ಜಾರ್ಖಂಡ್ನಲ್ಲಿ 12 ಮಾವೋವಾದಿಗಳ ಹತ್ಯೆ
ನವದೆಹಲಿ, ಜೂ. 09 : ಜಾರ್ಖಂಡ್ನಲ್ಲಿ ಪೊಲೀಸರು ಮತ್ತು ನಕ್ಸಲರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ 12 ಮಾವೋವಾದಿಗಳನ್ನು ಹತ್ಯೆ ಮಾಡಲಾಗಿದ್ದು, ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.
ಮಂಗಳವಾರ
ಮುಂಜಾನೆ
2.30ರ
ಸುಮಾರಿಗೆ
ಪನಾಮು
ಜಿಲ್ಲೆಯ
ಸತ್
ಬರ್ವ್
ಪೊಲೀಸ್
ಠಾಣೆ
ವ್ಯಾಪ್ತಿಯಲ್ಲಿ
ಈ
ಗುಂಡಿನ
ಕಾಳಗ
ನಡೆದಿದೆ.
ಪೊಲೀಸರು
ಮತ್ತು
ಸಿಆರ್ಪಿಎಫ್
ಸಿಬ್ಬಂದಿ
ನಕ್ಸಲರ
ಮೇಳೆ
ಗುಂಡಿನ
ದಾಳಿ
ನಡೆಸಿದ್ದು,
ಈ
ಸಂದರ್ಭದಲ್ಲಿ
12
ಮಾವೋವಾದಿಗಳು
ಮೃತಪಟ್ಟಿದ್ದಾರೆ.
[ಉಲ್ಫಾ
ಉಗ್ರರಿಂದ
20
ಯೋಧರ
ಭೀಕರ
ಹತ್ಯೆ]
ಮಾವೋವಾದಿಗಳು ಶಸ್ತ್ರಾಸ್ತ್ರಗಳೊಂದಿಗೆ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಹೊರಟಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಲಾಗಿದೆ. ಗುಂಡಿನ ದಾಳಿಯ ನಂತರ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. [ಉಗ್ರರ ಅಟ್ಟಹಾಸಕ್ಕೆ ಬಲಿಯಾದ ಬೆಳಗಾವಿ ಯೋಧ]
ನಕ್ಸಲರನ್ನು ಸುತ್ತುವರೆದ ಪೊಲೀಸ್ ಪಡೆ ಶರಣಾಗುವಂತೆ ಅವರಿಗೆ ಸೂಚನೆ ನೀಡಿತ್ತು. ಈ ಸಂದರ್ಭದಲ್ಲಿ ಪೊಲೀಸರ ಮೇಲೆ ಅವರು ಗುಂಡಿನ ದಾಳಿ ನಡೆಸಿದ್ದರಿಂದ ಪ್ರತಿದಾಳಿ ನಡೆಸಲಾಗಿದೆ ಎಂದು ಜಾರ್ಖಂಡ್ ಪೊಲೀಸರು ಮಾಹಿತಿ ನೀಡಿದ್ದಾರೆ.
ನಕ್ಸಲರ ಪ್ರಾಬಲ್ಯವಿದೆ : ಜಾರ್ಖಂಡ್ನಲ್ಲಿ ನಕ್ಸಲರ ಪ್ರಾಬಲ್ಯವಿರುವ ಜಿಲ್ಲೆಗಳಲ್ಲಿ ಪನಾಮು ಸಹ ಒಂದು. ಜಿಲ್ಲೆಯ ವಿವಿಧ ಪ್ರದೇಶಗಳಲ್ಲಿ ನಕ್ಸಲರ ಟೆಂಟ್ಗಳಿವೆ. ಕೆಲವು ದಿನಗಳ ಹಿಂದೆ ಜಿಲ್ಲೆಯ ಹಲವು ಗ್ರಾಮಗಳಲ್ಲಿ ನಕ್ಸಲರು ಬೃಹತ್ ಸದಸ್ಯತ್ವ ನೋಂದಣಿ ಅಭಿಯಾನ ಮಾಡಿದ್ದರು. [ಪಿಟಿಐ ಚಿತ್ರ]