ರಾಮೇಶ್ವರಂನಲ್ಲಿ ಗುರುವಾರ ಅಬ್ದುಲ್ ಕಲಾಂ ಅಂತ್ಯಕ್ರಿಯೆ
ಬೆಂಗಳೂರು, ಜುಲೈ 28 : ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರ ಅಂತ್ಯಕ್ರಿಯೆ ರಾಮೇಶ್ವರಂನಲ್ಲಿ ಗುರುವಾರ ನಡೆಯಲಿದೆ. ನವದೆಹಲಿಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ಅಂತಿಮ ನಿರ್ಧಾರವನ್ನು ಕೈಗೊಳ್ಳಲಾಗಿದೆ.
ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಮಂಗಳವಾರ ಬೆಳಗ್ಗೆ ನಡೆದ ತುರ್ತು ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಕಲಾಂ ಕುಟುಂಬದವರ ಇಚ್ಛೆಯಂತೆ ಅವರ ಹುಟ್ಟೂರು ತಮಿಳುನಾಡಿನ ರಾಮೇಶ್ವರಂನಲ್ಲಿ ಅಂತ್ಯಕ್ರಿಯೆಯನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆಸಲಾಗುತ್ತದೆ. [ಡಾ.ಕಲಾಂ ಸ್ಫೂರ್ತಿದಾಯಕ ಹೇಳಿಕೆಗಳು]
ಶಿಲ್ಲಾಂಗ್ನಿಂದ
ವಿಶೇಷ
ವಿಮಾನದ
ಮೂಲಕ
ಅಬ್ದುಲ್
ಕಲಾಂ
ಅವರ
ಮೃತದೇಹವನ್ನು
ಮಂಗಳವಾರ
ಬೆಳಗ್ಗೆ
ಗುವಾಹಟಿಗೆ
ತರಲಾಯಿತು.
ಅಲ್ಲಿಂದ
ವಾಯುಪಡೆಯ
ಸಿ-130ಜೆ
ಸೂಪರ್
ಹರ್ಕ್ಯುಲೆಸ್
ವಿಮಾನದ
ಮೂಲಕ
ಅವರ
ಮೃತಹೇಹವನ್ನು
ದೆಹಲಿಯ
ಪಾಲಂ
ವಿಮಾನ
ನಿಲ್ದಾಣಕ್ಕೆ
ತರಲಾಯಿತು.
[ಅಬ್ದುಲ್
ಕಲಾಂ
ಸಂಕ್ಷಿಪ್ತ
ಪರಿಚಯ]
The
last
rites
of
the
late
president
#APJAbdulKalam
will
be
held
at
his
native
place
#Rameswaram,
#TamilNadu
.
—
Sitanshu
Kar
(@SpokespersonMoD)
July
28,
2015
ಪಾಲಂ
ವಿಮಾನ
ನಿಲ್ದಾಣದಲ್ಲಿ
ರಕ್ಷಣಾ
ಸಚಿವ
ಮನೋಹರ್
ಪರಿಕ್ಕರ್
ಮತ್ತು
ಸೇನಾ
ಪಡೆಯ
ಮೂವರು
ಮುಖ್ಯಸ್ಥರು
ಡಾ.ಕಲಾಂ
ಅವರ
ಪಾರ್ಥೀವ
ಶರೀರವನ್ನು
ಬರಮಾಡಿಕೊಂಡರು.
ರಾಷ್ಟ್ರಪತಿ
ಪ್ರಣಬ್
ಮುಖರ್ಜಿ,
ಪ್ರಧಾನಿ
ನರೇಂದ್ರ
ಮೋದಿ,
ದೆಹಲಿ
ಮುಖ್ಯಮಂತ್ರಿ
ಅರವಿಂದ್
ಕೇಜ್ರಿವಾಲ್
ಮುಂತಾದವರು
ವಿಮಾನ
ನಿಲ್ದಾಣದಲ್ಲಿ
ಅಂತಿಮ
ನಮನ
ಸಲ್ಲಿಸಿದರು.
[ಕಲಾಂ
ಆಶಯದಂತೆ
ಕರ್ನಾಟಕದಲ್ಲಿ
ಸರ್ಕಾರಿ
ರಜೆ
ಇಲ್ಲ]
#RIPKalam
|
President
of
India
Pranab
Mukherjee
pays
homage
to
late
Former
President
APJ
Abdul
Kalam
pic.twitter.com/hV0Pylcc0O
—
CNN-IBN
News
(@ibnlive)
July
28,
2015
ಇಂದು ಮಧ್ಯಾಹ್ನ 3 ಗಂಟೆಯ ತನಕ ಗಣ್ಯರು ಅಂತಿಮ ನಮನ ಸಲ್ಲಿಸಲು ಅವಕಾಶ ಮಾಡಿಕೊಡಲಾಗಿದೆ. ಮಧ್ಯಾಹ್ನ 3ರಿಂದ ರಾತ್ರಿ 10ರವರೆಗೆ ದೆಹಲಿಯ ರಾಜಾಜಿ ಮಾರ್ಗದಲ್ಲಿರುವ ಕಲಾಂ ನಿವಾಸದಲ್ಲಿ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಗುರುವಾರ ಬೆಳಗ್ಗೆ 10.15ಕ್ಕೆ ರಾಮೇಶ್ವರಂನಲ್ಲಿ ಅಂತ್ಯಕ್ರಿಯೆ ನಡೆಯಲಿದೆ.