ಧಾರವಾಡದಲ್ಲಿ ಇಂದು ಕಲಬುರ್ಗಿ ಅಂತ್ಯಕ್ರಿಯೆ
ಧಾರವಾಡ, ಆ. 31 : ದುಷ್ಕರ್ಮಿಗಳ ಗುಂಡಿಗೆ ಬಲಿಯಾದ ಹಿರಿಯ ಸಂಶೋಧಕ ಎಂ.ಎಂ.ಕಲಬುರ್ಗಿ ಅವರ ಅಂತ್ಯಕ್ರಿಯೆ ಇಂದು ಧಾರವಾಡದಲ್ಲಿ ನಡೆಯಲಿದೆ. ಹತ್ಯೆ ಪ್ರಕರಣದ ತನಿಖೆಯನ್ನು ಸಿಐಡಿ ಅಥವ ಸಿಬಿಐಗೆ ವಹಿಸುವ ಸಾಧ್ಯತೆ ಇದೆ.
ಎಂ.ಎಂ.ಕಲಬುರ್ಗಿ
ಅವರ
ಪಾರ್ಥಿವ
ಶರೀರವನ್ನು
ಕರ್ನಾಟಕ
ಕಲಾ
ಕಾಲೇಜಿನ
ಮೈದಾನದಲ್ಲಿ
ಸಾರ್ವಜನಿಕ
ದರ್ಶನಕ್ಕಾಗಿ
ಇಡಲಾಗಿದೆ.
ಸೋಮವಾರ
ಬೆಳಗ್ಗೆ
11
ಗಂಟೆಯ
ತನಕ
ಅಂತಿಮ
ದರ್ಶನಕ್ಕೆ
ಅವಕಾಶ
ಕಲ್ಪಿಸಲಾಗಿದೆ.
ನಂತರ
ಅಂತ್ಯಕ್ರಿಯೆ
ನಡೆಯಲಿದೆ.
[ಕಲಬುರ್ಗಿ
ನಿಧನಕ್ಕೆ
ಕಂಬನಿ
ಮಿಡಿದ
ಗಣ್ಯರು]
ಭಾನುವಾರ ಸಂಜೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಧಾರವಾಡಕ್ಕೆ ತೆರಳಿ ಅಂತಿಮ ನಮನ ಸಲ್ಲಿಸಿದ್ದಾರೆ. ನಂತರ ಮಾತನಾಡಿದ ಅವರು, 'ಹತ್ಯೆ ಪ್ರಕರಣವನ್ನು ಸಿಐಡಿ ಅಥವಾ ಸಿಬಿಐ ತನಿಖೆಗೆ ವಹಿಸಲು ಸರ್ಕಾರ ಚಿಂತನೆ ನಡೆಸಿದೆ' ಎಂದು ಹೇಳಿದ್ದಾರೆ. [ಎಂಎಂ ಕಲಬುರ್ಗಿ ಹತ್ಯೆ]
1 ಗಂಟೆಗೆ ಅಂತ್ಯಕ್ರಿಯೆ : ಇಂದು ಬೆಳಗ್ಗೆ 11 ಗಂಟೆ ನಂತರ ಎಂ.ಎಂ.ಕಲಬುರ್ಗಿ ಅವರ ಪಾರ್ಥಿವ ಶರೀರವನ್ನು ಕಲ್ಯಾಣ ನಗರದಲ್ಲಿರುವ ಅವರ ಮನೆಗೆ ತೆಗೆದುಕೊಂಡು ಹೋಗಲಾಗುತ್ತದೆ. ಅಲ್ಲಿ ಕುಟುಂಬವದರ ಅಂತಿಮ ದರ್ಶನದ ಬಳಿಕ ಮಧ್ಯಾಹ್ನ 1 ಗಂಟೆ ವೇಳೆಗೆ ಅಂತ್ಯಕ್ರಿಯೆ ನಡೆಸಲು ನಿರ್ಧರಿಸಲಾಗಿದೆ.
ಕರ್ನಾಟಕ ವಿಶ್ವವಿದ್ಯಾಲಯದ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಯಲಿದ್ದು, ಇದಕ್ಕಾಗಿ ಸಕಲ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಕುಟುಂಬದ ಸದಸ್ಯರು, ರಾಜಕಾರಣಿಗಳು, ಸಾಹಿತಿಗಳು ಸೇರಿದಂತೆ ನೂರಾರು ಜನರು ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ.