ಧಾರವಾಡ : ಯೋಗೇಶ ಗೌಡ ಕೊಲೆ, ಐವರ ಬಂಧನ
ಹುಬ್ಬಳ್ಳಿ, ಜೂನ್ 17 : ಧಾರವಾಡ ಜಿಲ್ಲಾ ಪಂಚಾಯಿತಿ ಬಿಪಿಪಿ ಸದಸ್ಯ ಯೋಗೇಶ ಗೌಡ ಅವರ ಕೊಲೆ ಪ್ರಕರಣವನ್ನು ಪೊಲೀಸರು ಬೇಧಿಸಿದ್ದಾರೆ. ಜೂನ್ 15ರ ಮುಂಜಾನೆ ಯೋಗೇಶ್ ಗೌಡ ಕೊಲೆ ನಡೆದಿತ್ತು.
ಶುಕ್ರವಾರ
ಸಂಜೆ
ಪತ್ರಿಕಾಗೋಷ್ಠಿ
ನಡೆಸಿದ
ಹುಬ್ಬಳ್ಳಿ-ಧಾರವಾಡ
ಪೊಲೀಸ್
ಆಯುಕ್ತ
ಪಾಂಡುರಂಗ
ರಾಣೆ
ಅವರು
ಈ
ಕುರಿತು
ಮಾಹಿತಿ
ನೀಡಿದರು.
ಹತ್ಯೆಗೆ
ಸಂಬಂಧಿಸಿದಂತೆ
ಬಸವರಾಜ
ಮುತ್ತಗಿ
(37),
ವಿಕ್ರಂ
ಬಳ್ಳಾರಿ
(26),
ವಿನಾಯಕ
ಕಟಗಿ
(34),
ಕೀರ್ತಿಕುಮಾರ
ಕುರಹಟ್ಟಿ
(25),
ಸಂದೀಪ್
ಅಲಿಯಾಸ್
ಸ್ಯಾಂಡಿ
ಸವದತ್ತಿ
(28)
ಎಂಬುವವರನ್ನು
ಬಂಧಿಸಲಾಗಿದೆ.
[ಧಾರವಾಡದಲ್ಲಿ
ಜಿಲ್ಲಾ
ಪಂಚಾಯತಿ
ಸದಸ್ಯನ
ಹತ್ಯೆ]
ಜಮೀನು ವಿವಾದದಿಂದಾಗಿ ಕೊಲೆ : ನಾಗೇಶ ಎಂಬುವವರಿಗೆ ಸೇರಿದ 40 ಎಕರೆ ಜಮೀನು ಧಾರವಾಡ ಬಳಿಯ ಬೆಳ್ಳಿಗಟ್ಟಿ ಗ್ರಾಮದಲ್ಲಿತ್ತು. ಇದರಲ್ಲಿ 25.8 ಎಕರೆ ನೋಟರಿಯಾಗಿತ್ತು. ಉಳಿದ ಜಾಗದಲ್ಲಿ 9 ಎಕರೆಯನ್ನು ಯೋಗೇಶ ಗೌಡ ಖರೀದಿಸಿದ್ದರು. [ಯೋಗೇಶಗೌಡ ಕೊಲೆ ಹಿಂದೆ ಕಾಣದ ಕೈ ಕೈವಾಡ]
ಆದರೆ, ಅದರೊಂದಿಗೆ 15 ಎಕರೆ ಜಮೀನು ಒತ್ತುವರಿ ಮಾಡಿಕೊಂಡಿದ್ದರು. ಇದೇ ಸಮಯದಲ್ಲಿ ಕನ್ನಡಪರ ಸಂಘಟನೆಯೊಂದರ ಮುಖ್ಯಸ್ಥ ಮತ್ತು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರ ವಿನಯ ಕುಲಕರ್ಣಿ ಅವರ ಆಪ್ತನಾಗಿದ್ದ ಬಸವರಾಜ ಮುತ್ತಗಿ ನಾಗೇಶ ಅವರಿಂದ 5 ಎಕರೆ ಜಮೀನು ಖರೀದಿಸಿದ್ದ.
ತನ್ನ ಜಮೀನನ್ನು ಖರೀದಿಸಿದರೆ ಕೊಲೆ ಮಾಡುವುದಾಗಿ ಯೋಗೇಶ ಗೌಡ ಬಸವರಾಜ ಮುತ್ತಗಿಗೆ ಬೆದರಿಕೆ ಹಾಕಿದ್ದ. ಈ ಸೇಡಿನಿಂದಾಗಿ ಯೋಗೇಶ ಗೌಡನನ್ನು ಕೊಲೆ ಮಾಡಲಾಗಿದೆ.
ಬಸವರಾಜ ಮುತ್ತಗಿ ಅಪರಾಧ ಶಾಸ್ತ್ರದಲ್ಲಿ ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದಿದ್ದ. ರಿಯಲ್ ಎಸ್ಟೇಟ್ ವ್ಯವಹಾರ ಮಾಡುವುದರೊಂದಿಗೆ ಸಾಮಾಜಿಕ ಕಾರ್ಯಗಳನ್ನು ಕೂಡ ಮಾಡುತ್ತಿದ್ದ.