ಹೈದರಾಬಾದ್ : ನೊಂದ ದಲಿತ ವಿದ್ಯಾರ್ಥಿ ಆತ್ಮಹತ್ಯೆ, ವಿವಿ ಪ್ರಕ್ಷುಬ್ಧ
ಹೈದರಾಬಾದ್, ಜ.18: ಎಬಿವಿಪಿ ಮುಖಂಡರೊಬ್ಬರಿಗೆ ಹಲ್ಲೆ ಮಾಡಿದ ಆರೋಪದ ಮೇಲೆ ಅಮಾನತುಗೊಂಡಿದ್ದ 27 ವರ್ಷ ದಲಿತ ಸಂಶೋಧನಾ ವಿದ್ಯಾರ್ಥಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಇದರಿಂದಾಗಿ ಕೇಂದ್ರ ವಿವಿ ಆವರಣದಲ್ಲಿ ಭಾರಿ ಗದ್ದಲ, ಗೊಂದಲ, ಪ್ರತಿಭಟನೆ ನಡೆದಿದ್ದು, ಪರಿಸ್ಥಿತಿ ಕೈಮೀರಿದ್ದರಿಂದ ಸಿಆರ್ ಪಿಸಿ ಸೆಕ್ಷನ್ 144 ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಎಬಿವಿಪಿ
ಮುಖಂಡರೊಡನೆ
ಮುಖಾಮಖಿಯಾದ
12ದಿನಗಳ
ಬಳಿಕ
ಹೈದರಾಬಾದಿನ
ಕೇಂದ್ರ
ವಿವಿ
ಕ್ಯಾಂಪಸ್ನಲ್ಲಿರುವ
ಹಾಸ್ಟೆಲ್
ನ
ಕೋಣೆಯಲ್ಲಿ
ವಿದ್ಯಾರ್ಥಿ
ರೋಹಿತ್
ವೆಮುಲಾ
(27)
ನೇಣು
ಬಿಗಿದುಕೊಂಡು
ಸಾವನ್ನಪ್ಪಿದ್ದರು.
ರೋಹಿತ್
ಸೇರಿದಂತೆ
ಹೈದರಾಬಾದ್
ಕೇಂದ್ರ
ವಿವಿಯ
ಐದು
ವಿದ್ಯಾರ್ಥಿಗಳನ್ನು
ಕಳೆದ
ಆಗಸ್ಟ್ನಲ್ಲಿ
ಎಬಿವಿಪಿ
ಮುಖಂಡನಿಗೆ
ಹಲ್ಲೆ
ನಡೆಸಿದ್ದಾರೆಂಬ
ಆರೋಪದಲ್ಲಿ
ಅಮಾನತು
ಮಾಡಲಾಗಿತ್ತು.
Students
Orgs
protest
outside
HRD
Ministry
after
a
scholar
allegedly
committed
suicide
in
University
of
Hyderabad
pic.twitter.com/GSoRopqTDp
—
ANI
(@ANI_news)
January
18,
2016
ವಿದ್ಯಾರ್ಥಿ ರೋಹಿತ್ ಸಾವಿನ ಹಿನ್ನೆಲೆಯಲ್ಲಿ ವಿವಿ ಕ್ಯಾಂಪಸ್ನಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ ಎಸಗಲಾಗಿದೆ ಎಂದು ಹಲವಾರು ವಿದ್ಯಾರ್ಥಿ ಸಂಘಟನೆಗಳು ಉಪವಾಸ ಸತ್ಯಾಗ್ರಹ ನಡೆದಿದ್ದಾರೆ. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಹಾಗೂ ಅಂಬೇಡ್ಕರ್ ಸ್ಟೂಡೆಂಟ್ಸ್ ಅಸೋಸಿಯೇಷನ್ (ಎಎಸ್ಎ) ನಡುವಿನ ತಿಕ್ಕಾಟದಿಂದ ವಿವಿಯಲ್ಲಿ ಭಾರಿ ಗೊಂದಲ ಉಂಟಾಗಿದೆ.