ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ತಮಿಳುನಾಡು: ಕಾರಿನಲ್ಲಿ ಸಿಕ್ಕಿತು ರಾಶಿ ಚಿನ್ನದ ಬಿಸ್ಕೆಟ್
ತಮಿಳುನಾಡಿನಲ್ಲಿ 'ಆದಾಯ ಗುಪ್ತಚರ ನಿರ್ದೇಶನಾಲಯ'ದ ಅಧಿಕಾರಿಗಳು ರಾಮಾನಾಥಪುರಂ-ತಿರುಚ್ಚಿ ಹೆದ್ದಾರಿಯಲ್ಲಿ ಕಾರಿನ ಮೇಲೆ ದಾಳಿ ನಡೆಸಿ 11.9 ಕೆಜಿ ಚಿನ್ನದ ಬಿಸ್ಕೆಟುಗಳನ್ನು ವಶಪಡಿಸಿಕೊಂಡಿದ್ದಾರೆ.
ಚೆನ್ನೈ, ಫೆಬ್ರವರಿ 22: ತಮಿಳುನಾಡಿನಲ್ಲಿ 'ಆದಾಯ ಗುಪ್ತಚರ ನಿರ್ದೇಶನಾಲಯ'ದ ಅಧಿಕಾರಿಗಳು 11.9 ಕೆಜಿ ಚಿನ್ನದ ಬಿಸ್ಕೆಟುಗಳನ್ನು ವಶಕ್ಕೆ ಪಡೆದಿದ್ದಾರೆ.
ಖಚಿತ ಮಾಹಿತಿಯ ಮೇರೆಗೆ ಚೆನ್ನೈನ 'ಆದಾಯ ಗುಪ್ತಚರ ನಿರ್ದೇಶನಾಲಯ' (ಡಿ.ಆರ್.ಐ) ದ ಅಧಿಕಾರಿಗಳು ರಾಮಾನಾಥಪುರಂ-ತಿರುಚ್ಚಿ ಹೆದ್ದಾರಿಯಲ್ಲಿ ಟೋಲ್ ಗೇಟ್ ನಲ್ಲಿ ನಿಂತಿದ್ದ ಕಾರಿನ ಮೇಲೆ ದಾಳಿ ನಡೆಸಿದ್ದಾರೆ. ಈ ಸಂದರ್ಭ ಕಾರಿನಲ್ಲಿ 11.9 ಕೆಜಿ ಚಿನ್ನದ ಬಿಸ್ಕೆಟುಗಳು ಪತ್ತೆಯಾಗಿವೆ.[ತಮಿಳುನಾಡು ಹೈಡ್ರಾಮ: ಸ್ಟಾಲಿನ್ ಸೇರಿ 2,000 ಜನರ ಮೇಲೆ ಎಫ್ಐಆರ್]
ಕೋಟ್ಯಾಂತರ ಮೌಲ್ಯ ಚಿನ್ನದ ಬಿಸ್ಕೆಟ್ ಗಳನ್ನು ವಶಕ್ಕೆ ಪಡೆದಿರುವ ಪೊಲೀಸರು ಇಬ್ಬರನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.[ತ.ನಾಡು ವಿಶ್ವಾಸಮತ, ಅಸಮಾಧಾನ ಇದ್ದರೆ ಕೋರ್ಟ್ ಗೆ ಹೋಗಿ]
Comments
English summary
Directorate of Revenue Intelligence officials intercepted a car near toll gate on Ramanathapuram -Trichy highway and recovered 11.9 kg of gold biscuits in Tamil Nadu. 2 persons arrested in the case.
Story first published: Wednesday, February 22, 2017, 18:02 [IST]