ಚಾಮರಾಜನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಾವೇರಿಯಲ್ಲಿ ಮುಳುಗಿ ಬೆಂಗ್ಳೂರಿನ ವಿದ್ಯಾರ್ಥಿಗಳು ಸಾವು

By Ananthanag
|
Google Oneindia Kannada News

ಚಾಮರಾಜನಗರ, ಜನವರಿ 13: ಶಿವನಸಮುದ್ರಕ್ಕೆ ಪ್ರವಾಸಕ್ಕೆಂದು ತೆರಳಿದ್ದ ಬೆಂಗಳೂರಿನ ಯಲಹಂಕದ ಬಿಎಸ್ಎಸ್ ಕಾಲೇಜಿನ ಮೂವರು ವಿದ್ಯಾರ್ಥಿಗಳಲ್ಲಿ ಇಬ್ಬರು ಕಾವೇರಿ ನೀರಿನಲ್ಲಿ ಮುಳುಗಿ ಮೃತರಾಗಿದ್ದಾರೆ. ಒಬ್ಬರು ಜೀವನ್ಮರಣ ಹೋರಟ ನಡೆಸುತ್ತಿದ್ದಾರೆ.

ಚಾಮರಾಜಗರದ ಕೊಳ್ಳೆಗಾಲ ಠಾಣಾ ವ್ಯಾಪ್ತಿಯ ಶಿಂಷಾ ಎಂಬಲ್ಲಿ ಈ ಘಟನೆ ನಡೆದಿದ್ದು, ಶ್ರೀನಿವಾಸ್ ಮತ್ತು ದೇವರಾಜು ಕಾವೇರಿ ನೀರಿನಲ್ಲಿ ಮುಳುಗಿ ಮೃತಪಟ್ಟವರು. ಇನ್ನು ಜೊತೆಯಲ್ಲಿ ಹೋಗಿದ್ದ ವಿಜಯಪುರದ ಮಹದೇವ್ ಅವರು ಚಿಂತಾಜನಕ ಸ್ಥಿತಿಯನ್ನು ತಲುಪಿದ್ದು ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ.[ಉಡುಪಿ : ಈಜಲು ಹೋಗಿ ಇಬ್ಬರು ಯುವಕರು ನದಿ ಪಾಲು]

shivana samudra

ಶ್ರೀನಿವಾಸ್, ದೇವರಾಜು ಮತ್ತು ಮಹದೇವ್ ಮೂವರು ಬೆಂಗಳೂರಿನ ಯಲಹಂಕದಲ್ಲಿರುವ ಬಿ.ಎಸ್.ಎಸ್ ಕಾಲೇಜಿನ ವಿದ್ಯಾರ್ಥಿಗಳು ಇವರು ಶಿವನಸಮುದ್ರಕ್ಕೆ ಪ್ರವಾಸಕ್ಕೆಂದು ತೆರಳಿದ್ದರು. ಈ ವೇಳೆ ಕಾವೇರಿ ನದಿಯಲ್ಲಿ ಈಜಲು ಇಳಿದಿದ್ದಾರೆ.ಆದರೆ ನೀರಿನಲ್ಲಿ ಸೆಳೆತವಿದ್ದು, ನೀರಿನಲ್ಲಿ ಕೊಚ್ಚಿಹೋಗಿದ್ದಾರೆ. ನೀರಿನಲ್ಲಿ ಶ್ರೀನಿವಾಸ್ ಹಾಗೂ ದೇವರಾಜು ನೀರಿನಲ್ಲಿ ಮುಳುಗಿ ಮೃತರಾಗಿದ್ದು, ಮಹದೇವ್ ಅವರು ಚಿಂತಾಜನಕ ಸ್ಥಿತಿಯನ್ನು ತಲುಪಿದ್ದು, ಕೊಳ್ಳೇಗಾಲದ ಜನನಿ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ.

ಇನ್ನು ಈ ಸಂಬಂಧ ಕೊಳ್ಳೇಗಾಲ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆಗೆ ಮುಂದಾಗಿದ್ದಾರೆ.

English summary
In the three students who went on the trip Shivasamudra, Kollegal near Shimsha the two youths is died to go swim in kaveri river on friday Jan, 13th. The 3 student is bengalore bss college students.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X