ಯುಜಿಸಿ ಸ್ಕಾಲರ್ಶಿಪ್ ಪಡೆಯಲು ಆಧಾರ್ ಕಡ್ಡಾಯ
ನವದೆಹಲಿ, ಜುಲೈ, 21: ಕೇಂದ್ರ ಸರ್ಕಾರ ಆಧಾರ್ ಕಾರ್ಡ್ ಕಡ್ಡಾಯಕ್ಕೆ ಸಂಬಂಧಿಸಿ ದಿಟ್ಟ ಹೆಜ್ಜೆ ಇಟ್ಟಂತೆ ದೇವಾಲಯಗಳು, ವಿಶ್ವವಿದ್ಯಾಲಯಗಳು, ತೆರಿಗೆ ಇಲಾಖೆ ಸಹ ಅದನ್ನೇ ಪಾಲಿಸುತ್ತ ಬಂದಿವೆ.
ವಿದ್ಯಾರ್ಥಿಗಳಿಗೆ ಈ ಸುದ್ದಿ ಬಹಳ ಪ್ರಮುಖವಾಗುತ್ತದೆ. ಯುಜಿಸಿ ಸ್ಕಾಲರ್ಶಿಪ್ ಅಥವಾ ಫೆಲೋಶಿಪ್ ಪಡೆಯಲು ಆಧಾರ್ ಕಾರ್ಡ್ ಕಡ್ಡಾಯ ಮಾಡಬೇಕು. ವಿದ್ಯಾರ್ಥಿಗಳು ಅರ್ಜಿ ಸಲ್ಲಿಕೆ ಸಮಯದಲ್ಲೇ ಆಧಾರ್ ಹಾಜರುಪಡಿಸಬೇಕು ಎಂಬ ಮಾತನ್ನು ಯುನಿವರ್ಸಿಟಿ ಗ್ರ್ಯಾಂಟ್ ಕಮಿಷನ್(ಯುಜಿಸಿ) ಹೇಳಿದೆ.[ತಿರುಪತಿಯಲ್ಲಿ ಉರುಳು ಸೇವೆ ಮಾಡಲು ಆಧಾರ್ ಬೇಕು!]
ಬುಧವಾರ ಪ್ರಕಟಣೆ ಹೊರಡಿಸಿರುವ ಯುಜಿಸಿ ಅರ್ಜಿ ಸಲ್ಲಿಸುವಾಗ ಆಧಾರ್ ನ್ನು ಗುರುತಿನ ದಾಖಲೆಯಾಗಿ ನೀಡಬೇಕು ಎಂದು ಹೇಳಿದೆ. ಒಂದು ವೇಳೆ 2017-18ರ ಸಾಲಿಗೆ ಈಗಾಗಲೇ ಅರ್ಜಿ ಸಲ್ಲಿಕೆ ಮಾಡಿದ್ದರೂ ಸಹ ಆಧಾರ್ ನಂಬರ್ ನೀಡುವಂತೆ ಕೋರಲಾಗಿದೆ.[ಆಧಾರ್ ಕಾರ್ಡ್ ಮಾಡಿಸುವುದು ಹೇಗೆ?]
ಆದಾಯ ತೆರಿಗೆ ಸಲ್ಲಿಕೆ, ಬ್ಯಾಂಕ್ ಖಾತೆ ಸೇರಿದಂತೆ ಎಲ್ಲ ಕಡೆಗೂ ನಿಧಾನವಾಗಿ ಆಧಾರ್ ವ್ಯಾಪಿಸುತ್ತಿದೆ. ತಿರುಪತಿ ತಿರುಮಲ ದೇವಾಲಯದಲ್ಲಿ ಉರುಳು ಸೇವೆ ಮಾಡಲು ಇನ್ನು ಆಧಾರ್ ಕಾರ್ಡ್ ನೀಡಬೇಕು. ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ) ಮಂಡಳಿ ಸಭೆ ಮಂಗಳಾವರ ಈ ತೀರ್ಮಾನ ತೆಗೆದುಕೊಂಡಿತ್ತು.