ಚಿತ್ರದುರ್ಗದಲ್ಲಿ ಆನೆ ದಾಳಿಗೆ ಗರ್ಭಿಣಿ ಬಲಿ
ಚಿತ್ರದುರ್ಗ, ಆಗಸ್ಟ್ 28 : ಕಾಡಾನೆ ದಾಳಿಯಿಂದಾಗಿ ಗರ್ಭಿಣಿ ಮೃಪಟ್ಟ ಘಟನೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನಲ್ಲಿ ನಡೆದಿದೆ. ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದು, ಆನೆಯನ್ನು ಕಾಡಿಗಟ್ಟುವ ಕಾರ್ಯಾಚರಣೆಯನ್ನು ಆರಂಭಿಸಿದ್ದಾರೆ.
ಹಿರಿಯೂರು
ತಾಲೂಕಿನ
ಬಳಘಟ್ಟ
ಗ್ರಾಮದ
ಬಳಿ
ಶನಿವಾರ
ಸಂಜೆ
ಕಾಡಾನೆ
ಕಾಣಿಸಿಕೊಂಡಿತ್ತು.
ಭಾನುವಾರ
ಬೆಳಗ್ಗೆ
7
ತಿಂಗಳ
ಗರ್ಭಿಣಿ
ತಿಮ್ಮಕ್ಕ
(22)
ಅವರ
ಮೇಲೆ
ದಾಳಿ
ಮಾಡಿದ
ಆನೆ
ಅವರನ್ನು
ಕೊಂದು
ಹಾಕಿದೆ.[ಜಂಬೂಸವಾರಿಯಲ್ಲಿ
ಕೊಡಗಿನ
ಆನೆಗಳದ್ದೇ
ಕಾರುಬಾರು!]
ಬಳಘಟ್ಟದಿಂದ ಮಾರಿಕಣಿವೆಯತ್ತ ಕಾಡಾನೆ ಸಾಗಿದ್ದು ಮಾರ್ಗದಲ್ಲಿ ಭರಮಗಿರಿ ಬಳಿ ನೀಲಮ್ಮ ಎಂಬುವವರ ಮೇಲೆ ದಾಳಿ ಮಾಡಿದೆ. ನೀಲಮ್ಮ ಅವರ ಕಾಲಿಗೆ ಗಾಯವಾಗಿದ್ದು, ಖಾಸ್ಪಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.[ಮಡಿಕೇರಿಯ ಕಾಫಿ ತೋಟಗಳಲ್ಲಿ ಕಾಡಾನೆಗಳ ರಂಪಾಟ]
ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದು ಪರಿಶೀಲನೆ ನಡೆಸುತ್ತಿದ್ದಾರೆ.
Comments
English summary
22-year-old pregnant woman Timmakka killed in elephant attack at Balagatta village Hiriyur, Chitradurga district. Forest department officers visited the spot.