ತಮಿಳುನಾಡು ರೈತರ ಜಂತರ್ ಮಂತರ್ ಪ್ರತಿಭಟನೆಗೆ ಪ್ರಕಾಶ್ ರೈ ಬೆಂಬಲ
ಬರ ಪರಿಹಾರಕ್ಕೆ ಕೋರಿ ತಮಿಳುನಾಡು ರೈತರು ದೆಹಲಿಯ ಜಂತರ್ ಮಂತರ್ ಮೈದಾನದಲ್ಲಿ ನಡೆಸುತ್ತಿರುವ ಪ್ರತಿಭಟನೆಗೆ ಬಹುಭಾಷಾ ನಟ ಪ್ರಕಾಶ್ ರೈ ಮತ್ತು ತಮಿಳು ನಟ ವಿಶಾಲ್ ಬೆಂಬಲ ನೀಡಿದ್ದಾರೆ.
ದೆಹಲಿ, ಮಾರ್ಚ್ 24: ಬರ ಪರಿಹಾರಕ್ಕೆ ಕೋರಿ ತಮಿಳುನಾಡು ರೈತರು ದೆಹಲಿಯ ಜಂತರ್ ಮಂತರ್ ಮೈದಾನದಲ್ಲಿ ನಡೆಸುತ್ತಿರುವ ಪ್ರತಿಭಟನೆಗೆ ಬಹುಭಾಷಾ ನಟ ಪ್ರಕಾಶ್ ರೈ ಮತ್ತು ತಮಿಳು ನಟ ವಿಶಾಲ್ ಬೆಂಬಲ ನೀಡಿದ್ದಾರೆ.
ಕೇಂದ್ರ ಸರಕಾರ ತಮಗೆ ಬರ ಪರಿಹಾರ ನೀಡಬೇಕು ಎಂದು ಕೋರಿ ಜಂತರ್ ಮಂತರ್ ನಲ್ಲಿ ತಮಿಳುನಾಡಿನ ರೈತರು ಕಳೆದ 10 ದಿನಗಳಿಂದ ಅರೆ ಬೆತ್ತಲ ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿಭಟನಾ ಸ್ಥಳಕ್ಕೆ ತೆರಳಿ ಪ್ರಕಾಶ್ ರೈ ಮತ್ತು ತಮಿಳು ನಟ ವಿಶಾಲ್ ರೈತರ ಜತೆ ಧರಣಿ ಕೂತಿದ್ದಾರೆ.[ಆರ್ ಕೆ ನಗರ ಉಪಚುನಾವಣೆ: ಇ.ಮದುಸೂಧನ್ ನಾಮಪತ್ರ ಸಲ್ಲಿಕೆ]
ಈ ಕುರಿತು ಮಾತನಾಡಿರುವ ಪ್ರಕಾಶ್ ರೈ, "ಅವರ (ರೈತರ) ಸಮಸ್ಯೆಯನ್ನು ಯಾರೂ ಕೇಳುತ್ತಿಲ್ಲ. ಸಂಬಂಧಪಟ್ಟ ಸಚಿವರು ಗಮನಿಸಬಹುದು ಎಂದು ನಾನು ಪ್ರತಿಭಟನೆಗೆ ಬೆಂಬಲ ಸೂಚಿಸಲು ಇಲ್ಲಿಗೆ ಬಂದಿದ್ದೇನೆ,' ಎಂದು ಹೇಳಿದ್ದಾರೆ.[ಶಶಿಕಲಾಗೆ 'ಟೋಪಿ', ಪನ್ನೀರ್ ಸೆಲ್ವಂಗೆ 'ವಿದ್ಯುತ್ ಕಂಬ']
Their cries aren't being heard, here to support so that concerned ministries take notice: Prakash Raj on joining TN farmers' protest #Delhi pic.twitter.com/gB8pTVPsxG
— ANI (@ANI_news) March 24, 2017