ಉಪವಾಸ ನಿರತ ಜಗನ್, ಬಲವಂತವಾಗಿ ಆಸ್ಪತ್ರೆಗೆ ಶಿಫ್ಟ್
ಹೈದರಾಬಾದ್, ಅ. 13: ತೆಲಂಗಾಣ ಮಾದರಿಯಲ್ಲೇ ಆಂಧ್ರಪ್ರದೇಶಕ್ಕೂ ಹೆಚ್ಚಿನ ಅನುದಾನ ನೀಡಬೇಕು ಎಂದು ಆಗ್ರಹಿಸಿ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದ ವೈಎಸ್ಸಾರ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಜಗನ್ ಮೋಹನ್ ರೆಡ್ಡಿ ಅಸ್ವಸ್ಥರಾಗಿದ್ದಾರೆ. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು, ಬಲವಂತವಾಗಿ ಆಸ್ಪತ್ರೆಗೆ ಶಿಫ್ಟ್ ಮಾಡಿದ್ದಾರೆ.['ತೆಲಂಗಾಣದ ಬಗ್ಗೆ ಸೊಲ್ಲೆತ್ತಿದರೆ ಹೂತುಬಿಡ್ತೀನಿ']
ಸತತ
ಆರು
ದಿನಗಳಿಂದ
ಉಪವಾಸ
ನಿರತರಾಗಿದ್ದ
ಜಗನ್
ಅವರು
ಮಂಗಳವಾರ
ಬೆಳ್ಳಂಬೆಳ್ಳಗೆ
ಅಸ್ವಸ್ಥಗೊಂಡರು.
ತಕ್ಷಣ
ಅವರನ್ನು
ಸಮೀಪದ
ಸರ್ಕಾರಿ
ಅಸ್ಪತ್ರೆಗೆ
ಕರೆದೊಯ್ಯಲಾಯಿತು.
ಐಸಿಯುನಲ್ಲಿ
ಚಿಕಿತ್ಸೆ
ನೀಡಲಾಗಿದೆ.
ವೈದ್ಯರ
ಬಲವಂತದ
ನಂತರ
ದ್ರವಾಹಾರವನ್ನು
ನೀಡಲಾಗುತ್ತಿದೆ.[ಜಗನ್
ರೆಡ್ಡಿ
ವಿರುದ್ಧ
11ನೇ
ಚಾರ್ಜ್
ಶೀಟ್
ಸಲ್ಲಿಕೆ]
ಜಗನ್
ಅವರ
ತಾಯಿ
ವಿಜಯಮ್ಮ,
ಪತ್ನಿ
ಭಾರತಿ
ಹಾಗೂ
ಕುಟುಂಬ
ಸದಸ್ಯರು
ಆಸ್ಪತ್ರೆಗೆ
ಬಂದಿದ್ದು,
ಮತ್ತೊಮ್ಮೆ
ಆಸ್ಪತ್ರೆ
ಬಳಿ
ಜನರ
ಕೋಲಾಹಲ
ಶುರುವಾಗಿದೆ.
ಹಿಂದೊಮ್ಮೆ
ಇದೇ
ರೀತಿ
ಆಸ್ಪತ್ರೆ
ಸೇರಿದ್ದ
ಜಗನ್
ಅವರನ್ನು
ಕಾಣಲು
ಬಂದಿದ್ದ
ನೂರಾರು
ಮಂದಿ
ಅಭಿಮಾನಿಗಳು
ಭಾರಿ
ಗದ್ದಲ
ಉಂಟು
ಮಾಡಿದ್ದರು.
['ರಾಜ್ಯ
ಪಕ್ಷಿ'
ಹಂಚಿಕೊಂಡ
ಕರ್ನಾಟಕ,
ತೆಲಂಗಾಣ]
ಕೇಂದ್ರ ಸರ್ಕಾರದಿಂದ ಆಂಧ್ರಪ್ರದೇಶಕ್ಕೆ ವಿಶೇಷ ಪ್ಯಾಕೇಜ್ ಸಿಗುವ ತನಕ ನನ್ನ ಹೋರಾಟ ನಿಲ್ಲಿಸುವುದಿಲ್ಲ ಎಂದುವಿಪಕ್ಷ ನಾಯಕ ಜಗನ್ ಮೋಹನ್ ರೆಡ್ಡಿ ಘೋಷಿಸಿದ್ದಾರೆ. ಅದರೆ, ಮತ್ತೊಮ್ಮೆ ಜಗನ್ ಅವರು ಉಪವಾಸ ನಿರತರಾದರೆ ಅವರ ಮೂತ್ರದಲ್ಲಿ ಕೆಟೋನೆಸ್ ಪ್ರಮಾಣ ಆಧಿಕವಾಗಲಿದೆ, ಕಿಡ್ನಿ ವೈಫಲ್ಯ ಎದುರಿಸಬೇಕಾಗುತ್ತದೆ ಎಂದು ವೈದ್ಯರು ಎಚ್ಚರಿಸಿದ್ದಾರೆ. (ಐಎಎನ್ಎಸ್)