ಚಿತ್ರದುರ್ಗದಲ್ಲಿ ಭೀಕರ ಅಪಘಾತ, ಸ್ಥಳದಲ್ಲೇ 5 ಸಾವು
ಚಿತ್ರದುರ್ಗ, ಏಪ್ರಿಲ್ 05 : ಕಾರಿಗೆ ಲಾರಿ ಡಿಕ್ಕಿ ಹೊಡೆದು ಐವರು ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ. ಅಪಘಾತದಲ್ಲಿ ಇಬ್ಬರು ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಮಂಗಳವಾರ
ಮುಂಜಾನೆ
ಚಿತ್ರದುರ್ಗ
ಜಿಲ್ಲೆಯ
ಬಿ.ಜಿ.ಕೆರೆ
ಬಳಿ
ಈ
ಅಪಘಾತ
ಸಂಭವಿಸಿದೆ.
ಬೆಂಗಳೂರಿನಿಂದ
ಬಳ್ಳಾರಿಗೆ
ಹೋಗುತ್ತಿದ್ದ
ಕೆಎ
34,
ಎನ್
3686
ಸಂಖ್ಯೆಯ
ಕಾರಿಗೆ
ಲಾರಿ
ಡಿಕ್ಕಿ
ಹೊಡೆದಿದೆ.
ಕಾರಿನಲ್ಲಿದ್ದ
ಐವರು
ಸ್ಥಳದಲ್ಲಿಯೇ
ಸಾವನ್ನಪ್ಪಿದ್ದಾರೆ.
[ಮುಖ್ಯಮಂತ್ರಿ
ಸಾಂತ್ವನ-'ಹರೀಶ್'
ಯೋಜನೆ
ಬಗ್ಗೆ
ತಿಳಿಯಿರಿ]
ಮೃತಪಟ್ಟವರನ್ನು ಕುಮಾರ್ (27), ಬಾಷಾ (30), ಶ್ರೀರಾಮುಲು, ಸತೀಶ್ ಎಂದು ಗುರುತಿಸಲಾಗಿದೆ. ಇನ್ನೊಬ್ಬರ ಗುರುತು ಪತ್ತೆಯಾಗಿಲ್ಲ. ಮೃತಪಟ್ಟವರೆಲ್ಲರೂ ಬಳ್ಳಾರಿ ಮೂಲದವರು ಎಂದು ಪೊಲೀಸರು ಹೇಳಿದ್ದಾರೆ. [ದೇಹ ಎರಡು ತುಂಡಾದರೂ ಕಣ್ಣು ದಾನ ಮಾಡಿ ಬೆಳಕಾದರು]
ಲಾರಿಯ ಚಾಲಕ ಮತ್ತು ಕ್ಲೀನರ್ ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೊಳಕಾಲ್ಮೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. [ಅಪಘಾತವಾದಾಗ ಜೀವ ಉಳಿಸಲು ನೆರವಾಗಿ]
(ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ)