ತಮಿಳುನಾಡಿನ ಮುಖ್ಯಮಂತ್ರಿ ಇಕೆ ಪಳನಿಸ್ವಾಮಿ ವ್ಯಕ್ತಿಚಿತ್ರ
ಪಳನಿಸ್ವಾಮಿ ಅವರು 12ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲು ಸಿದ್ಧರಾಗುತ್ತಿದ್ದಾರೆ. ಇಪಿಎಸ್ ಎಂದು ಕರೆಯಲ್ಪಡುವ ಎಡಪ್ಪಾಡಿ ಪಳನಿಸ್ವಾಮಿ ಅವರ ವ್ಯಕ್ತಿಚಿತ್ರ ಇಲ್ಲಿದೆ...
ಚೆನ್ನೈ, ಫೆಬ್ರವರಿ 16: ಎಐಎಡಿಎಂಕೆ ಶಾಸಕಾಂಗ ಪಕ್ಷದ ನಾಯಕ ಎಡಪ್ಪಾಡಿ ಕೆ. ಪಳನಿಸ್ವಾಮಿ ಅವರಿಗೆ ಸರ್ಕಾರ ರಚಿಸುವಂತೆ ರಾಜ್ಯಪಾಲ ಸಿ. ವಿದ್ಯಾಸಾಗರ್ ರಾವ್ ಆಹ್ವಾನ ನೀಡಿದ್ದಾರೆ. ಈ ಮೂಲಕ ಪಳನಿಸ್ವಾಮಿ ಅವರು 12ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲು ಸಿದ್ಧರಾಗುತ್ತಿದ್ದಾರೆ. ಇಪಿಎಸ್ ಎಂದು ಕರೆಯಲ್ಪಡುವ ಎಡಪ್ಪಾಡಿ ಪಳನಿಸ್ವಾಮಿ ಅವರ ವ್ಯಕ್ತಿಚಿತ್ರ ಇಲ್ಲಿದೆ...
ಅಕ್ರಮ ಆಸ್ತಿ ಪ್ರಕರಣದಲ್ಲಿ ಅಪರಾಧಿ ಎನಿಸಿದ ಮೇಲೆ ಚೆನ್ನೈನಿಂದ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿಗೆ ತೆರಳುವುದಕ್ಕೂ ಮುನ್ನ ಪ್ರಧಾನ ಕಾರ್ಯದರ್ಶಿ ಶಶಿಕಲಾ ನಟರಾಜನ್ ಅವರು ಇ ಪಳನಿಸ್ವಾಮಿ ಹೆಸರನ್ನು ಸಿಎಂ ಸ್ಥಾನಕ್ಕೆ ಸೂಚಿಸಿ, ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆ ಮಾಡಿದ್ದರು.[ತಮಿಳುನಾಡು ಮುಖ್ಯಮಂತ್ರಿಯಾಗಿ ಕೆ ಪಳನಿಸ್ವಾಮಿ]
ದಿವಂಗತ
ಸಿಎಂ
ಜೆ
ಜಯಲಲಿತಾ
ಅವರು
ಮೂರು
ದಶಕಗಳ
ಕೆಳಗೆ
ತಮ್ಮ
ಆಪ್ತ
ಬಳಗದಲ್ಲಿ
ಒಬ್ಬರಾಗಿ
ಪಳನಿಸ್ವಾಮಿ
ಅವರನ್ನು
ಸೇರಿಸಿಕೊಂಡಿದ್ದರು.
ಸದ್ಯ
ಲೋಕೋಪಯೋಗಿ,
ಹೆದ್ದಾರಿ
ಹಾಗೂ
ಸಣ್ಣ
ಬಂದರು
ಖಾತೆ
ಸಚಿವರಾಗಿರುವ
ಪಳನಿಸ್ವಾಮಿ
ಅವರು
ಓ
ಪನ್ನೀರ್
ಸೆಲ್ವಂರಂತೆ
ತಮಿಳರ
'ಅಮ್ಮ'
ಜಯಲಲಿತಾ
ಅವರ
ನಿಷ್ಠಾವಂತ
ಸೇನಾನಿ.
ವೈಯಕ್ತಿಕ ಹಿನ್ನಲೆ
62 ವರ್ಷ ವಯಸ್ಸಿನ ಪಳನಿಸ್ವಾಮಿ ಅವರು ಸೇಲಂ ಜಿಲ್ಲೆ, ಎಡಪ್ಪಾಡಿ ತಾಲೂಕಿನ, ನೆಡುಡಂಗಲಂ ಗ್ರಾಮಕ್ಕೆ ಸೇರಿದವರು. ಗೌಂಡರ್ ಸಮುದಾಯ ಮುಖಂಡರಾಗಿ ಹೆಸರು ಮಾಡಿದವರು. ತಮಿಳುನಾಡಿನಲ್ಲಿ ಗೌಂಡರ್ ಸಮುದಾಯ ಒಬಿಸಿಗೆ ಸೇರಿದೆ. ಪತ್ನಿ ಹೆಸರು ರಾಧಾ, ಮಗನ ಹೆಸರು ನಿತಿನ್.
