ಮೊಬೈಲ್ ಕಳೆದುಕೊಂಡ ಭಯದಲ್ಲಿ ಆತ್ಮಹತ್ಯೆ ಶರಣಾದ ವಿದ್ಯಾರ್ಥಿ
ಚಿತ್ರದುರ್ಗ, ಜೂನ್ 19 : ಮೊಬೈಲ್ ಕಳ್ಳತನವಾಗಿದ್ದಕ್ಕೆ ಮನೆಯಲ್ಲಿ ಬೈಸಿಕೊಳ್ಳಬೇಕು ಎಂಬ ಆತಂಕದಿಂದ ವಿದ್ಯಾರ್ಥಿಯೊಬ್ಬ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿತ್ರದುರ್ಗ ನಗರದಲ್ಲಿ ನಡೆದಿದೆ.
ಮಣಿಕಂಠ ಗುತ್ತಕಲ್ ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ. ಮಣಿಕಂಠ ಶಾಲೆಗೆ ಮೊಬೈಲ್ ತಂದಿದ್ದ. ಈ ವೇಳೆ ಮೊಬೈಲ್ ಕಳ್ಳತನವಾಗಿದೆ. ಇದರಿಂದ ಭಯಗೊಂಡು ಮನೆಯಲ್ಲಿ ವಿಷಯ ತಿಳಿದರೆ ಪೋಷಕರು ಬೈಯ್ಯುತ್ತಾರೆ ಎಂಬ ಆತಂಕದಿಂದ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಸ್ಥಳಕ್ಕೆ ಕೋಟೆ ಪೊಲೀಸರು ಮತ್ತು ರೈಲ್ವೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.
Comments
English summary
A 10 class student commits suicide by throwing himself before a moving train In Chitradurga. Boy was afraid of his parents, because he lost his mobile phone.