ಚಿತ್ರದುರ್ಗ : ಕೆಎಸ್ಆರ್ಟಿಸಿ ವೈಭವ್ ಬಸ್ ಜಪ್ತಿಗೆ ಆದೇಶ!
ಚಿತ್ರದುರ್ಗ, ಆ.21 : ಕೆಎಸ್ಆರ್ಟಿಸಿಯ ಏಳು ವೈಭವ್ ಬಸ್ಸುಗಳನ್ನು ಜಪ್ತಿ ಮಾಡಲು ಚಿತ್ರದುರ್ಗ ನ್ಯಾಯಾಲಯ ಆದೇಶ ನೀಡಿದೆ. ಹಿಂದೆ ಇದೇ ಕೋರ್ಟ್ ಕೇಂದ್ರ ಸರ್ಕಾರದ ಅಧೀನದಲ್ಲಿರುವ ರೈಲನ್ನು ಜಪ್ತಿ ಮಾಡಲು ಆದೇಶ ಕೊಟ್ಟಿತ್ತು.
12 ವರ್ಷಗಳ ಹಿಂದೆ ಭರಮಸಾಗರ ಬಸ್ ನಿಲ್ದಾಣ ನಿರ್ಮಾಣ ಮಾಡಲು ಏಳು ರೈತರು ಭೂಮಿ ನೀಡಿದ್ದರು. ಭೂಮಿ ನೀಡಿದ ರೈತರಿಗೆ ಒಂದು ವರ್ಷದೊಳಗೆ ಪರಿಹಾರ ನೀಡುವುದಾಗಿ ಸರ್ಕಾರ ಹೇಳಿತ್ತು. ಆದರೆ, ಪರಿಹಾರ ಮಾತ್ರ ನೀಡಿರಲಿಲ್ಲ.
ರಾಜ್ಯದ ಎಲ್ಲ ಜಾತಿಯ ವಿದ್ಯಾರ್ಥಿಗಳಿಗೂ ಉಚಿತ ಬಸ್ ಪಾಸ್
ಸರ್ಕಾರ ಪರಿಹಾರ ನೀಡದಿರುವ ಕಾರಣ, ರೈತರು ಜಿಲ್ಲಾ ನ್ಯಾಯಾಲಯದ ಮೊರೆ ಹೋಗಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಶಿವಣ್ಣ ಅವರು, 7 ಕೆಎಸ್ಆರ್ಟಿಸಿ ವೈಭವ್ ಬಸ್ಸುಗಳನ್ನು ಜಪ್ತಿ ಮಾಡಿ ರೈತರಿಗೆ ಪರಿಹಾರ ನೀಡಬೇಕು ಎಂದು ಸೋಮವಾರ ಆದೇಶ ನೀಡಿದರು.
ನವೆಂಬರ್ಗೆ ಹುಬ್ಬಳ್ಳಿ- ಚಿತ್ರದುರ್ಗ ಷಟ್ಪಥ ರಸ್ತೆ ಕಾಮಗಾರಿ ಆರಂಭ
ಹಿಂದೆ ಇದೇ ನ್ಯಾಯಾಲಯ ಹರಿಹರ-ಬೆಂಗಳೂರು ಪ್ಯಾಸೆಂಜರ್ ರೈಲನ್ನು ಜಪ್ತಿ ಮಾಡಲು ಆದೇಶ ನೀಡಿತ್ತು. 25 ವರ್ಷಗಳು ಕಳೆದರೂ ರೈಲು ಮಾರ್ಗ ನಿರ್ಮಾಣಕ್ಕೆ ಜಾಗ ನೀಡಿದ ರೈತರಿಗೆ ಪರಿಹಾರ ವಿತರಣೆ ಮಾಡದ ಹಿನ್ನಲೆಯಲ್ಲಿ ಜಪ್ತಿ ಆದೇಶ ನೀಡಲಾಗಿತ್ತು.