ಮೋದಿ ಸರ್ಕಾರಕ್ಕೆ 1 ವರ್ಷ : ಹುಬ್ಬಳ್ಳಿ, ಮೈಸೂರಿನಲ್ಲಿ ಸಮಾವೇಶ
ಹುಬ್ಬಳ್ಳಿ, ಮೇ 29 : ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಒಂದು ವರ್ಷ ಪೂರ್ಣಗೊಳಿಸಿದ ಹಿನ್ನಲೆಯಲ್ಲಿ ಕರ್ನಾಟಕ ಬಿಜೆಪಿ ಎರಡು ಸಮಾವೇಶಗಳನ್ನು ಆಯೋಜಿಸಲಿದೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರಿಗೆ ಸಮಾವೇಶಕ್ಕೆ ಆಗಮಿಸುವಂತೆ ರಾಜ್ಯದ ನಾಯಕರು ಮನವಿ ಮಾಡಿದ್ದಾರೆ.
ಮೇ
ಅಂತ್ಯದಲ್ಲಿಯೇ
ರಾಜ್ಯದಲ್ಲಿ
ಸಮಾವೇಶ
ನಡೆಸಲು
ಬಿಜೆಪಿ
ನಾಯಕರು
ನಿರ್ಧರಿಸಿದ್ದರು.
ಆದರೆ,
ಗ್ರಾಮ
ಪಂಚಾಯಿತಿ
ಚುನಾವಣೆ
ಎದುರಾದ
ಕಾರಣ
ಜೂನ್
8ರ
ನಂತರ
ಸಮಾವೇಶ
ಆಯೋಜಿಸಲು
ತೀರ್ಮಾನಿಸಿದ್ದಾರೆ.
[ಪಂಚಾಯಿತಿ
ಫೈಟ್
:
ಮತದಾನ
ಆರಂಭ]
ಹುಬ್ಬಳ್ಳಿ ಮತ್ತು ಮೈಸೂರಿನಲ್ಲಿ ಪಕ್ಷ ಸಮಾವೇಶವನ್ನು ಆಯೋಜಿಸಲಿದೆ. ಈ ಸಮಾವೇಶದಲ್ಲಿ ಪಾಲ್ಗೊಳ್ಳಬೇಕು ಎಂದು ರಾಜ್ಯದ ನಾಯಕರು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರಿಗೆ ಮನವಿ ಮಾಡಿದ್ದಾರೆ. ಅಮಿತ್ ಶಾ ಭೇಟಿಯ ಬಗ್ಗೆ ಇನ್ನೂ ಅಂತಿಮ ನಿರ್ಧಾರ ಪ್ರಕಟಿಸಿಲ್ಲ. [ಆಟೋದರ 1 ರೂ., ಮೋದಿಗಾಗಿ 'ಪ್ರಭು' ಸೇವೆ!]
ಅಮಿತ್ ಶಾ ಅವರು ನಿಗದಿತ ವೇಳಾಪಟ್ಟಿಯಂತೆ ಮೇ 29ರಂದು ಬೆಂಗಳೂರಿಗೆ ಭೇಟಿ ನೀಡಬೇಕಾಗಿತ್ತು. ಆದರೆ, ರಾಜ್ಯದಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ನಡೆಯುತ್ತಿರುವುದರಿಂದ ಭೇಟಿಯನ್ನು ಮುಂದೂಡುವಂತೆ ರಾಜ್ಯದ ನಾಯಕರು ಸಲಹೆ ನೀಡಿದ್ದರು. [ಮೋದಿ ಸರ್ಕಾರದ ಸಾಧನೆಗಳು]
ಕಳೆವು ದಿನಗಳ ಹಿಂದೆ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಣಿ ಸಭೆ ಬೆಂಗಳೂರಿನಲ್ಲಿ ನಡೆದಾಗ ಪ್ರಧಾನಿ ನರೇಂದ್ರ ಮೋದಿ ಅವರ ಸಮಾವೇಶವನ್ನು ಬೆಂಗಳೂರಿನಲ್ಲಿ ಆಯೋಜಿಸಲಾಗಿತ್ತು. ಆದ್ದರಿಂದ ಈ ಬಾರಿ ಮೈಸೂರು ಮತ್ತು ಹುಬ್ಬಳ್ಳಿಯಲ್ಲಿ ಸಮಾವೇಶ ಹಮ್ಮಿಕೊಳ್ಳಲಾಗಿದೆ.