ಬ್ಯಾಂಕ್ ನೊಟೀಸ್ ಗೆ ಹೆದರಿ ಚಿತ್ರದುರ್ಗದ ರೈತ ಆತ್ಮಹತ್ಯೆ
ಚಿತ್ರದುರ್ಗ, ಜುಲೈ 10: ಬ್ಯಾಂಕ್ ನ ನೋಟಿಸ್ ಗೆ ಹೆದರಿ ಹೊಳಲ್ಕೆರೆ ತಾಲೂಕಿನ ಬೋರನಹಳ್ಳಿಯ ರೈತರೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಹೆಣ್ಣು ಮಕ್ಕಳ ಹೆಗಲಿಗೆ ನೊಗ ಹೊರಿಸಿದ ಬಡ ರೈತ
48 ವರ್ಷದ ತಿಪ್ಪಯ್ಯ ಆತ್ಮಹತ್ಯೆ ಮಾಡಿಕೊಂಡ ರೈತರಾಗಿದ್ದಾರೆ. ಇವರು ತಮ್ಮ ಹೊಲದಲ್ಲಿದ್ದ ಪಂಪ್ ಸೆಟ್ ನ ವಿದ್ಯುತ್ ತಂತಿ ಹಿಡಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
4 ಎಕರೆ ಜಮೀನು 8 ಲಕ್ಷ ಸಾಲ
ತಿಪ್ಪಯ್ಯನವರಿಗೆ ಒಟ್ಟು ನಾಲ್ಕು ಎಕರೆ ಜಮೀನಿದೆ. ಇದರಲ್ಲಿ ಅವರು ಅಡಿಕೆ ಬೆಳೆಯಲು ಇಲ್ಲಿನ ಸಮೀಪದ ಚಿತ್ರಹಳ್ಳಿಯ ವಿಜಯ ಬ್ಯಾಂಕ್ ಶಾಖೆಯಿಂದ 8 ಲಕ್ಷ ರೂಪಾಯಿ ಸಾಲವನ್ನು ಪಡೆದುಕೊಂಡಿದ್ದರು.
ಸಾಲ ಮನ್ನಾಕ್ಕೆ ಆಗ್ರಹ : ಜೋಶಿ ಮನೆಗೆ ಮುತ್ತಿಗೆ ಯತ್ನ
ಈ ಸಾಲವನ್ನು ಮರು ಪಾವತಿ ಮಾಡಲು ತಿಪ್ಪಯ್ಯನವರಿಗೆ ಸಾಧ್ಯವಾಗಿರಲಿಲ್ಲ. ಇದರಿಂದ ಬ್ಯಾಂಕ್ ಅಧಿಕಾರಿಗಳು ಶನಿವಾರ ನೊಟೀಸ್ ನೀಡಿದ್ದಾರೆ ಎನ್ನಲಾಗಿದೆ. ಈ ನೊಟೀಸ್ ನೋಡಿದವರೆ ಭಾನುವಾರ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಸ್ಥಳಕ್ಕೆ ಚಿತ್ರಹಳ್ಳಿ ಪೊಲೀಸರ ಭೇಟಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕರ್ನಾಟಕ ರಾಜ್ಯ ಸರಕಾರ ಸಹಕಾರ ಬ್ಯಾಂಕ್ ಗಳ ಸಾಲ ಮನ್ನಾ ಮಾಡಿಯೂ ರಾಷ್ಟ್ರೀಕೃತ ಬ್ಯಾಂಕ್ ಗಳಿಂದ ಸಾಲ ಪಡೆದ ರೈತರು ಆತ್ಮಹತ್ಯೆಗೆ ಶರಣಾಗುತ್ತಿರುವುದು ವಿಪರ್ಯಾಸವಾಗಿದೆ.