ,
ಹರಿಯಾಣ,
ಹಿಮಾಚಲ
ಪ್ರದೇಶ,
ಜಮ್ಮು-ಕಾಶ್ಮೀರ,
ಮಧ್ಯಪ್ರದೇಶ,
ನವದೆಹಲಿ,
ಪಂಜಾಬ್,
ಉತ್ತರಪ್ರದೇಶ,
ಉತ್ತರಾಂಚಲ,
ರಾಜಸ್ಥಾನ,
ಚಂಡೀಗಡ.
ಡಿ.4ರಂದು
ಪೂರ್ವವಲಯ:
ಬಿಹಾರ,
ಜಾರ್ಖಂಡ್,
ಸಿಕ್ಕಿಂ,
ಪಶ್ಚಿಮ
ಬಂಗಾಲ,
ಈಶಾನ್ಯ
ರಾಜ್ಯಗಳು.
ಡಿ.5
ರಂದು
ಪಶ್ಚಿಮ
ವಲಯ:
ಗೋವಾ,
ಗುಜರಾತ್,
ಮಹಾರಾಷ್ಟ್ರ,
ದಿಯು-ದಾಮನ್
ವಲಯಗಳಲ್ಲಿ
ಮುಷ್ಕರವನ್ನು
ಹಮ್ಮಿಕೊಳ್ಳಲಾಗಿದೆ.
2011-12ರಲ್ಲಿ ವೇತನದಲ್ಲಿ ಶೇ17.5ರಷ್ಟು ಮಾತ್ರ ಏರಿಕೆ ನೀಡಲಾಗಿತ್ತು ನಂತರದ ವರ್ಷದಲ್ಲಿ ಶೇ 11.5 ರಷ್ಟು ಸಂಬಳ ಏರಿಕೆ ಕಂಡಿತ್ತು ಇದಾದ ಮೇಲೆ ಇಂಡಿಯನ್ ಬ್ಯಾಂಕ್ ಅಸೋಸಿಯೇಷನ್ ವೇತನ ಪರಿಷ್ಕರಣೆ ಮಾಡಿಲ್ಲ ಎಂದು ನೌಕರರ ಸಂಘ ದೂರಿದೆ.(ಪಿಟಿಐ)