ಗದಗ ಜಿಲ್ಲೆಯಲ್ಲಿ ಅಭಿವೃದ್ಧಿ ಪರ್ವ: ಸಚಿವ ಎಚ್.ಕೆ.ಪಾಟೀಲ
ಗದಗ, ಆಗಸ್ಟ್, 15- ಗದಗ ಜಿಲ್ಲೆಯಲ್ಲಿ ಎಲ್ಲರೂ ಹೆಮ್ಮೆ ಪಡುವ ಅಭಿವೃದ್ಧಿ ಕಾರ್ಯಗಳು ಬಹುತೇಕ ಪೂರ್ಣಗೊಳ್ಳುವ ಹಂತದಲ್ಲಿದ್ದು, ಜನರ ಬಳಕೆಗೆ ಅನುಕೂಲವಾಗುವಂತೆ ನೋಡಿಕೊಳ್ಳುವಲ್ಲಿ ಅಧಿಕಾರಿಗಳ ದಕ್ಷತೆ ಹಾಗೂ ಜನರ ಪಾಲ್ಗೊಳ್ಳುವಿಕೆ ಮುಖ್ಯವಾಗಿದೆ ಎಂದು ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ ನುಡಿದರು.
ಗದಗಿನ ಕೆ.ಎಚ್.ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ಸೋಮವಾರ ಜಿಲ್ಲಾಡಳಿತ ಏರ್ಪಡಿಸಿದ 70ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಜಿಲ್ಲೆಯ ಮಹತ್ವಾಕಾಂಕ್ಷೆ ಸಿಂಗಟಾಲೂರ ಯೋಜನೆ ಪೂರ್ಣಗೊಂಡು ಗದುಗಿನ ಭೀಷ್ಮ ಕೆರೆಗೆ ತುಂಗಭದ್ರೆ ಹರಿದು ಬರುತ್ತಿರುವುದು, ಗ್ರಾ.ಪಂ.ಗಳಲ್ಲಿ ಬಾಪೂಜಿ ಸೇವಾ ಕೇಂದ್ರಗಳನ್ನು ತೆರೆದು ಸರಕಾರದ ಸೇವೆಗಳನ್ನು ಮನೆ ಬಾಗಿಲಲ್ಲೆ ನೀಡುತ್ತಿರುವುದು. ಉಚಿತ ವೈ.ಫೈ, ಪರಿಶಿಷ್ಟ ಸಮುದಾಯದ ಅನುಕೂಲಕ್ಕಾಗಿ ಡಾ. ಬಿ.ಆರ್.ಅಂಬೇಡ್ಕರ ಭವನ, ವಾಲ್ಮೀಕಿ ಭವನ, ಸಾಹಿತ್ಯಾಸಕ್ತರ ಕನ್ನಡ ಸಾಹಿತ್ಯ ಭವನ ಹಾಗೂ ರಂಗಾಸಕ್ತರಿಗಾಗಿ ರಂಗ ಮಂದಿರಗಳ ಕಾರ್ಯ ಬಹುತೇಕ ಪೂರ್ಣಗೊಂಡಿವೆ. ಹೊಂಬಳದಲ್ಲಿನ ಪಶು ವೈದ್ಯಕೀಯ ಕಾಲೇಜು ಕಟ್ಟಡ ಪೂರ್ಣಗೊಂಡಿದೆ ಎಂದು ಅಭಿವೃದ್ಧಿ ಕಾರ್ಯಗಳನ್ನು ವಿವರಿಸಿದರು.
ಜಿಲ್ಲೆಯಲ್ಲಿ ಡಾ.ಬಾಬು ಜಗಜೀವನರಾಮ ಭವನ ನಿರ್ಮಾಣಗೊಳ್ಳಲಿದ್ದು, ಮುಂಡರಗಿಯಲ್ಲಿ ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಭವನ ನಿರ್ಮಾಣಕ್ಕೆ 1 ಕೋಟಿ ರು. ಒದಗಿಸಲಾಗಿದೆ. 29.80 ಕೋಟಿ ವೆಚ್ಚದಲ್ಲಿ ಪೊಲೀಸ್ ಅಧಿಕಾರಿ, ಸಿಬ್ಬಂದಿಗೆ 190 ನಿವಾಸಗಳನ್ನು ವಿವಿಧ ತಾಲೂಕು ಕೇಂದ್ರಗಳಲ್ಲಿ ನಿರ್ಮಿಸಲಾಗುತ್ತಿದೆ ಎಂದರು.
ಕ್ರಿಕೆಟ್ ಮೈದಾನ ನಿರ್ಮಾಣಕ್ಕಾಗಿ 12 ಎಕರೆ ಜಮೀನು ಖರೀದಿಸಿ ಕೆ.ಎಸ್.ಸಿ.ಎ.ಗೆ ಹಸ್ತಾಂತರಿಸಿದೆ. ಬಹು ನಿರೀಕ್ಷಿತ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ವಿಶ್ವವಿದ್ಯಾಲಯ ಸ್ಥಾಪನೆಗೆ ಭೂಮಿ ಖರೀದಿಸುವ ಕಾರ್ಯ ಪೂರ್ಣಗೊಂಡಿದೆ. ಗದಗ-ಬೆಟಗೇರಿ ನಗರದಲ್ಲಿ 6 ಸಾವಿರ ವಸತಿ ರಹಿತರ ಪಟ್ಟಿ ಮಾಡಿ ಅವರಿಗೆ ಸೂರು ಒದಗಿಸುವ ಕಾರ್ಯ ಆರಂಭಗೊಳ್ಳಲಿದೆ. ಜಿಲ್ಲೆಯ ಸಾಂಸ್ಕೃತಿಕ, ಪ್ರವಾಸಿ ಕೇಂದ್ರಗಳಿಗೆ ಭೇಟಿ ಅನುಕೂಲಕ್ಕಾಗಿ ಪ್ರವಾಸೋದ್ಯಮ ಇಲಾಖೆಯಿಂದ ಇಂದು 70 ಟ್ಯಾಕ್ಸಿಗಳನ್ನು ನಿರುದ್ಯೋಗ ಯುವಕರಿಗೆ ವಿತರಿಸಲಾಗುತ್ತಿದೆ ಎಂದರು.
ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಗದಗ ಜಿಲ್ಲೆ ತನ್ನದೇ ಮಹತ್ವದ ಕೊಡುಗೆ ನೀಡಿದೆ ಎಂದ ಸಚಿವರು, ಮುಂಡರಗಿ ಜೀವರಾಯ, ನರಗುಂದದ ಬಾಬಾಸಾಹೇಬ ಗಾಂಧೀಜಿ ಪ್ರಭಾವದಿಂದ ಸ್ವಾತಂತ್ರ್ಯದ ಕಿಚ್ಚಿನಲ್ಲಿ ಧುಮುಕಿದ ಆಲೂರು ವೆಂಕಟರಾವ್, ಹುಯಿಲಗೋಳ ನಾರಾಯಣರಾವ್, ಅಂದಾನಪ್ಪ ದೊಡ್ಡಮೇಟಿ, ವೆಂಕಟೇಶ ಮಾಗಡಿ.. ಹೀಗೆ ಅಸಂಖ್ಯಾತ ಹೋರಾಟಗಾರರು ಬಲಿದಾನ ನೀಡಿದ್ದಾರೆ ಎಂದು ನೆನಪಿಸಿದ ಸಚಿವ ಎಚ್.ಕೆ.ಪಾಟೀಲ ನಮನ ಸಲ್ಲಿಸಿದರು.
ಅಭಿವೃದ್ಧಿ
ಕಾರ್ಯಗಳ
ಲೋಕಾರ್ಪಣೆ
ಸನ್ನಿಹಿತ
:
ಗದಗ
ಜಿಲ್ಲೆಯಲ್ಲಿ
ಕುಡಿಯುವ
ನೀರು,
ಶೈಕ್ಷಣಿಕ,
ಸಮುದಾಯಗಳ
ಸೌಲಭ್ಯ
ಕುರಿತಂತೆ
ಮಹತ್ವದ
ಅಭಿವೃದ್ಧಿ
ಕಾಮಗಾರಿಗಳು
ಪೂರ್ಣಗೊಂಡಿವೆ.
ಅವುಗಳ
ಲೊಕಾರ್ಪಣೆ
ಕಾರ್ಯ
ಸನ್ನಿಹಿತವಾಗಿದೆ.
ಇವುಗಳಿಂದ
ಜಿಲ್ಲೆಯ
ಜನತೆಗೆ
ಹೆಚ್ಚಿನ
ಅನುಕೂಲವಾಗುವಂತೆ
ಅಧಿಕಾರಿಗಳು,
ಸಾರ್ವಜನಿಕರು
ಒಗ್ಗಟ್ಟಿನಿಂದ
ಕಾರ್ಯ
ಸಾಧಿಸಬೇಕೆಂದು
ಗದಗ
ಜಿಲ್ಲಾಧಿಕಾರಿ
ಎನ್.ಎಸ್.ಪ್ರಸನ್ನಕುಮಾರ
ಸಲಹೆ
ನೀಡಿದರು.
ಗದಗ ಜಿಲ್ಲಾಡಳಿತ ಭವನದದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಬರಗಾಲಕ್ಕೆ ಅವಕಾಶ ಕೊಡದೆ ಹಸಿರನ್ನು ಗಣನೀಯವಾಗಿ ಹೆಚ್ಚಿಸಲು ಸರಕಾರದ ಇಲಾಖೆಗಳ ಜೊತೆ ಸಾರ್ವಜನಿಕರು, ರೈತರು ಸಹಭಾಗಿತ್ವದಿಂದ ಕಾರ್ಯ ಮಾಡಬೇಕಾಗಿದೆ. ಸ್ವಚ್ಚ ಪರಿಸರ, ಸಾರ್ವಜನಿಕ ಆರೋಗ್ಯ, ಪ್ಲಾಸ್ಟಿಕ್ಮುಕ್ತ ಜಿಲ್ಲೆಯಾಗಿಸುವ ಸಂಕಲ್ಪಕ್ಕೆ ನಾವೆಲ್ಲ ಮುಂದಾಗಬೇಕು ಎಂದರು.
ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಸಂಜಯ ಶೆಟ್ಟೆಣ್ಣವರ, ಹೆಚ್ಚುವರಿ ಜಿಲ್ಲಾಧಿಕಾರಿ ಐ.ಜಿ.ಗದ್ಯಾಳ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರಮೇಶ ದೇಸಾಯಿ, ಉಪ ಕಾರ್ಯದರ್ಶಿ ಎಸ್.ಸಿ.ಮಹೇಶ, ಉಪ ವಿಭಾಗಾಧಿಕಾರಿ ಪಿ.ಎಸ್.ಮಂಜುನಾಥ, ತಹಶೀಲ್ದಾರ್ ಎಂ.ಬಿ.ಬಿರಾದಾರ ಇತರರು ಉಪಸ್ಥಿತರಿದ್ದರು.