ಹಾಸನಾಂಬೆ ದರ್ಶನ ಪಡೆದ 10 ಲಕ್ಷ ಮಂದಿ, 2 ಕೋಟಿ ಆದಾಯ!
ವರ್ಷಕ್ಕೊಮ್ಮೆ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಮಾತ್ರ ಬಾಗಿಲು ತೆರೆದು ದರ್ಶನ ನೀಡುವ ಹಾಸನಾಂಬೆ ದೇಗುಲದ ಬಾಗಿಲು ನವೆಂಬರ್ 01ರ ಕಾರ್ತಿಕ ಮಾಸದ ಬಿದಿಗೆ ದಿನದಂದು ಮಧ್ಯಾಹ್ನ ಸುಮಾರು 2.41ರ ಸುಮಾರಿಗೆ ಮುಚ್ಚಲಾಗಿದೆ.
ಹಾಸನ, ನವೆಂಬರ್ 01: ವರ್ಷಕ್ಕೊಮ್ಮೆ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಮಾತ್ರ ಬಾಗಿಲು ತೆರೆದು ದರ್ಶನ ನೀಡುವ ಹಾಸನಾಂಬೆ ದೇಗುಲದ ಬಾಗಿಲು ನವೆಂಬರ್ 01ರ ಕಾರ್ತಿಕ ಮಾಸದ ಬಿದಿಗೆ ದಿನದಂದು ಮಧ್ಯಾಹ್ನ ಸುಮಾರು 2.41ರ ಸುಮಾರಿಗೆ ಮುಚ್ಚಲಾಗಿದೆ.
ಕರ್ನಾಟಕದ
ವೈಷ್ಣೋದೇವಿ
ಎಂದೇ
ಕರೆಸಿಕೊಳ್ಳುವ
ಹಾಸನಾಂಬೆಯ
ದರ್ಶನಕ್ಕೆ
ಈ
ಬಾರಿ
ರಾಜ್ಯ
ಹಾಗೂ
ದೇಶದ
ವಿವಿಧೆಡೆಗಳಿಂದ
ಸುಮಾರ್
10
ಲಕ್ಷಕ್ಕೂ
ಅಧಿಕ
ಭಕ್ತರು
ಆಗಮಿಸಿದ್ದರು.
ಕಳೆದ
ವರ್ಷ
9
ದಿನ
ಮಾತ್ರ
ದರ್ಶನ
ಭಾಗ್ಯ
ದೊರೆತರೆ
ಈ
ಬಾರಿ
13
ದಿನ
ಅವಕಾಶ
ಮಾಡಿಕೊಡಲಾಗಿತ್ತು.
[ಹಾಸನಾಂಬೆ
ಸ್ಥಳ
ಪುರಾಣ
ಓದಿ]
13 ದಿನದಲ್ಲಿ ಸುಮಾರು 2 ಕೋಟಿ ರೂ.ಗಳಿಗೂ ಹೆಚ್ಚು ಕಾಣಿಕೆ ಹಣ ಸಂಗ್ರಹವಾಗಿದೆ. ಶೀಘ್ರ ದರ್ಶನಕ್ಕೆ ವ್ಯಕ್ತಿಯೊಬ್ಬರಿಗೆ 300 ರೂ. ನಿಗದಿ ಮಾಡಲಾಗಿತ್ತು.
ಪ್ರತಿ
ವರ್ಷ
ಆಶ್ವೀಜ
ಮಾಸದ
ಹುಣ್ಣಿಮೆ
ನಂತರ
ಬರುವ
ಗುರುವಾರದಂದು
ದೇವಸ್ಥಾನದ
ಬಾಗಿಲು
ತೆರೆಯಲಾಗುತ್ತದೆ.ಈ
ಸಲ
ಗುರುವಾರ(ಅಕ್ಟೋಬರ್
20)ದಿಂದ
ನವೆಂಬರ್
1ರವರೆಗೆ
ಹಾಸನಾಂಬೆ
ದರ್ಶನ
ಭಾಗ್ಯ
ಭಕ್ತರಿಗೆ
ಲಭಿಸಿತ್ತು.
ಹಾಸನಾಂಬೆಯ ದರ್ಶನ ಪಡೆದ ಗಣ್ಯರಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ, ಗೃಹ ಸಚಿವ ಮತ್ತು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಮಾಜಿ ಸಚಿವ ರೇವಣ್ಣ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಸಂಸದೆ ಕರಂದ್ಲಾಜೆ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ, ಶಾಸಕ ಸಿ.ಟಿ.ರವಿ, ನಟ ಶಿರಾಜ್ಕುಮಾರ್ ಮತ್ತು ಅವರ ಪತ್ನಿ ಗೀತಾ, ವಿಧಾನ ಪರಿಷತ್ ಸದಸ್ಯೆ ತಾರಾ ಅನುರಾಧ ಮತ್ತು ಕುಟುಂಬದವರು ಪ್ರಮುಖರು.