ಚಿತ್ರದುರ್ಗ : ಅಕ್ಕಿಮೂಟೆಯಲ್ಲಿ 4 ಕೋಟಿ ಹಣ ವಶ
ಚಿತ್ರದುರ್ಗ, ಫೆಬ್ರವರಿ 04 : ಅಕ್ಕಿ ಮೂಟೆಯೊಳಗೆ ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ ಸುಮಾರು 4 ಕೋಟಿ ರೂ. ಹಣವನ್ನು ಚಿತ್ರದುರ್ಗದಲ್ಲಿ ಗುರುವಾರ ವಶಪಡಿಸಿಕೊಳ್ಳಲಾಗಿದೆ. ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಗೆ ಹಂಚಲು ಹಣವನ್ನು ತಂದಿರಬಹುದು ಎಂದು ಶಂಕಿಸಲಾಗಿದ್ದು, ವಿಚಾರಣೆ ಮುಂದುವರೆದಿದೆ.
ಆಂಧ್ರಪ್ರದೇಶದ
ಅನಂತಪುರ
ಕಡೆಯಿಂದ
ಚಿತ್ರದುರ್ಗಕ್ಕೆ
ತೆರಳುತ್ತಿದ್ದ
ಕಾರನ್ನು
ಚಳ್ಳಕೆರೆ
ಬಳಿಯ
ಚೆಕ್ಪೋಸ್ಟ್ನಲ್ಲಿ
ತಡೆದ
ಪೊಲೀಸರು
ಪರಿಶೀಲನೆ
ನಡೆಸಿದಾಗ
ಅಕ್ಕಿ
ಚೀಲದೊಳಗೆ
ಹಣ
ಪತ್ತೆಯಾಗಿದೆ.
ಹಣದ
ಬಗ್ಗೆ
ಸೂಕ್ತ
ದಾಖಲೆಗಳು
ಇಲ್ಲದ
ಕಾರಣ
ಕಾರಿನಲ್ಲಿದ್ದ
ಜಯದೇವಪ್ಪ
ಮತ್ತು
ಚನ್ನಬಸಪ್ಪ
ಎನ್ನುವವರನ್ನು
ಪೊಲೀಸರು
ಬಂಧಿಸಿದ್ದಾರೆ.
[ಸರ್ಕಾರಿ
ವಾಹನದಲ್ಲಿ
ಹಣ
ಸಾಗಾಟ,
ಇಂಜಿನಿಯರ್
ಬಂಧನ]
ಮೂಟೆಗಳಲ್ಲಿ 500, 1000 ರೂ. ಮುಖಬೆಲೆಯ ಸುಮಾರು 4 ಕೋಟಿ ರೂ. ಹಣ ಪತ್ತೆಯಾಗಿದೆ. ವಶಪಡಿಸಿಕೊಂಡ ಹಣವನ್ನು ಎಣಿಕೆ ಮಾಡಲು ಪೊಲೀಸರು ಬ್ಯಾಂಕ್ ಅಧಿಕಾರಿಗಳ ನೆರವನ್ನು ಕೇಳಿದ್ದು, ಅವರು ಹಣದ ಏಣಿಕೆ ಮಾಡುತ್ತಿದ್ದಾರೆ. [ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆ ವಿವರಗಳು]
ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗೆ ಹಂಚಲು ಹಣವನ್ನು ತೆಗೆದುಕೊಂಡು ಹೋಗಲಾಗುತ್ತಿತ್ತು ಎಂದು ಶಂಕಿಸಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಚೇತ್ ಮಾರ್ಗದರ್ಶನದಲ್ಲಿ ಚಳ್ಳಕೆರೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಅಂದಹಾಗೆ ಫೆ.13ರಂದು ಮೊದಲ ಹಂತದಲ್ಲಿ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಚಿಕ್ಕಬಳ್ಳಾಪುರ, ಶಿವಮೊಗ್ಗ, ತುಮಕೂರು, ಬೆಳಗಾವಿ, ಹಾವೇರಿ, ಬಾಗಲಕೋಟೆ, ಉತ್ತರ ಕನ್ನಡ, ಧಾರವಾಡ, ಗದಗ ಜಿಲ್ಲೆಗಳಲ್ಲಿ ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆ ನಡೆಯಲಿದೆ.