ಕೊಂದವರು ಯಾರು?, ಕಲಬುರ್ಗಿ ಹತ್ಯೆ ತನಿಖೆಗೆ ವಿಶೇಷ ತಂಡ ರಚನೆ
ಧಾರವಾಡ, ಆ.30 : ಹಿರಿಯ ಸಂಶೋಧಕ, ಸಾಹಿತಿ ಎಂ.ಎಂ.ಕಲಬುರ್ಗಿ ಅವರ ಹತ್ಯೆ ಪ್ರಕರಣದ ತನಿಖೆಗೆ ವಿಶೇಷ ತಂಡವನ್ನು ರಚನೆ ಮಾಡಲಾಗಿದೆ. ಕಲಬುರ್ಗಿ ಅವರ ಮನೆಗೆ ಇಬ್ಬರು ದುಷ್ಕರ್ಮಿಗಳು ಬಂದಿದ್ದರು. ಅದರಲ್ಲಿ ಒಬ್ಬ ಮಾತ್ರ ಗುಂಡು ಹಾರಿಸಿದ್ದಾನೆ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಧಾರವಾಡದ
ಕಲ್ಯಾಣ
ನಗರದಲ್ಲಿರುವ
ಎಂ.ಎಂ.ಕಲಬುರ್ಗಿ
ಅವರ
ನಿವಾಸಕ್ಕೆ
ಭಾನುವಾರ
ಬೆಳಗ್ಗೆ
8.40ರ
ಸುಮಾರಿಗೆ
ಇಬ್ಬರು
ಯುವಕರು
ಬೈಕ್ನಲ್ಲಿ
ಆಗಮಿಸಿದ್ದರು.
ಅದರಲ್ಲಿ
ಒಬ್ಬ
ಮನೆಯ
ಕಾಲಿಂಗ್
ಬೆಲ್
ಒತ್ತಿದ್ದಾನೆ
ಮತ್ತು
ಆತನೇ
ಗುಂಡು
ಹಾರಿಸಿದ್ದಾನೆ.
ಮತ್ತೊಬ್ಬ
ಮನೆಯ
ಮುಂದೆ
ಬೈಕ್ನಲ್ಲಿ
ಕಾಯುತ್ತಿದ್ದ
ಎಂದು
ಪೊಲೀಸರಿಗೆ
ಮಾಹಿತಿ
ಸಿಕ್ಕಿದೆ.
[ಎಂಎಂ
ಕಲಬುರ್ಗಿ
ಅವರ
ಪರಿಚಯ]
ಘಟನೆಯ ಬಗ್ಗೆ ಮಾಹಿತಿ ಪಡೆದ ತಕ್ಷಣ ಪೊಲೀಸರು ತಕ್ಷಣವೇ ದುಷ್ಕರ್ಮಿಗಳಿಗಾಗಿ ಶೋಧ ಆರಂಭಿಸಿದ್ದಾರೆ. ಎಸಿಪಿ ಅವರ ನೇತೃತ್ವದಲ್ಲಿ ದುಷ್ಕರ್ಮಿಗಳ ಪತ್ತೆಗೆ ವಿಶೇಷ ತಂಡ ರಚನೆ ಮಾಡಲಾಗಿದೆ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಓಂ ಪ್ರಕಾಶ್ ಮಾಹಿತಿ ನೀಡಿದ್ದಾರೆ. [ಗುಂಡಿನ ದಾಳಿಗೆ ಕಲಬುರ್ಗಿ ಬಲಿ]
ಎಂ.ಎಂ.ಕಲಬುರ್ಗಿ ಅವರ ನಿವಾಸಕ್ಕೆ ಐಜಿಪಿ ಉಮೇಶ್ ಕುಮಾರ್ ಭೇಟಿ ನೀಡಿದ್ದಾರೆ. ಇಂದು ಸಂಜೆ ಮರಣೋತ್ತರ ಪರೀಕ್ಷೆ ನಡೆಸಿ, ಕುಟುಂಬದವರಿಗೆ ಮೃತದೇಹ ಹಸ್ತಾಂತರ ಮಾಡಲಾಗುತ್ತದೆ. ಸೋಮವಾರ ಬೆಳಗ್ಗೆ ಧಾರವಾಡದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.