ತ್ವರಿತ ಅಲರ್ಟ್ ಗಳಿಗಾಗಿ
For Daily Alerts
48 ಗಂಟೆಗಳಲ್ಲಿ ಯೋಗಿ ಆದಿತ್ಯನಾಥ್ ತವರಲ್ಲಿ 30 ಮಕ್ಕಳ ದಾರುಣ ಬಲಿ
ಲಕ್ನೊ, ಆಗಸ್ಟ್ 31: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತವರಲ್ಲಿ ಕಳೆದ 48 ಗಂಟೆಗಳಲ್ಲಿ 30 ಮಕ್ಕಳು ಅಸುನೀಗಿದ್ದಾರೆ. ಎನ್ಸೆಫಾಲಿಟಿಸ್ (encephalitis) ಎಂಬ ಮೆದುಳು ಸಂಬಂಧಿ ರೋಗಕ್ಕೆ ಈ ಮಕ್ಕಳು ಬಲಿಯಾಗಿದ್ದಾರೆ.
ಉತ್ತರ ಪ್ರದೇಶ: ಆ. 15ರಂದು ರಾಷ್ಟ್ರಧ್ವಜ ಹಾರಿಸಲು ಮದರಸಾಗಳಿಗೆ ಸೂಚನೆ
ಯೋಗಿ ಆದಿತ್ಯನಾಥ್ ಪ್ರತಿನಿಧಿಸುತ್ತಿದ್ದ ಲೋಕಸಭಾ ಕ್ಷೇತ್ರ "ಗೋರಖ್ ಪುರ್ ನ ಬಾಬ ರಾಘವ್ ದಾಸ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಈ ಸಾವು ಸಂಭವಿಸಿದೆ," ಎಂದು ಜಿಲ್ಲಾಧಿಕಾರಿ ರಾಜೀವ್ ರಟೇಲಾ ತಿಳಿಸಿದ್ದಾರೆ.
ಈ ಭಾಗದಲ್ಲಿ ಎನ್ಸೆಫಾಲಿಟಿಸ್ ರೋಗದ ಭಾದೆ ಹೆಚ್ಚಾಗಿದ್ದು ಈ ವರ್ಷವೊಂದರಲ್ಲೇ 114 ಜನರು ಸಾವನ್ನಪ್ಪಿದ್ದಾರೆ. ನೀರಿನ ಮೂಲಕ ಹರಡುವ ರೋಗ ಇದಾಗಿದೆ. ಇದೀಗ ಕಳೆದ 48 ಗಂಟೆಗಳಲ್ಲಿ 30 ಮಕ್ಕಳು ಸಾವನ್ನಪ್ಪಿದ್ದು ಈ ರೋಗಕ್ಕೆ ಜನ ಬೆಚ್ಚಿ ಬಿದ್ದಿದ್ದಾರೆ.
Comments
English summary
"30 children lost their lives due to encephalitis in last 48 hours at Gorakhpur's Baba Raghav Das Medical College Hospital," said District Magistrate, Rajeev Rautela.