ದಾವಣಗೆರೆ : ಯಾವ ಬಡವಾಣೆಗೆ ಯಾವಾಗ ನೀರು ಪೂರೈಕೆ?
ದಾವಣಗೆರೆ ನಗರದ ಶೇ.60ರಷ್ಟು ಪ್ರದೇಶಕ್ಕೆ ನೀರು ಸರಬರಾಜು ಮಾಡುವ ರಾಜನಹಳ್ಳಿ ಜಾಕ್ವೆಲ್ ನಲ್ಲಿ ತುಂಗಭದ್ರಾ ನೀರು ಬೇಸಿಗೆಗೆ ಮುಂಚಿತವಾಗಿ ಬತ್ತಿದೆ. ಈಗ ನಗರದ ದಕ್ಷಿಣ ಭಾಗಗಳಿಗೆ ನಿಯಮಿತವಾಗಿ ನೀರು ಪೂರೈಕೆ ಅನಿವಾರ್ಯ
ದಾವಣಗೆರೆ, ಜನವರಿ 11: ದಾವಣಗೆರೆ ನಗರದ ಶೇ.60ರಷ್ಟು ಪ್ರದೇಶಕ್ಕೆ ನೀರು ಸರಬರಾಜು ಮಾಡುವ ರಾಜನಹಳ್ಳಿ ಜಾಕ್ವೆಲ್ ನಲ್ಲಿ ತುಂಗಭದ್ರಾ ನೀರು ಬೇಸಿಗೆಗೆ ಮುಂಚಿತವಾಗಿ ಬತ್ತಿದೆ. ಈಗ ನಗರದ ದಕ್ಷಿಣ ಭಾಗಗಳಿಗೆ ನಿಯಮಿತವಾಗಿ ನೀರು ಪೂರೈಕೆ ಮಾಡುವುದು ಅನಿವಾರ್ಯ ಮಹಾನಗರ ಪಾಲಿಕೆ ಪ್ರಕಟಿಸಿದೆ.
ಒಂದು ಗಂಟೆ ಮಾತ್ರ ನೀರು ಸರಬರಾಜು ಮಾಡಲಿದ್ದು, ಅದನ್ನು ಕುಡಿಯಲು ಮಾತ್ರ ಬಳಸಬೇಕಿದೆ. ಜನವರಿ 9ರಿಂದ ಜ.23ರವರೆಗೆ ನೀರು ಪೂರೈಕೆ ಮಾಡುವ ವೇಳಾಪಟ್ಟಿಯನ್ನು ಪ್ರಕಟಿಸಿದೆ.
ನಗರ
ಈ
ಎರಡು
ಪ್ರಮುಖ
ಕೆರೆಗಳಿಗೆ
ಭದ್ರಾ
ಜಲಾಶಯದಿಂದ
ನೀರು
ಒದಗಿಸಲಾಗುತ್ತದೆ.
ಆದರೆ,
ಭದ್ರಾ
ಜಲಾಶಯದಲ್ಲಿ
ನೀರಿನ
ಮಟ್ಟ
ಸದ್ಯ
144
ಅಡಿ
ಮಾತ್ರ
ಇದೆ.
150
ಅಡಿ
ಪ್ರಮಾಣ
ದಾಟಿದರೆ
ಮಾತ್ರ
ನಾಲೆಗಳ
ಮೂಲಕ
ನೀರು
ಒದಗಿಸಲು
ಸಾಧ್ಯ
ಎಂದು
ಮೇಯರ್
ರೇಖಾ
ನಾಗರಾಜ್
ಹೇಳಿದರು.
ನಗರಕ್ಕೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಇದಕ್ಕಾಗಿ ಕೆರೆಗಳ ಆಂತರಿಕ ಜೋಡಣೆಯೇ ಪರಿಹಾರ, ಯೋಜನೆ ಸದ್ಯಕ್ಕೆ ಕಾರ್ಯಗತವಾಗಿದ್ದು, ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ನೀಗಿಸಬಹುದು ಎಂದು ಮೇಯರ್ ರೇಖಾ ತಿಳಿಸಿದರು.
*
ರಂಗನಾಥ
ಬಡಾವಣೆ,
ಶಿವಕುಮಾರಸ್ವಾಮಿ
ಬಡಾವಣೆ
1ನೇ
ಹಂತ,
ಸಂಪೂರ್ಣ
*
ವಾರ್ಡ್
ನಂ.37,
26,
27,
ಭಾಗಶಃ,
33ರ
31
ಮತ್ತು
32ನೇ
ವಾರ್ಡುಗಳಲ್ಲಿ
ಜ.
9,
15
ಹಾಗೂ
21ರಂದು
ನೀರು
ಪೂರೈಕೆ
*
ವಾರ್ಡ್
ನಂ.
28,
29,
36,
38,
ಭಾಗಶಃ
32
ಹಾಗೂ
35
ಗಳಿಗೆ
ಜ.10,
16
ಮತ್ತು
22ರಂದು
ನೀರು
ಪೂರೈಕೆಯಾಗಲಿದೆ.
*
ವಾರ್ಡ್
ನಂ.
17,
20,
29,
39,
ಭಾಗಶಃ
35
ಹಾಗೂ
24
ಗಳಿಗೆ
ಜ.
11,
17
ಮತ್ತು
23ರಂದು
ನೀರು
ಪೂರೈಸಲಾಗುವುದು
ಭದ್ರಾ ಬಲದಂಡೆ ನಾಲೆಯ ಮೂಲಕ ಸಮಗ್ರ ನೀರು ಸರಬರಾಜು ಕೇಂದ್ರ ಹಾಗೂ ಕುಂದುವಾಡ ಕೆರೆಗಳಿಗೆ ನೀರು ಭರ್ತಿ ಮಾಡಿಕೊಳ್ಳುತ್ತಿರುವುದರಿಂದ, ಸಂಕ್ರಾಂತಿ ವೇಳೆ ಕೆರೆಗಳಿಗೆ ತೆರಳದಂತೆ ಸಾರ್ವಜನಿಕರಿಗೆ ನಿರ್ಬಂಧಿಸಲಾಗಿದೆ. ಕೆರೆಗಳಿಗೆ ನೀರು ತುಂಬಿಸುವ ಕಾರ್ಯದಲ್ಲಿ ಸಿಬ್ಬಂದಿ ಸಂಪೂರ್ಣವಾಗಿ ತೊಡಗಿಕೊಂಡಿದ್ದಾರೆ.