ರಾಜಕೀಯ ಬದುಕು
1980ರ
ದಶಕದಲ್ಲಿ
ಎಐಎಡಿಎಂಕೆ
ಸೇರಿದ
ಪಳನಿ
ಸ್ವಾಮಿ
ಅವರು
ಎಂಜಿ
ರಾಮಚಂದ್ರನ್
ಆವರ
ಅಕಾಲಿಕ
ಸಾವಿನ
ನಂತರ
ಪಕ್ಷ
ಇಬ್ಭಾಗವಾಗುವ
ಸ್ಥಿತಿ
ತಲುಪಿದಾಗ
ಜಯಲಲಿತಾ
ಪರ
ವಹಿಸಿಕೊಂಡರು.
1989ರಲ್ಲಿ
ಅಸೆಂಬ್ಲಿ
ಟಿಕೆಟ್
ಪಡೆದು
ಮೊದಲ
ಬಾರಿಗೆ
ಎಡಪ್ಪಾಡಿ
ಕ್ಷೇತ್ರದಿಂದ
ಗೆಲುವು
ಕಂಡರು.
ನಂತರ
1991,
2011
ಹಾಗೂ
2016ರಲ್ಲಿ
ಚುನಾವಣೆ
ಗೆದ್ದು
ಶಾಸಕರಾದರು.
ಮೇ
2016ರಲ್ಲಿ
42,022
ಅಂತರದ
ಮತಗಳಿಂದ
ಸುಲಭವಾಗಿ
ಜಯ
ಗಳಿಸಿ
ಕ್ಷೇತ್ರದ
ಮೇಲೆ
ಹಿಡಿತ
ಸಾಧಿಸಿದರು.
ಯೋಜನೆಗಳನ್ನು ತಲುಪಿಸಿದವರು
ಪಳನಿಸ್ವಾಮಿ ಅವರು ಒಬಿಸಿ ನಾಯಕರಾಗಿ ಬೆಳೆದಿದ್ದು, ರಾಜಕೀಯವಾಗಿಯೂ ಪ್ರಭಾವ ಹೊಂದಿದ್ದಾರೆ. ಜಯಲಲಿತಾ ಅವರ ನಂಬುಗೆಯ ವಲಯದಲ್ಲಿ ಪಳನಿಸ್ವಾಮಿ ಕೂಡಾ ಒಬ್ಬರಾಗಿದ್ದಾರೆ. ಜಿಲ್ಲಾ ಮಟ್ಟದ ಕಾರ್ಯಕರ್ತರ ಜತೆ ಒಡನಾಟ ಹೊಂದಿರುವ ಪಳನಿಸ್ವಾಮಿ ಮುಖಾಂತರ ಗ್ರಾಮಾಂತರ ಭಾಗಗಳಿಗೂ ಜಯಾ ಅವರ ಸರ್ಕಾರದ ಆಶ್ವಾಸನೆ, ಯೋಜನೆಗಳನ್ನು ತಲುಪಿಸಿದವರು.
ಶಶಿಕಲಾ ಆಯ್ಕೆಯ ಸಿಎಂ
ಡಿಸೆಂಬರ್ 2016ರಲ್ಲಿ ಜಯಲಲಿತಾ ಅವರು ನಿಧನರಾದ ಬಳಿಕ ಸಿಎಂ ಸ್ಥಾನಕ್ಕೆ ಕೇಳಿ ಬಂದ ಹೆಸರುಗಳಲ್ಲಿ ಪಳನಿಸ್ವಾಮಿ ಮೂರನೆಯದ್ದಾಗಿದೆ. ಶಶಿಕಲಾ, ಪನ್ನೀರ್ ಸೆಲ್ವಂ, ಸಂಗೊಟ್ಟಿಯನ್ ಹೆಸರುಗಳು ಬಂದಿತ್ತು.
ಜಯಾ ಆಪ್ತವಲಯದ 'ನಲ್ವರ್ ಅನಿ' ನಾಲ್ವರ ಗುಂಪಿನಲ್ಲಿ ಪಳನಿಸ್ವಾಮಿ ಮುಖ್ಯರಾಗಿದ್ದಾರೆ. ಪನ್ನೀರ್ ಸೆಲ್ವಂ, ವೇಲುಮಣಿ, ತಂಗಮಣಿ ಉಳಿದ ಮೂವರು. ಜಯಾ ಸಾವಿನ ನಂತರ ಸೇಲಂನಲ್ಲಿ ಇತ್ತೀಚೆಗೆ ಜನಬಲ ಕಳೆದುಕೊಂಡಿರುವುದು ಸ್ವಲ್ಪ ಯೋಚನೆಯ ಸಂಗತಿಯಾಗಿದೆ.