ನರೇಂದ್ರ ಮೋದಿ ಆಗಮನ, ಹುಬ್ಬಳ್ಳಿ ತುಂಬ ವಿಶೇಷ ಗಮನ
ಹುಬ್ಬಳ್ಳಿ,ಮೇ 28: ಪ್ರಧಾನಿ ನರೇಂದ್ರ ಮೋದಿ ನಾಳೆ ರವಿವಾರ ಮೇ 29 ರಂದು ಬೆಳಗ್ಗೆ 11 ಗಂಟೆಗೆ ನಗರದ ವಿಮಾನ ನಿಲ್ದಾಣಕ್ಕೆ ವಿಶೇಷ ವಿಮಾನದಲ್ಲಿ ಬಂದಿಳಿಯಲಿದ್ದಾರೆ.
ಎಮ್ ಡಿ ಎ ಸರಕಾರ 2 ವರ್ಷ ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ದಾವಣಗೆರೆಯಲ್ಲಿ ಆಯೋಜಿಸಿರುವ ವಿಕಾಸ ಪರ್ವ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಲಿರುವ ಮೋದಿ, ಹುಬ್ಬಳ್ಳಿಯಿಂದ ವಿಶೇಷ ಹೆಲಿಕಾಪ್ಟರ್ ಮೂಲಕ ದಾವಣಗೆರೆಗೆ ತೆರಳಲಿದ್ದಾರೆ.[ರಾಜನ್ ನೇಮಕ ಮಾಧ್ಯಮಗಳಿಗೆ ಸಂಬಂಧಿಸಿಲ್ಲ: ಮೋದಿ]
ಕೇಂದ್ರ ಸರ್ಕಾರದ ಸಾಧನೆಯನ್ನು ಬಿಂಬಿಸಲು ದಾವಣಗೆರೆಯಲ್ಲಿ ಮೇ 29ರ ಸಂಜೆ 4 ಗಂಟೆಗೆ ಮೆರವಣಿಗೆ ಮತ್ತು ಸಮಾವೇಶ ಆಯೋಜನೆ ಮಾಡಲಾಗಿದೆ. ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ದಾವಣಗೆರೆ ಸದ್ಯ ಕೇಸರಿಮಯವಾಗಿ ಬದಲಾಗಿದೆ.
ವಿಶೇಷ ಕಾರು : ದಾವಣಗೆರೆಯ ಹೆಲಿಪ್ಯಾಡ್ ನಿಂದ ಸಭೆ ನಡೆಯುವ ಸ್ಥಳದವರೆಗೂ ಮತ್ತು ಪ್ರಧಾನಿ ಸಂಚರಿಸಲು ದೆಹಲಿಯಿಂದ ವಿಶೇಷ ಬುಲೆಟ್ ಪ್ರೂಫ್ ಕಾರು ಬಂದಿದೆ. ಈ ಕಾರನ್ನು ದೆಹಲಿಯಿಂದ ವಿಶೇಷ ಭದ್ರತೆಯಲ್ಲಿ ತರಲಾಗಿದೆ. ಈಗಾಗಲೇ ಕಾರು ದಾವಣಗೆರೆ ತಲುಪಿದೆ.[ಇರಾನ್ ಜತೆ ಕರಾರು, ಈಗ ಪಾಕ್ ಮಾಡಲಿ ತಕರಾರು?]
ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಭಾರೀ ಭದ್ರತೆ : ಪ್ರಧಾನಿ ಮೋದಿ ಆಗಮನದ ಹಿನ್ನೆಲೆಯಲ್ಲಿ ನಗರದ ವಿಮಾನ ನಿಲ್ದಾಣಕ್ಕೆ ಭಾರೀ ಭದ್ರತೆ ಒದಗಿಸಲಾಗಿದೆ ಎಂದು ಹು-ಧಾ ಪೊಲೀಷ್ ಕಮೀಷನರ್ ಪಾಂಡುರಂಗ ರಾಣೆ ಹೇಳಿದ್ದಾರೆ. ಪ್ರಧಾನಿ ಹುಬ್ಬಳ್ಳಿಗೆ ಬಂದಿಳಿಯುವ ಕಾರಣಕ್ಕೆ ಎರಡು ಸೇನಾ ಹೆಲಿಕಾಪ್ಟರ್ ಗಳು ಆಗಮಿಸಿದ್ದು ನಗರದ ಮೇಲೆ ಗಸ್ತು ತಿರುಗುತ್ತಿವೆ.[ಮೇ 29ರಂದು ದಾವಣಗೆರೆಯಲ್ಲಿ ಮೋದಿ ಸಮಾವೇಶ]
ಮೂವರು ಡಿಸಿಪಿ, ನಾಲ್ವರು ಎಸಿಪಿ, ಹದಿನೈದು ಸಿಪಿಐ, 23 ಪಿಎಸ್ಐ, 41 ಎಎಸ್ಐ, 73 ಮುಖ್ಯಪೇದೆ, 433 ಪೊಲೀಸ್ ಪೇದೆ, 24 ಮಹಿಳಾ ಪೇದೆ, 1, ಚನ್ನಮ್ಮ ವಾಹನ, 1 ಶಿವಾಜಿ ವಾಹನ, 7 ಸಿಎಆರ್, 10 ಕೆಎಸ್ಆರ್ ಪಿ ತುಕಡಿಗಳನ್ನು ಭದ್ರತೆಗೆ ನಿಯೋಜಿಸಲಾಗಿದೆ.