ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಏಪ್ರಿಲ್ 18ರಿಂದ 20ರವರೆಗೆ ಚಿತ್ರದುರ್ಗದಲ್ಲಿ ಶತಚಂಡಿಕಾ ಯಾಗ

By ಒನ್ಇಂಡಿಯಾ ಪ್ರತಿನಿಧಿ
|
Google Oneindia Kannada News

ಚಿತ್ರದುರ್ಗ, ಏಪ್ರಿಲ್ 6: ತಾಲೂಕಿನ ಗೋನೂರು ಗ್ರಾಮದಲ್ಲಿ ರಾಜರಾಜೇಶ್ವರಿ ದೇವಸ್ಥಾನ ಟ್ರಸ್ಟ್ ನಿಂದ ಏಪ್ರಿಲ್ 18ರಿಂದ 20ರ ವರೆಗೆ ದೇವಸ್ಥಾನದ ಶಂಕುಸ್ಥಾಪನೆ ಹಾಗೂ ಶತಚಂಡಿಕಾ ಮಹಾಯಾಗ, ವಿವಿಧ ಹೋಮ-ಹವನ ನಡೆಯಲಿದೆ. ಸೋಂದಾ ಸ್ವರ್ಣವಲ್ಲಿ ಮಠದ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ, ವರದಹಳ್ಳಿ ಮಠದ ಬ್ರಹ್ಮಚೈತನ್ಯ ಸ್ವಾಮೀಜಿ, ಕೂಡಲೀಶಂಕರ ಮಠದ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ.

ಶತ ಚಂಡಿಕಾ ಯಾಗಕ್ಕೆ ವಿಶೇಷವಾದಂಥ ಮಹತ್ವವಿದೆ. ಈ ಕಾರ್ಯಕ್ರಮದಲ್ಲಿ ಭಾಗಿಯಾಗುವುದರಿಂದ ಮತ್ತು ತಮ್ಮ ಕೈಲಾದ ಸೇವೆ ಮಾಡುವುದರಿಂದ ದೇವರ ಅನುಗ್ರಹಕ್ಕೆ ಪಾತ್ರರಾಗಬಹುದು ಮತ್ತು ಇಂಥ ಮಹತ್ತರ ಕೆಲಸದಲ್ಲಿ ಪಾಲ್ಗೊಳ್ಳುವುದೇ ಪುಣ್ಯ ಎಂದು ಒನ್ ಇಂಡಿಯಾ ಕನ್ನಡದ ಜ್ಯೋತಿಷಿಗಳಾದ ಪಂಡಿತ್ ವಿಠ್ಠಲ ಭಟ್ ಹೇಳಿದ್ದಾರೆ.

ಅಂದಹಾಗೆ, ಈ ಕಾರ್ಯಕ್ರಮಕ್ಕೆ ತಮ್ಮ ಸೇವೆಯನ್ನು ಮಾಡಬಯಸುವವರು ಚೆಕ್ ಅಥವಾ ಡಿಡಿಯನ್ನು ನೀಡಲು ಬಯಸಿದರೆ ಆಕ್ಸಿಸ್ ಬ್ಯಾಂಕ್, ಚಿತ್ರದುರ್ಗ, ಖಾತೆ ಸಂಖ್ಯೆ 913020021887513, IFSC Code: UTIB0001019 ಇಲ್ಲಿಗೆ ತಲುಪಿಸಬಹುದು. ಇನ್ನೂ ಹೆಚ್ಚಿನ ಮಾಹಿತಿ ಬೇಕಾದಲ್ಲಿ ಮೊಬೈಲ್ ಸಂಖ್ಯೆ 9480336862 ಅಥವಾ 9449187773 ಸಂಪರ್ಕಿಸಬಹುದು.

English summary
Shatachandika yaga and other religious programme at Gonur village, Chitradurga district from April 18th.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X