ತಮಿಳುನಾಡಿನಲ್ಲಿ ಭೀಕರ ಅಪಘಾತ, 9 ಮಂದಿ ಸಾವು
ದಿಂಡಿಗಲ್, ಏ.3: ತಮಿಳುನಾಡಿನ ದಿಂಡಿಗಲ್ ಜಿಲ್ಲೆಯಲ್ಲಿ ಶುಕ್ರವಾರ ಮುಂಜಾನೆ ನಡೆದ ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ 9 ಮಂದಿ ಸಾವನ್ನಪ್ಪಿರುವ ದುರ್ಘಟನೆ ಸಂಭವಿಸಿದೆ.
ಕೊಡೈಕೆನಾಲ್
ಗೆ
ಪ್ರವಾಸಕ್ಕೆಂದು
ಬಂದಿದ್ದ
ಕುಟುಂಬದವರು
ಕರೂರು
ಕಡೆಗೆ
ತೆರಳುವಾಗ
ಈ
ಅಪಘಾತ
ಸಂಭವಿಸಿದೆ.
ಟೊಯೋಟಾ
ಕ್ವಾಲಿಸ್
ನಲ್ಲಿದ್ದ
9
ಜನರು
ದುರ್ಮರಣ
ಹೊಂದಿದ್ದಾರೆ.
ಓರ್ವ
ವ್ಯಕ್ತಿ
ತೀವ್ರವಾಗಿ
ಗಾಯಗೊಂಡಿದ್ದು
ಸಮೀಪದ
ಆಸ್ಪತ್ರೆಗೆ
ಸೇರಿಸಿ
ಚಿಕಿತ್ಸೆ
ನೀಡಲಾಗುತ್ತಿದೆ.
ದಿಂಡಿಗಲ್
ನಿಂದ
ಸುಮಾರು
18
ಕಿ.ಮೀ
ದೂರದಲ್ಲಿರುವ
ಸೆಂಪಟ್ಟಿ
ಸಿದ್ದಯ್ಯನಕೋಟೆ
ಬಳಿ
ಟೊಯೋಟಾ
ಕ್ವಾಲಿಸ್
ತೆರಳುತ್ತಿದ್ದಾಗ
ಎದುರಿಗೆ
ಬಂದ
ಹಾಲಿನ
ಟ್ಯಾಂಕರ್
ವಾಹನ
ಡಿಕ್ಕಿ
ಹೊಡೆದಿದೆ.
ಅಪಘಾತದ
ತೀವ್ರತೆ
9
ಸ್ಥಳದಲ್ಲೇ
ಸಾವನ್ನಪ್ಪಿದ್ದಾರೆ.
ಮೃತರೆಲ್ಲರೂ
ತಮಿಳುನಾಡಿನ
ಅರವಕುಂಚಿ
ನಿವಾಸಿಗಳು
ಎಂದು
ತಿಳಿದು
ಬಂದಿದೆ.
[ತಮಿಳುನಾಡಿನ
ಅಪಘಾತ
ಕುರಿತ
ವಿಡಿಯೋ
ಇಲ್ಲಿ
ನೋಡಿ]
ಕರ್ನಾಟಕದ ಅಪಘಾತ ಸುದ್ದಿ: ಹೈದರಾಬಾದಿನಿಂದ ನಿಂದ ಮಂಗಳೂರಿಗೆ ತೆರಳುತ್ತಿದ್ದ ಖಾಸಗಿ ವೋಲ್ವೋ ಬಸ್ ಪಲ್ಟಿ ಪಡೆದಿದೆ, 32 ಮಂದಿ ಪ್ರಯಾಣಿಕರು ಗಾಯಗೊಂಡಿರುವ ಘಟನೆ ಹಳ್ಳಿಗುಡಿ ಗ್ರಾಮದ ಬಳಿ ನಡೆದಿದೆ.
ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಹಳ್ಳಿಗುಡಿ ಗ್ರಾಮದಲ್ಲಿ ಈ ಅಪಘಾತ ಸಂಭವಿಸಿದ್ದು, ಐವರ ಸ್ಥಿತಿ ಚಿಂತಾಜನಕವಾಗಿದೆ. ಗಾಯಾಳುಗಳನ್ನು ಹುಬ್ಬಳ್ಳಿಯ ಕಿಮ್ಸ್, ಗದಗದ ಜಿಲ್ಲಾಸ್ಪತ್ರೆ,ಕೊಪ್ಪಳ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮುಂಡರಗಿ ಠಾಣಾ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮಂಡ್ಯದಲ್ಲಿ ಅಪಘಾತ: ರಾಮನಗರ ಬಳಿ ಶುಕ್ರವಾರ ಬೆಳಗ್ಗೆ ಸಂಭವಿಸಿದ ಅಪಘಾತದಲ್ಲಿ ಮಂಡ್ಯ ಮೂಲದ ಇಬ್ಬರು ಯುವಕರು ಸಾವನ್ನಪ್ಪಿದ್ದಾರೆ. ಯುವಕರಿಬ್ಬರು ಮೈಸೂರಿನಿಂದ ಬೆಂಗಳೂರಿನ ಕಡೆಗೆ ಬೈಕಿನಲ್ಲಿ ಬರುತ್ತಿದ್ದರು. ಮುಂದೆ ಹೋಗುತ್ತಿದ್ದ ಕಾರನ್ನು ಓವರ್ ಟೇಕ್ ಮಾಡುವ ಸಂದರ್ಭದಲ್ಲಿ ಕಾರಿಗೆ ಡಿಕ್ಕಿ ಹೊಡೆದು ಕೆಳಗೆ ಬಿದ್ದಿದ್ದಾರೆ. ತಲೆಗೆ ತೀವ್ರ ಪೆಟ್ಟು ಬಿದ್ದ ಕಾರಣ ರಕ್ತಸ್ರಾವವಾಗಿ ಸಾವನ್ನಪ್ಪಿದ್ದಾರೆ. ರಾಮನಗರ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.