ಚಿತ್ರದುರ್ಗದಲ್ಲಿ 1,200 ಎಕರೆಯಲ್ಲಿ ಹೆರಿಟೇಜ್ ಹಬ್ ನಿರ್ಮಾಣ
ಚಿತ್ರದುರ್ಗ, ಜೂನ್ 27 : ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಹಲವು ಗ್ರಾಮ ಮತ್ತು ತುಮಕೂರು ಜಿಲ್ಲೆಯ ಕೆಲವು ಗ್ರಾಮಗಳನ್ನು ಸೇರಿಸಿ ಹೆರಿಟೇಜ್ ಹಬ್ ನಿರ್ಮಾಣ ಮಾಡಲಾಗುತ್ತದೆ. ಸುಮಾರು 1,200 ಎಕರೆ ಪ್ರದೇಶದಲ್ಲಿ ಹಬ್ ನಿರ್ಮಾಣವಾಗಲಿದೆ.
ಚಿತ್ರದುರ್ಗ
ಜಿಲ್ಲೆಯ
ಹಿರಿಯೂರು
ತಾಲೂಕಿನ
ಕರಿಯಾಳಿ
ಗ್ರಾಮಗಳ
ವ್ಯಾಪ್ತಿ,
ತುಮಕೂರು
ಜಿಲ್ಲೆ
ಶಿರಾ
ತಾಲೂಕಿನ
ಉಜ್ಜನಕುಂಟೆ,
ಮಾರನಗೆರೆ
ಗ್ರಾಮದ
ಸುಮಾರು
1,200
ಎಕರೆ
ಪ್ರದೇಶದಲ್ಲಿ
ಹಬ್
ನಿರ್ಮಾಣವಾಗಲಿದೆ.
ಇದಕ್ಕಾಗಿ
ಮೊದಲ
ಹಂತದಲ್ಲಿ
2
ಕೋಟಿ
ರೂ.
ಬಿಡುಗಡೆಯಾಗಿದೆ.
[ಚಿಕ್ಕಜಾಜೂರು-ಹುಬ್ಬಳ್ಳಿ
ಜೋಡಿ
ಮಾರ್ಗಕ್ಕೆ
ಒಪ್ಪಿಗೆ]
ಉನ್ನತ ಶಿಕ್ಷಣ ಇಲಾಖೆ ಅಪರ ಮುಖ್ಯಕಾರ್ಯದರ್ಶಿ ಭರತ್ ಲಾಲ್ ಮೀನಾ ಅವರು ಈ ಕುರಿತು ಮಾಹಿತಿ ನೀಡಿದ್ದಾರೆ. ಹೆರಿಟೇಜ್ ಹಬ್ ನಿರ್ಮಾಣದ ರೂಪುರೇಷೆ ಕುರಿತು ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳ ಜೊತೆ ಅವರು ಪೂರ್ವಭಾವಿ ಸಭೆ ನಡೆಸಿದ್ದಾರೆ. [ಕರ್ನಾಟಕದಲ್ಲಿ ನಿರ್ಮಾಣಗೊಳ್ಳಲಿವೆ 4 ಫುಡ್ ಪಾರ್ಕ್]
ಪಿಳಿಕುಳ ನಿಸರ್ಗಧಾಮದ ಮಾದರಿಯಲ್ಲಿ ಕರ್ನಾಟಕದ ಕಲೆ, ಸಂಸ್ಕೃತಿ, ಆಚಾರ-ವಿಚಾರ, ಆಹಾರ ಪದ್ಧತಿ, ಬೆಳೆ ಮುಂತಾದ ವೈಶಿಷ್ಟ್ಯಗಳನ್ನು ಈ ಹೆರಿಟೇಜ್ ಹಬ್ನಲ್ಲಿ ಸ್ಥಾಪಿಸಲು ಯೋಜನೆ ಸಿದ್ಧಗೊಳಿಸಲಾಗಿದೆ. ತುಮಕೂರು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಹೆರಿಟೇಜ್ ಹಬ್ ಸಂಸ್ಥೆಯನ್ನು ಈಗಾಗಲೇ ನೋಂದಣಿ ಮಾಡಿಸಲಾಗಿದೆ. ಸಂಸ್ಥೆಯು ಹಬ್ ನಿರ್ಮಾಣ ಹಾಗೂ ನಿರ್ವಹಣೆಯನ್ನು ನೋಡಿಕೊಳ್ಳಲಿದೆ. [ಪಿಲಿಕುಳ ನಿಸರ್ಗಧಾಮಕ್ಕೆ ಪ್ರವಾಸ ಹೋಗಿ ಬನ್ನಿ]
ಗ್ರಾಮ ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಹಾಗೂ ಅರಣ್ಯ ಇಲಾಖೆಗಳಲ್ಲಿ ಲಭ್ಯವಿರುವ ಸಂಪನ್ಮೂಲವನ್ನು ಬಳಸಿಕೊಂಡು ಹೆರಿಟೇಜ್ ಹಬ್ನಲ್ಲಿ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತದೆ. ಗ್ರಾಮೀಣ ಪ್ರತಿಭೆಗಳಿಗೆ ಕ್ರೀಡಾ ಮನೋಭಾವನೆ ಹೆಚ್ಚಿಸಲು ಒಳಾಂಗಣ, ಹೊರಾಂಗಣ ಕ್ರೀಡಾಂಗಣವನ್ನು ಹಬ್ನಲ್ಲಿ ನಿರ್ಮಾಣ ಮಾಡಲಾಗುತ್ತದೆ. [ಮಾಹಿತಿ : ಕರ್ನಾಟಕ ವಾರ್ತೆ]