ಕರ್ನಾಟಕ ವಿವಿ ಕುಲಪತಿ ವಾಲೀಕಾರ ಅಮಾನತು
ಬೆಂಗಳೂರು, ಅ.25 : ಭ್ರಷ್ಟಾಚಾರ ಮತ್ತು ಅಧಿಕಾರ ದುರುಪಯೋಗ ಪ್ರಕರಣದಲ್ಲಿ ಬಂಧಿತರಾಗಿರುವ ಕರ್ನಾಟಕ ವಿವಿ ಕುಲಪತಿ ಡಾ.ಎಚ್.ಬಿ.ವಾಲೀಕಾರ ಅವರನ್ನು ಅಮಾನತುಗೊಳಿಸಿ ರಾಜ್ಯಪಾಲರು ಆದೇಶ ಹೊರಡಿಸಿದ್ದಾರೆ. ಗುರುವಾರ ವಾಲೀಕಾರ ಅವರ ಜಾಮೀನು ಅರ್ಜಿಯನ್ನು ಧಾರವಾಡದ ಲೋಕಾಯುಕ್ತ ವಿಶೇಷ ನ್ಯಾಯಾಲಯ ತಿರಸ್ಕರಿಸಿತ್ತು.
ಲೋಕಾಯುಕ್ತ
ಪೊಲೀಸರು
ಕರ್ನಾಟಕ
ವಿವಿಯ
ಅವ್ಯವಹಾರ
ಪ್ರಕರಣಕ್ಕೆ
ಸಂಬಂಧಿಸಿದಂತೆ
ಡಾ.
ವಾಲೀಕಾರ
ಅವರನ್ನು
ಬಂಧಿಸಿದ್ದು,
ಅನಾರೋಗ್ಯದಿಂದ
ಬಳಲುತ್ತಿರುವ
ಅವರ
ಕಿಮ್ಸ್
ಆಸ್ಪತ್ರೆಯಲ್ಲಿ
ಚಿಕಿತ್ಸೆ
ಪಡೆಯುತ್ತಿದ್ದಾರೆ.
ರಾಜ್ಯಪಾಲ
ವಜೂಭಾಯಿ
ವಾಲಾ
ಅವರು
ವಾಲೀಕಾರ
ಅವರನ್ನು
ಅಮಾನತುಗೊಳಿಸಿ
ಶುಕ್ರವಾರ
ಆದೇಶ
ಹೊರಡಿಸಿದ್ದಾರೆ.
[ಕುಲಪತಿ
ವಾಲೀಕರ್
ಗಿಲ್ಲ
ಜಾಮೀನು]
ಕರ್ನಾಟಕ ವಿವಿಯಲ್ಲಿ 2010ರ ಜುಲೈ 25ರಿಂದ ಇತ್ತೀಚಿಗೆ ನಡೆದ ವಿಧಾನ ಪರಿಷತ್ ಚುನಾವಣೆ ಅವಧಿಯ ತನಕ ವಿವಿಯಲ್ಲಿ 110 ವಿವಿಧ ಹುದ್ದೆ ಗಳಿಗೆ ನಡೆದ ನೇಮಕಾತಿಯಲ್ಲಿ ಅವ್ಯವಹಾರವಾಗಿದೆ ಮತ್ತು ಡಾ.ವಾಲೀಕಾರ ಅವರು, ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ ಎಂಬ ಆರೋಪದ ಹಿನ್ನಲೆಯಲ್ಲಿ ಅವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.
ವಿವಿ ಕುಲಪತಿ ಡಾ.ಎಚ್.ಬಿ.ವಾಲೀಕಾರ, ಮೌಲ್ಯಮಾಪನ ಕುಲಸಚಿವ ಡಾ.ಎಚ್.ಟಿ.ಪೋತೆ, ಹಣಕಾಸು ಅಧಿಕಾರಿ ರಾಜಶ್ರೀ ಹಾಗೂ ಕುಲಪತಿಗಳ ಆಪ್ತ ಸಹಾಯಕ ಎಸ್.ಎಲ್.ಬೀಳಗಿ ಅವರನ್ನು ಲೋಕಾಯುಕ್ತ ಪೊಲೀಸರು ಹಗರಣಕ್ಕೆ ಸಂಬಂಧಿಸಿದಂತೆ ಬಂಧಿಸಿದ್ದರು. ಮೂವರು ಆರೋಪಿಗಳಿಗೆ ಜಾಮೀನು ದೊರಕಿದ್ದು, ವಾಲೀಕಾರ ಅವರಿಗೆ ಮಾತ್ರ ಜಾಮೀನು ನಿರಾಕರಿಸಲಾಗಿದೆ. [ಕರ್ನಾಟಕ ವಿವಿಯಲ್ಲಿ ಏನಿದು ಅಕ್ರಮ?]
ಹೊಸ ನೇಮಕಾತಿ : ರಾಜ್ಯಪಾಲ ವಜೂಬಾಯಿ ವಾಲಾ ಅವರ ನಿರ್ದೇಶನದಂತೆ ಕವಿವಿ ಪ್ರಭಾರಿ ಕುಲಪತಿಯಾಗಿ ಡಾ. ಎಸ್.ಎಸ್. ಹೂಗಾರ ಅವರನ್ನು ನೇಮಕ ಮಾಡಲಾಗಿದೆ. ಡಾ. ಎಸ್.ಎಸ್. ಹೂಗಾರ ಅವರು ಮೌಲ್ಯಮಾಪನ ಕುಲಸಚಿವರನ್ನಾಗಿ ಡಾ. ಜೆ.ಎಸ್. ಭಟ್, ಹಣಕಾಸು ಅಧಿಕಾರಿಯಾಗಿ ಡಾ. ಆರ್.ಎಲ್. ಹೈದರಾಬಾದಿಯನ್ನು ನೇಮಕ ಮಾಡಿದ್ದರು.
ಆದರೆ, ಗುರುವಾರ ಸಂಜೆ ಕವಿವಿ ಕುಲಸಚಿವರಿಗೆ ಉನ್ನತ ಶಿಕ್ಷಣ ಇಲಾಖೆಯಿಂದ ಮೈಸೂರು ವಿವಿಯ ಡಾ. ಎಂ. ಬಸವಣ್ಣ ಎಂಬವರನ್ನು ಮೌಲ್ಯಮಾಪನ ಕುಲಸಚಿವರಾಗಿ ನೇಮಕ ಮಾಡಿರುವ ಆದೇಶದ ಪ್ರತಿ ದೊರಕಿದೆ. ಆದ್ದರಿಂದ ಮೌಲ್ಯಮಾಪನ ಕುಲಸಚಿವರು ಯಾರು? ಎನ್ನುವ ಪ್ರಶ್ನೆ ಹುಟ್ಟಿಕೊಂಡಿದೆ.