'ಸೋಲಿನ ಭೀತಿಯಿಂದ ಚುನಾವಣೆ ಮುಂದೂಡುತ್ತಿದೆ ಸರ್ಕಾರ'
ಹುಬ್ಬಳ್ಳಿ, ಜನವರಿ 12 : 'ಚುನಾವಣಾ ಆಯೋಗಕ್ಕೆ ತಪ್ಪು ಮಾಹಿತಿ ನೀಡುವ ಮೂಲಕ ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಯನ್ನು ಮುಂದೂಡಲು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಕುತಂತ್ರ ಮಾಡಿದೆ' ಎಂದು ಮಾಜಿ ಸಚಿವ ಗೋವಿಂದ ಕಾರಜೋಳ ಆರೋಪಿಸಿದ್ದಾರೆ.
ಹುಬ್ಬಳ್ಳಿಯಲ್ಲಿ
ಸೋಮವಾರ
ಮಾತನಾಡಿದ
ಗೋವಿಂದ
ಕಾರಜೋಳ
ಅವರು,
'ಹೊಸ
ಪಂಚಾಯಿತಿ
ರಚನೆ
ಮತ್ತು
ಮಾರ್ಪಾಡಿನ
ಕುರಿತು
ರಾಜ್ಯ
ಸರ್ಕಾರ
ಚುನಾವಣಾ
ಆಯೋಗಕ್ಕೆ
ತಪ್ಪು
ಮಾಹಿತಿ
ನೀಡಿರುವುದರಿಂದ
ಚುನಾವಣೆಯನ್ನು
ನಡೆಸುವುದು
ಸಾಧ್ಯವಿಲ್ಲವೆನ್ನುವಂತಾಗಿದೆ'
ಎಂದು
ದೂರಿದರು.
[ತಾಲೂಕು,
ಜಿಲ್ಲಾ
ಪಂಚಾಯಿತಿ
ಚುನಾವಣೆ,
ವೆಚ್ಚ
ನಿಗದಿ]
'ಚುನಾವಣೆಯಲ್ಲಿ ಸೋಲುವ ಭೀತಿಯಲ್ಲಿರುವ ಕಾಂಗ್ರೆಸ್ ಚುನಾವಣೆ ಮುಂದೂಡುತ್ತಿದೆ. ಪಂಚಾಯತ್ ರಾಜ್ ಇಲಾಖೆಯಲ್ಲಿ 15 ಸಾವಿರ ಕೋಟಿ ರೂ.ಗಳ ಅನುದಾನದ ಯೋಜನೆಗಳು ಕಾರ್ಯಗತಗೊಂಡಿಲ್ಲ. 4 ಸಾವಿರ ಶುದ್ಧ ನೀರಿನ ಘಟಕ ಸ್ಥಾಪಿಸುತ್ತೇವೆ ಎಂದು ಸಚಿವ ಎಚ್.ಕೆ.ಪಾಟೀಲ ಹೇಳಿದ್ದರು. ಆದರೆ, ಇದುವರೆಗೂ ನಿಗದಿತ ಗುರಿ ತಲುಪಿಲ್ಲ' ಎಂದರು. [ಚುನಾವಣೆ ಮೈತ್ರಿ ಬಗ್ಗೆ ದೇವೇಗೌಡರು ನೀಡಿದ ಸುಳಿವೇನು?]
'ಕೇಂದ್ರ ಸರ್ಕಾರ ವಿದ್ಯುತ್ ವಿತರಣೆ ಮತ್ತು ಸುಧಾರಣೆಗೆ ನೀಡಿದ 3,800 ಕೋಟಿ ರೂ.ಗಳನ್ನು ಇದುವರೆಗೂ ಬಳಸಿಕೊಂಡಿಲ್ಲ. ರಾಜ್ಯಾದ್ಯಂತ ವಿದ್ಯುತ್ ಕಳ್ಳತನ ಅವ್ಯಾಹತವಾಗಿ ನಡೆದಿದೆ. ರಾಜ್ಯದಲ್ಲಿ ಒಟ್ಟು 7 ಸಾವಿರ ಮೆಗಾವ್ಯಾಟ್ ವಿದ್ಯುತ್ ಲಭ್ಯವಿದೆ. ಆದರೆ, 10 ಸಾವಿರ ಮೆಗಾವ್ಯಾಟ್ಗೆ ಬೇಡಿಕೆ ಇದೆ. ಇಂಧನ ಸಚಿವರು ವಿದ್ಯುತ್ ಕೊರತೆ ನೀಗಿಸಲು ಕ್ರಮ ಕೈಗೊಂಡಿಲ್ಲ' ಎಂದು ದೂರಿದರು. [ಪಂಚಾಯತ್ ಪ್ರತಿನಿಧಿಗಳಿಗೆ ಸರ್ಕಾರದ ಬಂಪರ್ ಕೊಡುಗೆ]
'ಬಿಜೆಪಿಯ ಸುವರ್ಣ ವಿಕಾಸ ಗ್ರಾಮ ಯೋಜನೆಯನ್ನು ಕಾಂಗ್ರೆಸ್ ಸರ್ಕಾರವು ಗ್ರಾಮ ವಿಕಾಸ ಯೋಜನೆ ಎಂದು ಬದಲಾವಣೆ ಮಾಡಿ ತನ್ನದೇ ಯೋಜನೆ ಎಂದು ಕೊಚ್ಚಿಕೊಳ್ಳುತ್ತಿದೆ. ಪಂಚಾಯತ್ ರಾಜ್ ಇಲಾಖೆಯನ್ನು ಸಚಿವ ಎಚ್.ಕೆ.ಪಾಟೀಲ್ ಅವರು ನೋಡಿಕೊಳ್ಳುತ್ತಿದ್ದಾರೆ. ಆದ್ದರಿಂದ, ಅನುದಾನ ಬಿಡುಗಡೆ ಮಾಡದೆ ಸಿದ್ದರಾಮಯ್ಯ ಅವರು ಪರೋಕ್ಷವಾಗಿ ಪಾಟೀಲರು ಬೆಳೆಯದಂತೆ ಮಾಡುತ್ತಿದ್ದಾರೆ' ಎಂದು ಆರೋಪಿಸಿದರು.
ಸದ್ಯ, ಇರುವ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಸದಸ್ಯರ ಅವಧಿ ಜನವರಿ ಅಂತ್ಯದಲ್ಲಿ ಕೊನೆಗೊಳ್ಳಲಿದೆ. ರಾಜ್ಯದ ಒಟ್ಟು 176 ತಾಲೂಕು ಪಂಚಾಯಿತಿಯ 3,902 ಸ್ಥಾನಗಳಿಗೆ ಹಾಗೂ 30 ಜಿಲ್ಲಾ ಪಂಚಾಯಿತಿಗಳ 1,083 ಸ್ಥಾನಗಳಿಗೆ ಚುನಾವಣೆ ನಡೆಯಬೇಕಾಗಿದೆ.