ಕರ್ನಾಟಕ ವಿವಿಯಲ್ಲಿ ಜ.22ರಿಂದ 'ಧಾರವಾಡ ಸಾಹಿತ್ಯ ಸಂಭ್ರಮ'
ಧಾರವಾಡ, ಡಿಸೆಂಬರ್, 18: ಐತಿಹಾಸಿಕ ಕಾದಂಬರಿಗಳ ನೆನಪು, ಹಳಗನ್ನಡ ಸಾಹಿತ್ಯ ಓದು, ಇಂದಿಗೂ ಕಾಡುವ ಅಂದಿನ ಕೃತಿ, ಆತ್ಮಕಥೆಗಳ ಅವಲೋಕನ, ಕೃಷಿಗೆ ಸಂಬಂಧಿಸಿದ ದೀರ್ಘ ಚರ್ಚೆ, ದಿನಕ್ಕೊಂದು ಸಿನಿಮಾ ಪ್ರದರ್ಸನ, ಬಿ, ಜಯಶ್ರೀ ಅವರಿಂದ ರಂಗಗೀತೆಗಳು, 150 ಕ್ಕೂ ಹೆಚ್ಚಿನ ಹಿರಿಯ ಕಿರಿಯ ಸಾಹಿತಿಗಳ ಸಮಾಗಮ.
ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯ ಆವರಣದ ಸುವರ್ಣ ಮಹೋತ್ಸವ ಭವನದಲ್ಲಿ ಜನವರಿ 22ರಿಂದ ಮೂರು ದಿನಗಳ ಕಾಲ ಜರುಗುವ 'ಧಾರವಾಡ ಸಾಹಿತ್ಯ ಸಂಭ್ರಮ 4ನೇ ಆವೃತ್ತಿ' ಕಾರ್ಯಕ್ರಮದಲ್ಲಿ ಈ ಮೇಲಿನ ಎಲ್ಲಾ ಸಂಭ್ರಮ ಕಂಡು ಬರಲಿದೆ.[ತೇಜಸ್ವಿನಿ ಹೆಗಡೆ ಕಥಾಸಂಕಲನ ಬಿಡುಗಡೆಗೆ ಬರ್ತೀರಿ ತಾನೆ?]
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಕರ್ನಾಟಕ ವಿಶ್ವ ವಿದ್ಯಾಲಯದ ಸಮಾಗಮದಲ್ಲಿ ಈ ಸಾಹಿತ್ಯ ಸಂಭ್ರಮ ಜರುಗಲಿದ್ದು, ಈ ಸಮಯದಲ್ಲಿ ಜಿ.ಎಸ್ ಅಮೂರ, ಎಸ್ .ಶೆಟ್ಟರ್, ಸಿದ್ದಲಿಂಗಯ್ಯ, ರಾಜೇಂದ್ರ ಚೆನ್ನಿ, ಟಿ.ಎನ್ ಸೀತಾರಾಮ್, ಸಿನಿಮಾ ನಿರ್ದೇಶಕ. ಎಂ,ಎಸ್ ಸತ್ಯು, ಜಯಂತ್ ಕಾಯ್ಕಿಣಿ, ಆರ್. ಗಣೇಶ್, ಬಿ,ಸುರೇಶ್, ಬೊಳುವಾರು ಮಹಮ್ಮದ್ ಕುಂಞ, ಲತಾ ರಾಜಶೇಖರ್ ಹೇಗೆ ಹಲವಾರು ಮಹನೀಯರು ಆಗಮಿಸಿಲಿದ್ದಾರೆ.[ಕನ್ನಡ ಸಾಹಿತಿಗಳ ಅಲಿಯಾಸ್ ಹೆಸರು ಕಾವ್ಯನಾಮಗಳ್]
ಸಾಹಿತ್ಯ ಹಬ್ಬದಲ್ಲಿ ನೀವು ಒಬ್ಬರಾಗಬೇಕಾದರೆ ಡಿಸೆಂಬರ್ 21ರಿಂದ ನೋಂದಾವಣಿ ಮಾಡಿಕೊಳ್ಳಲು ಅವಕಾಶ ಕಲ್ಪಸಲಾಗಿದೆ. www.dharwadsahityasambrama.com ಅಥವಾ ಟ್ರಸ್ಟ್ ಕಚೇರಿ ಸಂಪರ್ಕಿಸಿ, ಅರ್ಜಿ ಪಡೆದು 750 ಶುಲ್ಕ ತುಂಬಿ ನೋಂದಾಯಿಸಿಕೊಳ್ಳಿ