2 ಸಾವಿರ ರುಪಾಯಿ ನೋಟಿನಲ್ಲಿ ದೇವನಾಗರಿ ಯಾಕೆ?
ಭಾರತ ಸಂವಿಧಾನದ 343ನೇ ಪರಿಚ್ಛೇದದ ಪ್ರಕಾರ ಅಧಿಕೃತ ಉದ್ದೇಶಗಳಿಗೆ ಅಂತರರಾಷ್ಟ್ರಿಯ ಮಟ್ಟದಲ್ಲಿ ಮಾನ್ಯತೆ ಪಡೆದ ಭಾರತೀಯ ಸಂಖ್ಯೆಗಳನ್ನೇ ಬಳಸಬೇಕು. 'ಅಧಿಕೃತ ಭಾಷೆಗಳ ಕಾಯ್ದೆ' 1963ರ ಪ್ರಕಾರ ದೇವನಾಗರಿ ಸಂಖ್ಯೆಗಳನ್ನು ಬಳಸಲು ಅವಕಾಶ ಇಲ್ಲ.
ಚೆನ್ನೈ, ನವೆಂಬರ್ 22: ಹೊಸ 2 ಸಾವಿರ ರುಪಾಯಿ ನೋಟಿನಲ್ಲಿ ದೇವನಾಗರಿ ಸಂಖ್ಯೆಯನ್ನು ಹೇಗೆ ಬಳಸಿದಿರಿ? ಅದಕ್ಕೆ ಅಧಿಕಾರ ನೀಡಿದವರು ಯಾರು ಎಂದು ಮದ್ರಾಸ್ ಹೈಕೋರ್ಟ್ ನ ಮದುರೈ ಪೀಠವು ಸರಕಾರವನ್ನು ಪ್ರಶ್ನಿಸಿದೆ. ಈ ಸಂಬಂಧ ವಿವರಣೆ ನೀಡಬೇಕು ಎಂದು ಹಣಕಾಸು ಸಚಿವಾಲಯವನ್ನು ಕೇಳಿದೆ.
ಮದುರೈನ ಕೆಪಿಟಿ ಗಣೇಸನ್ ಅವರ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯನ್ನು ಕೈಗೆತ್ತಿಕೊಂಡ ಮದುರೈ ಪೀಠ, ಸರಕಾರವನ್ನು ಪ್ರಶ್ನೆ ಮಾಡಿದೆ. 2 ಸಾವಿರ ನೋಟಿಗೆ ಮಾನ್ಯತೆ ಇಲ್ಲ. ಏಕೆಂದರೆ ಅದರಲ್ಲಿ ದೇವನಾಗರಿ ಸಂಖ್ಯೆ ಬಳಸಲಾಗಿದೆ. ಇದು ಭರತೀಯ ಸಂವಿಧಾನದ ಉಲ್ಲಂಘನೆಯಾಗುತ್ತದೆ ಎಂದು ಪಿಐಎಲ್ ನಲ್ಲಿ ತಿಳಿಸಲಾಗಿದೆ.[ಎರಡು ಸಾವಿರ ರುಪಾಯಿ ನೋಟಿನಲ್ಲಿ ಕಾಗುಣಿತ ತಪ್ಪು?]
ಭಾರತ ಸಂವಿಧಾನದ 343ನೇ ಪರಿಚ್ಛೇದದ ಪ್ರಕಾರ ಅಧಿಕೃತ ಉದ್ದೇಶಗಳಿಗೆ ಅಂತರರಾಷ್ಟ್ರಿಯ ಮಟ್ಟದಲ್ಲಿ ಮಾನ್ಯತೆ ಪಡೆದ ಭಾರತೀಯ ಸಂಖ್ಯೆಗಳನ್ನೇ ಬಳಸಬೇಕು. 'ಅಧಿಕೃತ ಭಾಷೆಗಳ ಕಾಯ್ದೆ' 1963ರ ಪ್ರಕಾರ ದೇವನಾಗರಿ ಸಂಖ್ಯೆಗಳನ್ನು ಬಳಸಲು ಅವಕಾಶ ಇಲ್ಲ. ಆದ್ದರಿಂದ 2 ಸಾವಿರ ರುಪಾಯಿ ಹೊಸ ನೋಟನ್ನು ಅಮಾನ್ಯ ಎಂದು ಘೋಷಿಸಲು ಅರ್ಜಿದಾರರ ಪರ ವಕೀಲರು ವಾದ ಮಂಡಿಸಿದ್ದಾರೆ.