'ಮೇಕೆದಾಟುವಿನಲ್ಲಿ ಕರ್ನಾಟಕ ಅಣೆಕಟ್ಟು ಕಟ್ಟಲು ಬಿಡೋಲ್ಲ'
ಚೆನ್ನೈ, ಮಾ. 25 : 'ಕರ್ನಾಟಕ ಮೇಕೆದಾಟುವಿನಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ಅಣೆಕಟ್ಟು ನಿರ್ಮಾಣ ಮಾಡದಂತೆ ತಡೆಯುತ್ತೇವೆ. ಇದಕ್ಕಾಗಿ ಅಗತ್ಯ ಕಾನೂನು ಕ್ರಮಗಳನ್ನು ಕೈಗೊಳ್ಳುತ್ತೇವೆ ಎಂದು ತಮಿಳುನಾಡು ಮುಖ್ಯಮಂತ್ರಿ ಪನ್ನೀರ್ ಸೆಲ್ವಂ ಹೇಳಿದರು.
ಬುಧವಾರ
ತಮಿಳುನಾಡು
ವಿಧಾನಸಭೆಯಲ್ಲಿ
ಬಜೆಟ್
ಮಂಡನೆ
ಮಾಡಿದ
ಪನ್ನೀರ್
ಸೆಲ್ವಂ
ತಮ್ಮ
ಭಾಷಣದಲ್ಲಿ
ಮೇಕೆದಾಟು
ಯೋಜನೆ
ಬಗ್ಗೆ
ಪ್ರಸ್ತಾಪಿಸಿದರು.
ಮೇಕೆದಾಟುವಿನಲ್ಲಿ
ಕರ್ನಾಟಕ
ಅಣೆಕಟ್ಟು
ನಿರ್ಮಾಣ
ಮಾಡದಂತೆ
ತಡೆಯುತ್ತೇವೆ
ಎಂದು
ಅವರು
ಸದನಕ್ಕೆ
ಭರವಸೆ
ನೀಡಿದರು.
[ಮೇಕೆದಾಟು
ಯೋಜನೆಗೆ
ಮತ್ತೆ
ತಮಿಳುನಾಡು
ಅಡ್ಡಗಾಲು]
ಪ್ರಧಾನಿಗೆ ಪತ್ರ : ಮೇಕೆದಾಟುವಿನಲ್ಲಿ ಅಣೆಕಟ್ಟು ನಿರ್ಮಿಸದಂತೆ ಕರ್ನಾಟಕ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಮಿಳುನಾಡು ಮುಖ್ಯಮಂತ್ರಿ ಪನ್ನೀರ್ ಸೆಲ್ವಂ ಅವರು ಶನಿವಾರ ಪತ್ರ ಬರೆದಿದ್ದರು. [ಮೇಕೆದಾಟು ಯೋಜನೆ ವಿವಾದವೇನು?]
ಕರ್ನಾಟಕ ಮೇಕೆದಾಟುವಿನಲ್ಲಿ 2 ಅಣೆಕಟ್ಟು ನಿರ್ಮಿಸುವ ಏಕಪಕ್ಷೀಯ ನಿರ್ಧಾರವನ್ನು ಕೈಗೊಂಡಿದೆ. ಅಣೆಕಟ್ಟು ನಿರ್ಮಾಣ ಮಾಡಿದರೆ, ಅದು ಕಾವೇರಿ ನ್ಯಾಯಾಧೀಕರಣದ ಅಂತಿಮ ತೀರ್ಪಿನ ಉಲ್ಲಂಘನೆಯಾಗುತ್ತದೆ, ತಮಿಳುನಾಡಿಗೆ ಹರಿದು ಬರುವ ನೀರಿನಲ್ಲಿ ಕೊರತೆ ಉಂಟಾಗುತ್ತದೆ ಎಂದು ಪತ್ರದಲ್ಲಿ ತಿಳಿಸಿದ್ದರು. [ಮೇಕೆದಾಟು ವಿರುದ್ಧ ಸುಪ್ರೀಂಗೆ ತಮಿಳುನಾಡು ಮೊರೆ]
ಮಾರ್ಚ್ 28ರಂದು ತಮಿಳುನಾಡು ಬಂದ್ : ಕೆಲವು ದಿನಗಳ ಹಿಂದೆ ತಮಿಳುನಾಡಿನ ರೈತರು ಮೇಕೆದಾಟು ಬಳಿ ಯೋಜನೆ ವಿರೋಧಿಸಿ ಪ್ರತಿಭಟನೆ ನಡೆಸಿದ್ದರು. ಅಣೆಕಟ್ಟು ನಿರ್ಮಿಸುವ ಕರ್ನಾಟಕದ ಪ್ರಸ್ತಾವನೆ ವಿರೋಧಿಸಿ ಮಾ.28ರಂದು ತಮಿಳುನಾಡು ಬಂದ್ಗೆ ಕರೆ ನೀಡಲಾಗಿದೆ.
ಕರ್ನಾಟಕದಲ್ಲಿ ಪ್ರತಿಭಟನೆ : ಮೇಕೆದಾಟು ಯೋಜನೆ ವಿರೋಧಿಸುತ್ತಿರುವ ತಮಿಳುನಾಡು ಸರ್ಕಾರದ ವಿರುದ್ಧ ಮಾ. 28ರಂದು ಕನ್ನಡಪರ ಸಂಘಟನೆಗಳು ರಾಜ್ಯಾದ್ಯಂತ ಹೋರಾಟ ನಡೆಸಲಿವೆ ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಹೇಳಿದ್ದಾರೆ.
ಬೆಂಗಳೂರಿನ ಮೈಸೂರು ಬ್ಯಾಂಕ್ ವೃತ್ತದಲ್ಲಿ ಕನ್ನಡ ಪರ ಸಂಘಟನೆಗಳು ಭಾರೀ ಪ್ರತಿಭಟನೆ ನಡೆಸಲಿವೆ. ರಾಮನಗರ, ಮೈಸೂರು ಹಾಗೂ ಮಂಡ್ಯ ಜಿಲ್ಲಾಧಿಕಾರಿಗಳ ಕಚೇರಿ ಎದುರು ನೂರಾರು ರೈತರು ಕನ್ನಡ ಪರ ಸಂಘಟನೆಗಳೊಂದಿಗೆ ಪ್ರತಿಭಟನೆ ನಡೆಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.