ಇನ್ನುಮೇಲೆ ಕೊಳ್ಳೇಗಾಲ ಸಿಸಿಟಿವಿ ಕಣ್ಗಾವಲಲ್ಲಿ!
ಕೊಳ್ಳೇಗಾಲದಲ್ಲಿ ಪದೇ ಪದೇ ನಡೆಯುವ ಅಹಿತಕರ ಘಟನೆಗಳನ್ನು ತಡೆಯುವುದಕ್ಕಾಗಿ, ಸೂಕ್ಷ್ಮ ಪ್ರದೇಶಗಳಲ್ಲಿ ಸಿಸಿಟಿವಿ ಕ್ಯಾಮೆರಾವನ್ನು ಅಳವಡಿಸಲು ಪೊಲೀಸ್ ಇಲಾಖೆ ನಿರ್ಧರಿಸಿದೆ.
ಚಾಮರಾಜನಗರ, ಮಾರ್ಚ್ 21: ಸದಾ ಒಂದಿಲ್ಲೊಂದು ಅಹಿತಕರ ಘಟನೆಗಳಿಂದಲೇ ಸುದ್ದಿಯಾಗುವ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಇದೀಗ ಸಿಸಿಟಿವಿ ಕ್ಯಾಮೆರಾ ಕಾರಣಕ್ಕಾಗಿ ಸುದ್ದಿಯಾಗುತ್ತಿದೆ. ಕೊಳ್ಳೇಗಾಲದಲ್ಲಿ ಹೆಚ್ಚಾಗಿರುವ ಅಪರಾಧ ಪ್ರಕರಣಗಳನ್ನು ತಡೆಯುವ ಸಲುವಾಗಿ ಸಿಸಿಟಿವಿಗಳನ್ನು ಅಳವಡಿಸಲು ಪೊಲೀಸ್ ಇಲಾಖೆ ಮುಂದಾಗಿದೆ.
ಡಿವೈಎಸ್ಪಿ
ಪಿ.ವಿ.ಸ್ನೇಹಾ
ಅವರ
ನಿರ್ದೇಶನದ
ಮೇರೆಗೆ
ಕೊಳ್ಳೇಗಾಲ
ಪಟ್ಟಣ
ಪೊಲೀಸರು
ಸೂಕ್ಷ್ಮ
ಪ್ರದೇಶಗಳನ್ನು
ಗುರುತಿಸಿ,
ಸಿಸಿಟಿವಿ
ಕ್ಯಾಮರಾ
ಅಳವಡಿಸುವ
ಪಕ್ರಿಯೆಗೆ
ಚಾಲನೆ
ನೀಡಿದ್ದಾರೆ.[ಗ್ರಾಮ
ಪಂಚಾಯಿತಿಯಲ್ಲಿ
ಸಿಸಿಟಿವಿ
ಅಳವಡಿಕೆ
ಕಡ್ಡಾಯ]
ಸದ್ಯಕ್ಕೆ
ಪಟ್ಟಣದ
ಸಾರ್ವಜನಿಕ
ಆಸ್ಪತ್ರೆ
ವೃತ್ತದಲ್ಲಿ
ಸಿಸಿಟಿವಿ
ಕ್ಯಾಮರಾ
ಅಳವಡಿಸಿದ್ದು,
ಮುಂದಿನ
ಎರಡು
ತಿಂಗಳೊಳಗೆ
ನಗರದ
ವಿವಿಧ
ಸ್ಥಳಗಳಲ್ಲಿ
ಅಳವಡಿಸಲಾಗುತ್ತಿದೆ.
ಪಟ್ಟಣದಲ್ಲಿ ಶಾಂತಿ ಕಾಪಾಡುವುದು, ಸಾರ್ವಜನಿಕರ ರಕ್ಷಣೆ, ಅಪರಾಧ ತಡೆಗೆ, ಸರಗಳ್ಳತನ, ಮನೆಗಳವು, ಅಪಘಾತ ನಿಯಂತ್ರಣ, ಅಡ್ಡಾದಿಡ್ಡಿ ವಾಹನ ಚಾಲನೆ, ಅತಿವೇಗ ಅಲ್ಲದೆ, ಇನ್ನಿತರ ಸಂಚಾರಿ ನಿಯಮಗಳ ಉಲ್ಲಂಘನೆ ಸೇರಿದಂತೆ ಅಹಿತಕರ ಘಟನೆಗಳನ್ನು ತಡೆಗಟ್ಟುವ ಉದ್ದೇಶ ಸಿಸಿಟಿವಿ ಕ್ಯಾಮೆರಾದ್ದು ಎಂದು ಪಿಎಸ್ಐ ಎಂ.ನಾಯಕ್ ಹೇಳಿದ್ದಾರೆ.[ಸಿಸಿ ಕ್ಯಾಮರಾ ಕಣ್ಗಾವಲಿನಲ್ಲಿ ದಸರಾ ಗಜಪಡೆ]
ಇದಲ್ಲದೆ ಸಾರ್ವಜನಿಕರ ಅನುಕೂಲಕ್ಕಾಗಿ ದೂರು ಪೆಟ್ಟಿಗೆಗಳನ್ನು ಇರಿಸುವ ವ್ಯವಸ್ಥೆ ಮಾಡಲಾಗುತ್ತಿದ್ದು, ಪಟ್ಟಣದ ವಿವಿಧ ಪ್ರದೇಶಗಳಲ್ಲಿ ದೂರು ಪೆಟ್ಟಿಗೆಗಳನ್ನು ಇರಿಸಲಾಗುವುದು. ಸಾರ್ವಜನಿಕರು ಇದರ ಸದುಪಯೋಗ ಪಡಿಸಿಕೊಳ್ಳಬಹುದೆಂದು ಅವರು ಹೇಳಿದ್ದಾರೆ.