ಜಯಲಲಿತಾ ನಿಧನ ನಂತರದ 10 ಬೆಳವಣಿಗೆ
ಚೆನ್ನೈ, ಡಿಸೆಂಬರ್ 6: ಜಯಲಲಿತಾ ಪಾರ್ಥಿವ ಶರೀರದ ಮೇಲೆ ತ್ರಿವರ್ಣ ಧ್ವಜ ಹೊದಿಸಿ, ಮಂಗಳವಾರ ಬೆಳಗ್ಗೆ ರಾಜಾಜಿ ಹಾಲ್ ಕಡೆಗೆ ತೆಗೆದುಕೊಂಡು ಹೋಗಲಾಯಿತು. ಇನ್ನು ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ಅವಕಾಶ. ಲಕ್ಷಾಂತರ ಸಂಖ್ಯೆಯ ಆಕೆ ಬೆಂಬಲಿಗರು ಆ ಸ್ಥಳಕ್ಕೆ ತೆರಳಲು, ತಮ್ಮ ನೆಚ್ಚಿನ ನಾಯಕಿಯನ್ನು ಕೊನೆ ಬಾರಿಗೆ ನೋಡಲು ಸಾಗರದಂತೆ ಇದ್ದಾರೆ.
[ಗ್ಯಾಲರಿ: ಶೋಕಸಾಗರದಲ್ಲಿ 'ಅಮ್ಮ'ನ ಮಕ್ಕಳು]
ಜಯಲಲಿತಾ
ನಿಧನ
ನಂತರದ
ಹತ್ತು
ಬೆಳವಣಿಗೆಗಳನ್ನು
ಇಲ್ಲಿ
ನೀಡಲಾಗಿದೆ.
-ಅಪೋಲೋ
ಆಸ್ಪತ್ರೆಯಲ್ಲಿ
ಸೋಮವಾರ
ರಾತ್ರಿ
11.30ಕ್ಕೆ
ಜಯಲಲಿತಾ
ನಿಧನ
-ಪಾರ್ಥಿವ ಶರೀರವನ್ನು ಮೊದಲಿಗೆ ಪೋಯೆಸ್ ಗಾರ್ಡನ್ ನಲ್ಲಿರುವ ಮನೆಗೆ ತೆಗೆದುಕೊಂಡು ಹೋಗಿ ಅಂತಿಮ ಸಂಸ್ಕಾರ ನಡೆಸಿದ ನಂತರ ರಾಜಾಜಿ ಹಾಲ್ ಗೆ
-ತಮಿಳುನಾಡಿನಲ್ಲಿ ಏಳು ದಿನಗಳ ಶೋಕಾಚರಣೆ ಘೋಷಿಸಿದ ರಾಜ್ಯಪಾಲ
-ಶಾಲೆ-ಕಾಲೇಜುಗಳಿಗೆ ಮೂರು ದಿನ ರಜಾ ಘೋಷಣೆ
-ಒ.ಪನ್ನೀರ್ ಸೆಲ್ವಂ ತಮಿಳುನಾಡಿನ ಹೊಸ ಮುಖ್ಯಮಂತ್ರಿ
-ರಾಜ್ಯಪಾಲರ ಸಮ್ಮುಖದಲ್ಲಿ 31 ಸಚಿವರು ಅಧಿಕಾರ ಸ್ವೀಕಾರ
-ತ್ರಿವರ್ಣ ಧ್ವಜದಿಂದ ಸುತ್ತಿದ ಜಯಲಲಿತಾ ಪಾರ್ಥಿವ ಶರೀರ ಅಂತಿಮ ದರ್ಶನಕ್ಕಾಗಿ ರಾಜಾಜಿ ಹಾಲ್ ನಲ್ಲಿ ಅವಕಾಶ
-ಎಂಜಿಆರ್ ಸಮಾಧಿಯ ಬಳಿ ಮರೀನಾದಲ್ಲಿ ಮಂಗಳವಾರ ಸಂಜೆ 4ಕ್ಕೆ ಜಯಲಲಿತಾ ಅಂತ್ಯಕ್ರಿಯೆ