ತಮಿಳುನಾಡಿಗೆ ಹೇಮಾವತಿ ನದಿ ನೀರು ಬಿಡುಗಡೆ, ಜೆಡಿಎಸ್ ಪ್ರತಿಭಟನೆ
ಹಾಸನ, ಸೆ. 12: ತಮಿಳುನಾಡಿಗೆ ಹೇಮಾವತಿ ಜಲಾಶಯದಿಂದ ನೀರು ಬಿಡುಗಡೆ ಮಾಡಲು ಕರ್ನಾಟಕ ಸರ್ಕಾರ ನಿರ್ಧರಿಸಿದೆ. ಸರ್ಕಾರದ ನಿರ್ಧಾರವನ್ನು ಖಂಡಿಸಿ ಹೇಮಾವತಿ ನದಿ ಪಾತ್ರದ ಜನರು ಹೋರಾಟಕ್ಕೆ ಮುಂದಾಗಿದ್ದಾರೆ.
ಮಾಜಿ ಪ್ರಧಾನಿ ದೇವೇಗೌಡ ಅವರು ಅಕ್ಟೋಬರ್ 18 ರ ನಂತರ ತಮ್ಮ ನಿರ್ಧಾರ ತಿಳಿಸುವುದಾಗಿ ಹೇಳಿದ್ದಾರೆ. ಈ ನಡುವೆ ಎಚ್ ಡಿ ರೇವಣ್ಣ ಅವರು ಸೆ. 16 ರಿಂದ ಪಾದಯಾತ್ರೆ ನಡೆಸುವುದಾಗಿ ಘೋಷಿಸಿದ್ದಾರೆ.
ರಾಜ್ಯ
ಸರ್ಕಾರದ
ಕ್ರಮ
ವಿರೋಧಿಸಿ
ಹಾಸನ
ಜೆಡಿಎಸ್
ಹೋರಾಟಕ್ಕೆ
ಮುಂದಾಗಿದೆ.
ಈಗಾಗಲೇ
ಭವಾನಿ
ರೇವಣ್ಣ
ಹಾಗೂ
ಪ್ರಜ್ವಲ್
ರೇವಣ್ಣ
ಅವರ
ನೇತೃತ್ವದಲ್ಲಿ
ಪ್ರತಿಭಟನೆ
ನದೆಸಲಾಗಿದೆ.
ಸೆ.16ರಿಂದ
ಗೊರೂರಿನ
ಹೇಮಾವತಿ
ಜಲಾಶಯದಿಂದ
ಬೆಂಗಳೂರಿನವರೆಗೆ
ಪಾದಯಾತ್ರೆ
ನಡೆಸಲು
ತೀರ್ಮಾನಿಸಲಾಗಿದೆ.
ಮಾಜಿ ಸಚಿವ ಎಚ್.ಡಿ.ರೇವಣ್ಣ ನೇತೃತ್ವದಲ್ಲಿ ಸೆ.16ರಿಂದ ಬೆಂಗಳೂರಿನವರೆಗೆ ಪಾದಯಾತ್ರೆ ಕೈಗೊಳ್ಳಲಾಗಿದೆ. ಕಾವೇರಿ ಅಚ್ಚುಕಟ್ಟು ಪ್ರದೇಶದ ಬೆಳೆ ನಷ್ಟಕ್ಕೆ ಎಕರೆಗೆ 50 ಸಾವಿರ ಪರಿಹಾರ ನೀಡುವಂತೆ ಒತ್ತಾಯಿಸಿ ಶಾಶ್ವತ ನೀರು ಒದಗಿಸುವಂತೆ ಆಗ್ರಹಿಸಲಾಗುತ್ತದೆ. ಪಾದಯಾತ್ರೆಯಲ್ಲಿ ಹಾಸನ ಜೆಡಿಎಸ್ ಮುಖಂಡರು, ರೈತ ಸಂಘಟನೆ ಮುಖ್ಯಸ್ಥರು ಪಾಲ್ಗೊಳ್ಳಲಿದ್ದಾರೆ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಹೇಳಿದರು.
ಸರ್ಕಾರದ
ನಿರ್ಲಕ್ಷ್ಯ
ಧೋರಣೆ,
ರೈತರ
ಬಗೆಗಿನ
ನಿಷ್ಕಾಳಜಿಯಿಂದ
ತಮಿಳುನಾಡಿಗೆ
ನೀರು
ಹರಿಯುತ್ತಿದೆ.
ನಮ್ಮಲ್ಲಿ
ಬೆಳೆದು
ನಿಂತಿರುವ
ಬೆಳೆಗೆ
ನೀರಿಲ್ಲ,
ಕುಡಿಯಲು
ನೀರಿಲ್ಲ.
ಇಂತಹ
ಪರಿಸ್ಥಿತಿ
ನಿರ್ಮಾಣಕ್ಕೆ
ಸರ್ಕಾರವೇ
ನೇರ
ಹೊಣೆ.
ಹೇಮಾವತಿ ಇಳಿಮುಖ: ಕಾವೇರಿ ನೀರು ಬಿಡುಗಡೆಗೆ ಸುಪ್ರೀಂ ಆದೇಶದ ಹಿನ್ನೆಲೆಯಲ್ಲಿ ಹೇಮಾವತಿ ಅಣೆಕಟ್ಟಿನಿಂದ ದಿನನಿತ್ಯ ಎಂಟೂವರೆ ಸಾವಿರ ಕ್ಯೂಸೆಕ್ಸ್ ನೀರು ಬಿಡುಗಡೆಯಾಗುತ್ತಿದ್ದು, ಜಿಲ್ಲೆಯ ಅನ್ನದಾತರಲ್ಲಿ ಆತಂಕ ಹೆಚ್ಚಾಗಿದೆ.
ಹೇಮಾವತಿ ಜಲಾಶಯ (ಅಣೆಕಟ್ಟಿನ ಎತ್ತರ 146 ಅಡಿಗಳು) ಒಟ್ಟು ಹೊರ ಹರಿವು ಒಟ್ಟು 12,880 ಕ್ಯೂಸೆಕ್ಸ್. ಜಲಾಶಯದ ಒಳ ಹರಿವು ಕೇವಲ 703 ಕ್ಯೂಸೆಕ್ಸ್. ದಿನೇ ದಿನೇ ಒಂದು ಟಿಎಂಸಿಗಿಂತ ಹೆಚ್ಚು ನೀರು ಇಳಿಮುಖವಾಗುತ್ತಿದೆ. ಇಂದಿನ ಗರಿಷ್ಠ ಮಟ್ಟ 2886 ಅಡಿ ಇದೆ. ಪೂರ್ಣ ನೀರಿನ ಮಟ್ಟ 2935 ಅಡಿಗಳು, ಕುಡಿಯುವ ನೀರಿಗಾಗಿ 2 ಟಿಎಂಸಿ ನೀರು ಬಳಕೆಯಾಗುತ್ತದೆ.