ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದಾವಣಗೆರೆ: ನಿರುದ್ಯೋಗಿಗಳಿಗೆ ಸ್ವಉದ್ಯೋಗ ಶಿಬಿರ

By Mahesh
|
Google Oneindia Kannada News

ದಾವಣಗೆರೆ, ಸೆ. 14: ತೋಳಹುಣಸೆಯ ರೇಷ್ಮೆ ಇಲಾಖೆ ಆವರಣದಲ್ಲಿರುವ ಕೆನರಾ ಬ್ಯಾಂಕ್ ಗ್ರಾಮೀಣ ಸ್ವಉದ್ಯೋಗ ತರಬೇತಿ ಶಿಬಿರ ನಡೆಸಲಾಗುತ್ತಿದೆ. ಆಸಕ್ತ ಯುವಕ/ತಿಯರು ತಕ್ಷಣವೇ ಅರ್ಜಿ ಸಲ್ಲಿಸಬಹುದಾಗಿದೆ.

ಸಂಸ್ಥೆ ವತಿಯಿಂದ ಜಿಲ್ಲಾ ಪಂಚಾಯಿತಿ ಸಹಯೋಗದಲ್ಲಿ ಜಿಲ್ಲೆಯ ನಿರುದ್ಯೋಗಿಗಳಿಗೆ ವಿವಿಧ ರೀತಿಯ ಸ್ವ ಉದ್ಯೋಗ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

* ಸೆಪ್ಟೆಂಬರ್ 15 ರಿಂದ 10 ದಿನಗಳ ಕಾಲ ಈ ತರಬೇತಿ ಶಿಬಿರ ನಡೆಸಲಾಗುತ್ತದೆ. ಕೃಷಿ ಹಾಗೂ ಕೃಷಿಯೇತರ ಚಟುವಟಿಕೆ ಕುರಿತು ತರಬೇತಿ,
* ಸೆಪ್ಟೆಂಬರ್ 16 ರಿಂದ 21 ದಿನಗಳ ಬೇಸಿಕ್ ಫೋಟೋಗ್ರಫಿ ಮತ್ತು ವೀಡಿಯೋಗ್ರಾಫಿ

Job Training self employment Davanagere District

* ಸೆಪ್ಟೆಂಬರ್ 26 ರಿಂದ ವಿಕಲಚೇತನರಿಗೆ 13 ದಿನಗಳ ಸಣ್ಣ ಆದಾಯ ಚಟುವಟಿಕೆಗಳು ರಾಗಿಯಿಂದ ಶಕ್ತಿವರ್ಧಕ ಆಹಾರ, ಅಗರಬತ್ತಿ, ಸೋಪ್ ಆಯಿಲ್, ಪೆನಾಯಿಲ್, ವ್ಯಾಸಲಿನ್, ಬಟ್ಟೆ ಒಗೆಯುವ ಸೋಪಿನ ಪೌಡರ್ ತಯಾರಿಕೆ ಕುರಿತು ತರಬೇತಿ ನೀಡಲಾಗುವುದು.

ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ:
ಕೆ. ನಾಗರಾಜ್,
ನಿರ್ದೇಶಕರು, ಕೆನರಾ ಬ್ಯಾಂಕ್
ಗ್ರಾಮೀಣ ಸ್ವಉದ್ಯೋಗ ತರಬೇತಿ
ಸಂಸ್ಥೆ, ತೋಳಹುಣಸೆ, ರೇಷ್ಮೆ
ಇಲಾಖೆ ಆವರಣ. ದಾವಣಗೆರೆ.
ದೂರವಾಣಿ : 08192-210 707/95383 95817.
(ಒನ್ಇಂಡಿಯಾ ಸುದ್ದಿ)

English summary
Job Training for self employment will be conducted for youths from Davanagere district. Ten day long training session will start from September 15. Interested youths can apply at the earliest.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X