ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಬಾಬ್ರಿ ಮಸೀದಿ ದ್ವಂಸ ಪ್ರಕರಣ: ಅಡ್ವಾಣಿ ಮೇಲೆ ಮತ್ತಷ್ಟು ಆರೋಪ?
ಬಾಬ್ರಿ ಮಸೀದಿ ದ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ, ವಿಶೇಷ ಸಿಬಿಐ ನ್ಯಾಯಾಲಯ ಬಿಜೆಪಿ ನಾಯಕ ಎಲ್.ಕೆ.ಅಡ್ವಾನಿ ಅವರ ಮೇಲೆ ಮತ್ತಷ್ಟು ಆರೋಪ ಹೊರಿಸುವ ಸಾಧ್ಯತೆಗಳು ನಿಚ್ಛಳವಾಗಿದೆ.
ಲಕ್ನೊ, ಮೇ 25: ಬಾಬ್ರಿ ಮಸೀದಿ ದ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ, ವಿಶೇಷ ಸಿಬಿಐ ನ್ಯಾಯಾಲಯ ಬಿಜೆಪಿ ನಾಯಕ ಎಲ್.ಕೆ.ಅಡ್ವಾನಿ ಅವರ ಮೇಲೆ ಮತ್ತಷ್ಟು ಆರೋಪ ಹೊರಿಸುವ ಸಾಧ್ಯತೆಗಳು ನಿಚ್ಛಳವಾಗಿದೆ.
1992 ರ ಬಾಬ್ರಿ ಮಸೀದಿ ದ್ವಂಸ ಪ್ರಕರಣವನ್ನು ಬಹಳ ಗಂಭೀರವಾಗಿ ಪರಿಗಣಿಸಿಸರುವ ನ್ಯಾಯಾಲಯ ಎಲ್.ಕೆ.ಅಡ್ವಾಣಿ ಸೇರಿದಂತೆ ಮತ್ತಷ್ಟು ಜನರ ಮೇಲೆ ಆರೋಪ ಹೊರಿಸಿದ್ದು, ಈಗಾಗಲೇ ಆರಂಭವಾಗಿರುವ ವಿಚಾರಣೆ, ದಿನ ದಿನವೂ ನಡೆಯಲಿದೆ ಎಂದಿದೆ.[ಅಸಲಿಗೆ ಅಯೋಧ್ಯೆಯಲ್ಲಿ ಕರಸೇವಕರನ್ನು ಪ್ರಚೋದಿಸಿದ್ದು ಅಡ್ವಾಣಿಯಲ್ಲ, ನಾನು]
ಒಟ್ಟಿನಲ್ಲಿ ಬಿಜೆಪಿಯ ನಾಯಕ ಎಲ್ ಕೆ ಅಡ್ವಾಣಿಯವರ ರಾಜಕೀಯ ಹಾದಿಗೆ ಬಾಬ್ರಿ ಮಸೀದಿ ಪ್ರಕರಣ ಒಂದು ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಈ ಬೆಳವಣಿಗೆಯ ನಡುವಲ್ಲೇ ಮೇ 24, ಬುಧವಾರದಂದು ವಿಶೇಷ ನ್ಯಾಯಾಲಯ ಬಾಬ್ರಿ ಮಸೀದಿ ದ್ವಂಸ ಪ್ರಕರಣದ ಆರನೇ ಆರೋಪಿ ಸತೀಶ್ ಪ್ರಧಾನ್ ಮತ್ತು ಶಿವಸೇನಾ ಮಾಜಿ ಸಂಸದ ಎಸ್.ಕೆ.ಯಾದವ್ ಅವರಿಗೆ ಜಾಮೀನು ನೀಡಿದೆ.
Comments
English summary
There may be more trouble brewing for BJP leaders L K Advani and others as a special CBI court hearing the 1993 Babri Masjid demolition case is likely to frame additional charges. Filel photo L K Advani The Supreme Court had restored the serious criminal conspiracy offence against the leaders and said that the trial will be conducted on a day-to-day basis.