ಹಾಸನ- ಮಾರನಹಳ್ಳಿ ರಸ್ತೆ ವಿಸ್ತರಣೆಗೆ 3 ಸಾವಿರ ಮರಕ್ಕೆ ಕೊಡಲಿ
ಹಾಸನ, ಸೆಪ್ಟೆಂಬರ್ 03 : ಹಾಸನ-ಮಾರನಹಳ್ಳಿ ವಿಭಾಗದ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಕಾಮಗಾರಿ ಶೀಘ್ರದಲ್ಲೇ ಆರಂಭವಾಗಲಿದೆ. ಈ ರಸ್ತೆ ಅಗಲೀಕರಣ ಕಾಮಗಾರಿಗೆ 3000ರ ಮರಗಳನ್ನು ಕಡಿಯಲಾಗುತ್ತಿದ್ದು, ಇದಕ್ಕೆ ಅರಣ್ಯ ಇಲಾಖೆ ಈಗಾಗಲೇ ಒಪ್ಪಿಗೆ ಕೊಟ್ಟಿದೆ.
ರಾಷ್ಟ್ರೀಯ
ಹೆದ್ದಾರಿ
ಅಭಿವೃದ್ಧಿ
ಪ್ರಾಧಿಕಾರ
ಹಾಸನ-ಮಾರನಹಳ್ಳಿ
ವಿಭಾಗದ
ರಾಷ್ಟ್ರೀಯ
ಹೆದ್ದಾರಿ
75ನ್ನು
ಚತುಷ್ಪಥ
ರಸ್ತೆಯನ್ನಾಗಿ
ಅಗಲೀಕರಣ
ಮಾಡಲಿದೆ.
ಅರಣ್ಯ
ಇಲಾಖೆ
ಒಪ್ಪಿಗೆ
ಪಡೆದಿರುವ
ಪ್ರಾಧಿಕಾರ,
ಮರಗಳನ್ನ
ಕತ್ತರಿಸಲು
ಈಗಾಗಲೇ
ಟೆಂಡರ್
ಆಹ್ವಾನಿಸಿದೆ.[ಬೆಂ-ಮೈಸೂರು
6
ಪಥದ
ರಸ್ತೆ
ಕಾಮಗಾರಿ
ನವೆಂಬರಿನಲ್ಲಿ
ಆರಂಭ]
ಹಾಸನದಿಂದ ಬಂಟ್ವಾಳ ಕ್ರಾಸ್ ವರೆಗಿನ ರಾಷ್ಟ್ರೀಯ ಹೆದ್ದಾರಿ 75ನ್ನು ಚತುಷ್ಪಥ ರಸ್ತೆಯಾಗಿ ಪರಿವರ್ತನೆ ಮಾಡಲಾಗುತ್ತದೆ. ಈ ರಸ್ತೆ ವಿಸ್ತರಣೆಗಾಗಿ 3,070 ಮರಗಳಿಗೆ ಕೊಡಲಿ ಪೆಟ್ಟು ಬೀಳಲಿದ್ದು, ಈ ಮರಗಳ ಮೌಲ್ಯ ಸುಮಾರು 1.4 ಕೋಟಿಯಾಗಿದೆ.[ಗೋವಾಕ್ಕೆ ಹೆದ್ದಾರಿ, 37 ಸಾವಿರ ಮರ ಕಾಪಾಡೋರು ಯಾರ್ರಿ?]
ಅರಣ್ಯ ಇಲಾಖೆ ಮರಗಳನ್ನು ಕತ್ತರಿಸಲು ಅನುಮತಿ ಮಾಡಿದೆ. ನಿಯಮಾವಳಿಗಳ ಪ್ರಕಾರ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ 1 ಮರದ ಬದಲಿಗೆ 10 ಗಿಡಗಳನ್ನು ನೆಡಬೇಕು ಎಂದು ಅರಣ್ಯ ಇಲಾಖೆ ಸೂಚನೆ ನೀಡಿದೆ. ಗಿಡಗಳನ್ನು ಅರಣ್ಯ ಇಲಾಖೆಯೇ ಒದಗಿಸಲಿದೆ.[ನಾವು ಎಲ್ಲಿ ಹೋಗಿ ಬಿದ್ದು ಸಾಯಬೇಕು ? ದಯವಿಟ್ಟು ತಿಳಿಸಿ]