ಏಪ್ರಿಲ್ 18ರಿಂದ 20ರವರೆಗೆ ಚಿತ್ರದುರ್ಗದಲ್ಲಿ ಶತಚಂಡಿಕಾ ಯಾಗ
ಚಿತ್ರದುರ್ಗ, ಏಪ್ರಿಲ್ 6: ತಾಲೂಕಿನ ಗೋನೂರು ಗ್ರಾಮದಲ್ಲಿ ರಾಜರಾಜೇಶ್ವರಿ ದೇವಸ್ಥಾನ ಟ್ರಸ್ಟ್ ನಿಂದ ಏಪ್ರಿಲ್ 18ರಿಂದ 20ರ ವರೆಗೆ ದೇವಸ್ಥಾನದ ಶಂಕುಸ್ಥಾಪನೆ ಹಾಗೂ ಶತಚಂಡಿಕಾ ಮಹಾಯಾಗ, ವಿವಿಧ ಹೋಮ-ಹವನ ನಡೆಯಲಿದೆ. ಸೋಂದಾ ಸ್ವರ್ಣವಲ್ಲಿ ಮಠದ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ, ವರದಹಳ್ಳಿ ಮಠದ ಬ್ರಹ್ಮಚೈತನ್ಯ ಸ್ವಾಮೀಜಿ, ಕೂಡಲೀಶಂಕರ ಮಠದ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ.
ಶತ ಚಂಡಿಕಾ ಯಾಗಕ್ಕೆ ವಿಶೇಷವಾದಂಥ ಮಹತ್ವವಿದೆ. ಈ ಕಾರ್ಯಕ್ರಮದಲ್ಲಿ ಭಾಗಿಯಾಗುವುದರಿಂದ ಮತ್ತು ತಮ್ಮ ಕೈಲಾದ ಸೇವೆ ಮಾಡುವುದರಿಂದ ದೇವರ ಅನುಗ್ರಹಕ್ಕೆ ಪಾತ್ರರಾಗಬಹುದು ಮತ್ತು ಇಂಥ ಮಹತ್ತರ ಕೆಲಸದಲ್ಲಿ ಪಾಲ್ಗೊಳ್ಳುವುದೇ ಪುಣ್ಯ ಎಂದು ಒನ್ ಇಂಡಿಯಾ ಕನ್ನಡದ ಜ್ಯೋತಿಷಿಗಳಾದ ಪಂಡಿತ್ ವಿಠ್ಠಲ ಭಟ್ ಹೇಳಿದ್ದಾರೆ.
ಅಂದಹಾಗೆ, ಈ ಕಾರ್ಯಕ್ರಮಕ್ಕೆ ತಮ್ಮ ಸೇವೆಯನ್ನು ಮಾಡಬಯಸುವವರು ಚೆಕ್ ಅಥವಾ ಡಿಡಿಯನ್ನು ನೀಡಲು ಬಯಸಿದರೆ ಆಕ್ಸಿಸ್ ಬ್ಯಾಂಕ್, ಚಿತ್ರದುರ್ಗ, ಖಾತೆ ಸಂಖ್ಯೆ 913020021887513, IFSC Code: UTIB0001019 ಇಲ್ಲಿಗೆ ತಲುಪಿಸಬಹುದು. ಇನ್ನೂ ಹೆಚ್ಚಿನ ಮಾಹಿತಿ ಬೇಕಾದಲ್ಲಿ ಮೊಬೈಲ್ ಸಂಖ್ಯೆ 9480336862 ಅಥವಾ 9449187773 ಸಂಪರ್ಕಿಸಬಹುದು.