ಬಹುಕೋಟಿ ಹೆಲಿಕಾಪ್ಟರ್ ಹಗರಣ: ಎಸ್ ಪಿ ತ್ಯಾಗಿಗೆ ಜಾಮೀನು
ನವದೆಹಲಿ, ಡಿಸೆಂಬರ್ 26: ಸುಮಾರು 3,600 ಕೋಟಿ ರೂಪಾಯಿ ಮೊತ್ತದ ವಿವಿಐಪಿ ಅಗಸ್ಟಾವೆಸ್ಟ್ಲ್ಯಾಂಡ್ ಹೆಲಿಕಾಪ್ಟರ್ ಖರೀದಿ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಅರೋಪ ಹೊತ್ತಿರುವ ವಾಯುಸೇನೆ ಮಾಜಿ ಮುಖ್ಯಸ್ಥ ಎಸ್ಪಿ ತ್ಯಾಗಿ ಅವರಿಗೆ ಜಾಮೀನು ಮಂಜೂರಾಗಿದೆ. ಸಿಬಿಐ ವಿಶೇಷ ನ್ಯಾಯಾಲಯ ಸೋಮವಾರ ಷರತ್ತುಬದ್ಧ ಜಾಮೀನು ನೀಡಲಾಗಿದೆ.
ವಿವಿಐಪಿ ಅಗಸ್ಟಾವೆಸ್ಟ್ಲ್ಯಾಂಡ್ ಹೆಲಿಕಾಪ್ಟರ್ ಖರೀದಿ ಅವ್ಯವಹಾರಕ್ಕೆ ಸಂಬಂಧಿಸಿದಂತೆ ನಡೆದಿರುವ ತನಿಖೆಗೆ ಸಹಕರಿಸುವಂತೆ ನಿರ್ದೇಶಿಸಿದ್ದು, 2 ಲಕ್ಷ ರು ಜಾಮೀನಿನ ಬಾಂಡ್ ಸಲ್ಲಿಸುವಂತೆ ಸೂಚಿಸಲಾಗಿದೆ. ಮಿಕ್ಕಂತೆ ಇತರೆ ಆರೋಪಿಗಳಾದ ಸಂಜೀವ್ ತ್ಯಾಗಿ ಹಾಗೂ ಗೌತಮ್ ಖೈತಾನ್ ಅವರ ಜಾಮೀನು ಅರ್ಜಿ ಜನವರಿ 4ಕ್ಕೆ ವಿಚಾರಣೆಗೆ ಬರಲಿದೆ.[ಭಾರತವನ್ನು ಕಾಡುವ 25 ಭ್ರಷ್ಟಾಚಾರ ಪ್ರಕರಣಗಳು]
ಏನಿದು
ವಿವಿಐಪಿ
ಹಗರಣ?
ವಿವಿಐಪಿಗಳ
ಪ್ರಯಾಣಕ್ಕಾಗಿ
ವಾಯುಪಡೆಗೆ
12
ಹೆಲಿಕಾಪ್ಟರ್
ಖರೀದಿಗೆ
ಸರ್ಕಾರ
ಟೆಂಡರ್
ಕರೆಯಲಾಗಿತ್ತು.
ಅಮೆರಿಕ,
ಇಟಲಿ
ಸೇರಿದಂತೆ
ಪ್ರತಿಷ್ಠಿತ
ರಾಷ್ಟ್ರಗಳ
ಕಂಪನಿಗಳು
ಟೆಂಡರ್ನಲ್ಲಿ
ಪಾಲ್ಗೊಂಡಿದ್ದವು.
ಆದರೆ.
ಅಗಸ್ಟಾ
ವೆಸ್ಟ್
ಲ್ಯಾಂಡ್
ಕಂಪನಿ
ಕೆಲ
ರಾಜಕಾರಣಿಗಳಿಗೆ
360
ಕೋಟಿ
ರೂಪಾಯಿ
ಲಂಚ
ನೀಡಿ
ಟೆಂಡರ್
ಪಡೆದಿತ್ತು.
ಈ
ಲಂಚದ
ಮೊತ್ತ
ವರ್ಗಾವನೆ
ಮೇಲೆ
ತನಿಖೆ
ನಡೆಸಿದ್ದ
ಜಾರಿ
ನಿರ್ದೇಶನಾಲಯ
ಉದ್ಯಮಿ
ಹಾಗೂ
ವಕೀಲ
ಖೇತಾನ್
ರನ್ನು
ಬಂ
ಧಿಸಿದೆ.
ವಿವಿಐಪಿ ಹೆಲಿಕಾಪ್ಟರ್ ಖರೀದಿ ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಖೇತಾನ್, ವಾಯುಪಡೆಯ ನಿವೃತ್ತ ಮುಖ್ಯಸ್ಥ ಎಸ್.ಪಿ.ತ್ಯಾಗಿ ಮತ್ತು ಇತರ 19 ವ್ಯಕ್ತಿಗಳ ವಿರುದ್ಧ ಎಫ್ ಐಆರ್ ಕೂಡಾ ಹಾಕಲಾಗಿದೆ.