ಹುಬ್ಬಳ್ಳಿಯಲ್ಲಿ ಯುವಕನಿಗೆ ಚಾಕು ಇರಿತ, ತಿಂಗಳಾಂತ್ಯಕ್ಕೆ 5ನೇ ಕೊಲೆ
ಹುಬ್ಬಳ್ಳಿ,ಮಾರ್ಚ್,31: ಯುವಕರ ನಡುವೆ ನಡೆದ ಸಣ್ಣ ವಾಗ್ವಾದ ದ್ವೇಷವಾಯ್ತು, ದ್ವೇಷವೂ ಕೊಲೆಯಲ್ಲಿ ಕೊನೆಯಾಗಿದೆ. ಈ ಘಟನೆಯು ನಗರದ ನಗರದ ಹೊಸೂರು ವೃತ್ತದ ಬಳಿ ನಡೆದಿದೆ. ಇದು ಒಂದೇ ತಿಂಗಳಲ್ಲಿ ನಡೆದ ಐದನೇ ಕೊಲೆಯಾಗಿದೆ.
ನಗರದ ಉಣಕಲ್ ಬಳಿಯ ಸಂತೆಬೈಲ್ ನಿವಾಸಿಯಾದ ಸಂತೋಷ ನರೋಟಿ (30) ಎಂಬಾತನೇ ಕೊಲೆಯಾದ ಯುವಕ. ಹಳೇ ದ್ವೇಷದ ಹಿನ್ನೆಲೆಯಲ್ಲಿ ಈ ಕೊಲೆ ನಡೆದಿದ್ದು ಆರೋಪಿ ನವೀನ್ ನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.[ಡ್ರೈವಿಂಗ್ ಕಲಿಸಿದ ಯುವಕನೇ ಸುಂದರಿಯ ಹಂತಕ]
ಘಟನೆಯ ವಿವರ:
ನಗರದ ಉಣಕಲ್ ಬಳಿಯ ಸಂತೆಬೈಲ್ ನಿವಾಸಿಯಾದ ಸಂತೋಷ ಮತ್ತು ಹೊಸೂರು ಪ್ರದೇಶದ ಗೋಪಿ ಪರಶುರಾಮ ವಡ್ಡರ ಎಂಬಾತನ ಗುಂಪಿನವರೊಂದಿಗೆ ಕಳೆದ ನಾಲ್ಕು ತಿಂಗಳ ಹಿಂದೆ ವಾಗ್ವಾದ ನಡೆದಿತ್ತು.
ಈ ಸಮಯದಲ್ಲಿ ಗೋಪಿ ಗುಂಪಿನಲ್ಲಿದ್ದ ನವೀನ ಎಂಬಾತನ ಸಹೋದರನಿಗೆ ಹೊಡೆತ ಬಿದ್ದಿತ್ತು. ಇದರಿಂದ ರೊಚ್ಚಿಗೆದ್ದಿದ್ದ ನವೀನ ಕೊಲೆಗೀಡಾದ ಸಂತೋಷನನ್ನು ಕಂಡಾಗಲೆಲ್ಲ ನಿನ್ನನ್ನು ಸಾಯಿಸುತ್ತೇನೆ ಎಂದು ಪದೇ ಪದೇ ಹೇಳುತ್ತಿದ್ದನು. [ಗಂಡನ ವಿಕೃತ ಕಾಮಕ್ಕೆ ಬೇಸತ್ತು ಮಕ್ಕಳನ್ನೇ ಕೊಂದ ತಾಯಿ!]
ಬುಧವಾರ
ಸಂತೋಷ
ಎಂದಿನಂತೆ
ತನ್ನ
ಆಟೋ
ಚಲಾಯಿಸುತ್ತ
ಹೊಸೂರು
ಪ್ರದೇಶಕ್ಕೆ
ಬರುತ್ತಿದ್ದಂತೆ
ಸಾರ್ವಜನಿಕರ
ಎದುರೇ
ನವೀನ
ಸಂತೋಷನಿಗೆ
ಚಾಕುವಿನಿಂದ
ಹೊಟ್ಟೆ,
ಕುತ್ತಿಗೆಗೆ
ಬಲವಾಗಿ
ಇರಿದಿದ್ದಾನೆ.
ಗಾಯಗೊಂಡ
ಸಂತೋಷನನ್ನು
ಕಿಮ್ಸ್
ಆಸ್ಪತ್ರೆಗೆ
ಸಾಗಿಸುವಾಗ
ಮಾರ್ಗ
ಮಧ್ಯೆ
ಕೊನೆಯುಸಿರೆಳೆದಿದ್ದಾನೆ.[ಮದುವೆಗೆ
ಒಪ್ಪದ
ತಂದೆ-ತಾಯಿಯನ್ನು
ಕೊಲ್ಲಿಸಿದ
ಮಗ]
ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ. ಈ ಕೊಲೆಯೊಂದಿಗೆ ಛೋಟಾ ಬಾಂಬೆ ಎಂದೇ ಖ್ಯಾತಿ ಹೊಂದಿದ ಹುಬ್ಬಳ್ಳಿಯಲ್ಲಿ ಐದನೇ ಕೊಲೆಯಾಗಿದೆ. ಈ ತಿಂಗಳಿನಲ್ಲಿ ಈ ಮೊದಲು ಹಾಡುಹಗಲೇ ನಾಲ್ಕು ಕೊಲೆಯಾಗಿದ್ದವು.