ಫೆ. 14 : ಪ್ರೇಮಿಗಳಿಗೆ ಎಚ್ಚರಿಕೆ ಕೊಟ್ಟ ಮುತಾಲಿಕ್
ಹುಬ್ಬಳ್ಳಿ, ಫೆ. 11 : 'ನಮ್ಮ ದೇಶದ ಸಂಸ್ಕೃತಿಗೆ ವಿರುದ್ಧವಾದ ಪ್ರೇಮಿಗಳ ದಿನವನ್ನು ಆಚರಿಸುವವರು ಕಂಡು ಬಂದರೆ ತಾಳಿ ಕಟ್ಟಿಸಿ ಮದುವೆ ಮಾಡಿಸುತ್ತೇವೆ' ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಎಚ್ಚರಿಕೆ ನೀಡಿದ್ದಾರೆ. ಫೆ.14ರಂದು ತಂದೆ-ತಾಯಿಯನ್ನು ಪೂಜಿಸಿ ಎಂದು ಅವರು ಕರೆ ನೀಡಿದ್ದಾರೆ.
ಬುಧವಾರ
ಹುಬ್ಬಳ್ಳಿಯಲ್ಲಿ
ಪತ್ರಿಕಾಗೋಷ್ಠಿ
ನಡೆಸಿದ
ಪ್ರಮೋದ್
ಮುತಾಲಿಕ್,
ಪ್ರೇಮಿಗಳ
ದಿನವನ್ನು
'ಮಾತಾಪಿತ
ಪೂಜನೀಯ
ದಿನಾಚರಣೆ'ಯಾಗಿ
ಆಚರಣೆ
ಮಾಡುವಂತೆ
ಕರೆ
ನೀಡಿದರು.
ನಮ್ಮ
ಸಂಸ್ಕೃತಿಗೆ
ವಿರುದ್ಧವಾದ
ಪ್ರೇಮಿಗಳ
ದಿನಾಚರಣೆಯನ್ನು
ಆಚರಣೆ
ಮಾಡಬಾರದು
ಎಂದರು.
[ಪ್ರೇಮಿಗಳೇ
ಎಚ್ಚರ...
ಸಿಕ್ಕಿಬಿದ್ದರೆ
ಮದುವೆ
ಗ್ಯಾರಂಟಿ]
ಪ್ರೇಮಿಗಳ ದಿನವನ್ನು ಆಚರಿಸುವವರು ಕಂಡು ಬಂದರೆ ತಾಳಿ ಕಟ್ಟಿಸಿ ಮದುವೆ ಮಾಡಿಸುತ್ತೇವೆ ಎಂದು ಎಚ್ಚರಿಕೆ ನೀಡಿದ ಮುತಾಲಿಕ್, ಪ್ರೇಮಿಗಳ ದಿನವನ್ನು ಆಚರಣೆ ಮಾಡುವ ಬದಲು ತಂದೆ-ತಾಯಿಗಳನ್ನು ಪೂಜಿಸಿ ಎಂದು ಹೇಳಿದರು. [ಪ್ರೇಮಿಗಳ ದಿನ ಸರ್ಕಾರದ ಆದೇಶವೇನು?]
ಛತ್ತೀಸ್ಗಢ್ ಸರ್ಕಾರ ಈಗಾಗಲೇ ಫೆ. 14ನ್ನು 'ಮಾತಾಪಿತೃ ದಿನ'ವಾಗಿ ಆಚರಣೆ ಮಾಡಬೇಕೆಂದು ಆದೇಶ ಹೊರಡಿಸಿದೆ. ಎಲ್ಲ ಸರ್ಕಾರಿ ಶಾಲೆಗಳಲ್ಲಿ ಈ ದಿನವನ್ನು ಆಚರಣೆ ಮಾಡಬೇಕು. ಮಕ್ಕಳು ಪಾಲಕರಿಗೆ ಪೂಜೆ ಮಾಡಬೇಕು ಎಂದು ಸರ್ಕಾರ ಸೂಚನೆ ನೀಡಿದೆ.ಮತ್ತೊಂದೆಡೆ ಹಿಂದೂ ಮಹಾಸಭಾದ ರಾಷ್ಟ್ರಾಧ್ಯಕ್ಷ ಚಂದ್ರ ಪ್ರಕಾಶ್ ಕೌಶಿಕ್ ಅವರು ಪ್ರೇಮಿಗಳ ದಿನಾಚರಣೆ ಮಾಡಿದರೆ ಮದುವೆ ಮಾಡಿಸುತ್ತೇವೆ ಎಂದು ಈಗಾಗಲೇ ಘೋಷಿಸಿದ್ದಾರೆ.