ಜಯಾ ಸಾವು ನ್ಯಾಯಾಂಗ ತನಿಖೆಗೆ: ಓ ಪನ್ನೀರ್ ಸೆಲ್ವಂ
ತಮಿಳರ ಪಾಲಿನ 'ಅಮ್ಮ' ಪುರಚ್ಚಿ ತಲೈವಿ ಜೆ ಜಯಲಲಿತಾ ಅವರ ಸಾವಿನ ನಿಗೂಢತೆ ಬಹಿರಂಗವಾಗಲಿ, ಜನತೆಗೆ ಸತ್ಯಾಂಶ ತಿಳಿಯಲಿ ಎಂಬ ದೃಷ್ಟಿಯಿಂದ ನಾನು ಈ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ವಹಿಸಿದ್ದೇನೆ-ಓಪಿಎಸ್
ಚೆನ್ನೈ, ಫೆಬ್ರವರಿ 08: ತಮಿಳರ ಪಾಲಿನ 'ಅಮ್ಮ' ಪುರಚ್ಚಿ ತಲೈವಿ ಜೆ ಜಯಲಲಿತಾ ಅವರ ಸಾವಿನ ನಿಗೂಢತೆ ಬಹಿರಂಗವಾಗಲಿ, ಜನತೆಗೆ ಸತ್ಯಾಂಶ ತಿಳಿಯಲಿ ಎಂಬ ದೃಷ್ಟಿಯಿಂದ ನಾನು ಈ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ವಹಿಸಿದ್ದೇನೆ ಎಂದು ತಮಿಳನಾಡಿನ ಹಂಗಾಮಿ ಮುಖ್ಯಮಂತ್ರಿ ಓ ಪನ್ನೀರ್ ಸೆಲ್ವಂ ಘೋಷಿಸಿದ್ದಾರೆ.[ಸ್ವಾಮಿನಿಷ್ಠೆಯ ಪ್ರತೀಕ ಪನ್ನೀರ್ ಸೆಲ್ವಂ ವ್ಯಕ್ತಿಚಿತ್ರ]
ಚೆನ್ನೈನಲ್ಲಿ ಬುಧವಾರ ಬೆಳಗ್ಗೆ ಸುದ್ದಿಗೋಷ್ಠಿ ನಡೆಸಿದ ಪನ್ನೀರ್ ಅವರು, ' ನನ್ನ ಮೇಲೆ ಒತ್ತಡ ಹೇರಿ ರಾಜೀನಾಮೆ ಪಡೆದುಕೊಂಡರು. ಜನತೆಯ ಬಯಸಿದರೆ ನಾನು ರಾಜೀನಾಮೆ ಹಿಂಪಡೆಯುತ್ತೇನೆ ಎಂದು ಎಐಎಡಿಎಂಕೆ ಅಧಿನಾಯಕಿ, ನಿಯೋಜಿತ ಸಿಎಂ ಶಶಿಕಲಾ ನಟರಾಜನ್ ವಿರುದ್ಧ ತಿರುಗಿ ಬಿದ್ದಿದ್ದಾರೆ.[ರಾತ್ರೋರಾತ್ರಿ ಪನ್ನೀರ್ ಮಾಡಿದ್ದು ಧ್ಯಾನವೋ, ಬಂಡಾಯದ ತೀರ್ಮಾನವೋ?]
ದೀಪಾ ಬಗ್ಗೆ: ದೀಪಾ ಜಯಕುಮಾರ್ ಅವರ ಬಗ್ಗೆ ನನಗೆ ಅಪಾರ ಗೌರವವಿದೆ. ನನ್ನ ನಿರ್ಧಾರಕ್ಕೆ ಅವರು ಬೆಂಬಲ ನೀಡುತ್ತಾರೆ ಎಂಬ ಭರವಸೆ ಇದೆ ಎಂದರು.[ಪನ್ನೀರ್ ಗೆ ಇದ್ದಕ್ಕಿದ್ದಂತೆ ಏನಾಯಿತು? ಯಾಕೆ ಹೀಗೆ ಆಡ್ತಿದ್ದಾರೆ?]
*
ಪಕ್ಷದ
ಶಾಸಕರಿಗೆ
ನಾನು
ಕರೆ
ನೀಡುವುದೇನೆಂದರೆ,
ನಿಮ್ಮ
ನಿಮ್ಮ
ಕ್ಷೇತ್ರದ
ಅಭಿವೃದ್ಧಿ
ಹಾಗೂ
ಜನರ
ಆಶಯಕ್ಕೆ
ಬದ್ಧರಾಗಿರಿ
*
ಬಹುಮತ
ಸಾಬೀತು
ಪಡಿಸುವುದು
ದೊಡ್ಡ
ವಿಷಯವಲ್ಲ.
ಜನರ
ವಿಶ್ವಾಸ
ಮುಖ್ಯ
*
ಅಪೊಲೋ
ಆಸ್ಪತ್ರೆಯಲ್ಲಿ
ಜಯಲಲಿತಾ
ಅವರು
ಚಿಕಿತ್ಸೆ
ಪಡೆಯುತ್ತಿದ್ದಾಗ,
ನನಗೆ
ಅವರನ್ನು
ಭೇಟಿ
ಮಾಡಲು
ಅವಕಾಶ
ನೀಡದಿರುವುದು
ಇನ್ನೂ
ಕಾಡುತ್ತಿದೆ.
ಈ ನಡುವೆ ಕಳೆದ ರಾತ್ರಿ ದಿಢೀರ್ ಆಗಿ ಶಾಸಕಾಂಗ ಸಭೆ ಕರೆದ ನಿಯೋಜಿತ ಸಿಎಂ ಶಶಿಕಲಾ ಅವರು ಓ ಪನ್ನೀರ್ ಸೆಲ್ವಂರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ತೆಗೆದು ಹಾಕಲಾಯಿತು. ಅವರ ಸ್ಥಾನಕ್ಕೆ ದಿಂಡಿಗಲ್ ಶ್ರೀನಿವಾಸನ್ ಅವರನ್ನು ನೇಮಿಸಲಾಗಿದೆ.