ಧಾರವಾಡದಲ್ಲಿ ಖಾಕಿ ದರ್ಪ, ಮಾನವೀಯತೆ ಮರೆತ ಪೊಲೀಸರು
ಧಾರವಾಡ, ಜುಲೈ 30 : ಮಹದಾಯಿ ನ್ಯಾಯಾಧೀಕರಣದ ತೀರ್ಪು ವಿರೋಧಿಸಿ ಪ್ರತಿಭಟನೆ ನಡೆಸಿದ್ದ ರೈತರ ಮೇಲೆ ಪೊಲೀಸರು ದರ್ಪ ಪ್ರದರ್ಶಿಸಿದ್ದಾರೆ. ರೈತರು, ಮಹಿಳೆಯರಿಗೆ ಲಾಠಿಯಿಂದ ಥಳಿಸಿದ್ದಾರೆ. ಪೊಲೀಸರ ವರ್ತನೆಯನ್ನು ಎಲ್ಲರೂ ಖಂಡಿಸುತ್ತಿದ್ದಾರೆ.
ಧಾರವಾಡ
ಜಿಲ್ಲೆಯ
ನವಲಗುಂದದ
ಬಳಿಯ
ಯಮನೂರ
ಗ್ರಾಮದಲ್ಲಿ
ಮುದುಕರು,
ಮಹಿಳೆಯರು,
ಗರ್ಭಿಣಿಯರ
ಮೇಲೆ
ಪೊಲೀಸರು
ಅಮಾನುಷವಾಗಿ
ಲಾಠಿ
ಪ್ರಹಾರ
ನಡೆಸಿದ್ದಾರೆ.
ಮನೆಗಳಿಗೆ
ನುಗ್ಗಿ
ಪುರುಷರನ್ನು
ಹೊರಗೆ
ಎಳೆದು
ತಂದು
ಲಾಠಿಯಿಂದ
ಕಾನೂನು
ಸುವ್ಯವಸ್ಥೆ
ಕಾಪಾಡುವ
ನೆಪದಲ್ಲಿ
ಥಳಿಸಿದ್ದಾರೆ.[ಕರ್ನಾಟಕ
ನಮ್ಮ
ದೊಡ್ಡಣ್ಣ,
ಶತ್ರುವಲ್ಲ:
ಗೋವಾ
ಸಿಎಂ]
ಖಾಕಿ ದರ್ಷದ ವಿಡಿಯೋ ನೋಡಿ [ಹುಬ್ಬಳ್ಳಿಯಲ್ಲಿ ಕರ್ನಾಟಕ ಬಂದ್ ಬಿಸಿ ಹೇಗಿದೆ?]
ಹುಬ್ಬಳ್ಳಿ, ಧಾರವಾಡ, ನವಲಗುಂದ ಸೇರಿದಂತೆ ವಿವಿಧ ಕಡೆ ನಡೆದ ಪ್ರತಿಭಟನೆ ನಡೆಸಿದ 100ಕ್ಕೂ ಹೆಚ್ಚು ರೈತರನ್ನು ಬಂಧಿಸಲಾಗಿದೆ. ಇವರಲ್ಲಿ ಯುವಕರು, ವಯೋವೃದ್ಧರು ಸೇರಿದ್ದಾರೆ. ನೆಡೆದಾಡಲು ಶಕ್ತಿ ಇಲ್ಲದ ವೃದ್ಧರನ್ನು ಪ್ರತಿಭಟನೆ ನಡೆಸಿದ್ದಾರೆ ಎಂದು ಬಂಧಿಸಲಾಗಿದೆ.[ಚಿತ್ರಗಳು : ಬೆಂಗಳೂರಿನಲ್ಲಿ ಕರ್ನಾಟಕ ಬಂದ್ ಬಿಸಿ]
ರೈತರ ಪ್ರತಿಭಟನೆಯನ್ನು ಹತ್ತಿಕ್ಕಲು ಬೆಂಗಳೂರಿನಿಂದ ಬಿಎಸ್ಎಫ್ ಸೇರಿದಂತೆ ಹೆಚ್ಚಿನ ಪೊಲೀಸ್ ಪಡೆಗಳನ್ನು ನರಗುಂದ ಮತ್ತು ನವಲಗುಂದಕ್ಕೆ ಕರೆಸಲಾಗಿದೆ. ಈ ಪಡೆಗಳು ಜನರಿಗೆ ರಕ್ಷಣೆ ಕೊಡುವ ಬದಲಾಗಿ ಹೋರಾಟ ನಿರತರ ಮೇಲೆ ಲಾಠಿ ಪ್ರಹಾರ ನಡೆಸುತ್ತಿದ್ದಾರೆ.
ಪೊಲೀಸರ ದೌರ್ಜನ್ಯದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರು, 'ಮಹಿಳೆಯರ, ವೃದ್ಧರ ಮೇಲೆ ಹಲ್ಲೆ ನಡೆಸಿರುವುದಕ್ಕೆ ವಿಷಾದ ವ್ಯಕ್ತ ಪಡಿಸುತ್ತೇನೆ. ಮಾಧ್ಯಮಗಳಲ್ಲಿ ನಾನು ನೋಡಿದ್ದೇನೆ. ಪೊಲೀಸರು ಸಂಯಮ ಮೀರಿ ವರ್ತಿಸಿದರೆ ಕ್ರಮ ಕೈಗೊಳ್ಳುವಂತೆ ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ' ಎಂದು ತಿಳಿಸಿದರು.