ವೈಟ್ ಫೀಲ್ಡ್ ನಲ್ಲಿ ಬಾಗಿಲು ತೆರೆದ ವೈನ್ ಎಕ್ಸ್ ಪ್ರೆಸ್
ಬೆಂಗಳೂರು, ನ.26: ಒಂದು ಕ್ಷಣ ಹೋಗಲೇಬೇಕೆನಿಸಿ ನೆನಪಾಗುವಂತಹ ಒಂದು ಸಂಜೆ. ಮಧುಲೋಕ ಲಿಕ್ಕರ್ ಬೋಟಿಕ್ ಬೆಂಗಳೂರಿನಲ್ಲಿ ಮೊತ್ತಮೊದಲ ವೈನ್ ಎಕ್ಸ್ ಪ್ರೆಸ್ ನ ಬಾಗಿಲನ್ನು ವೈಟ್ ಫೀಲ್ಡ್ ನಲ್ಲಿ ತೆರೆದಿದ್ದು, ನಗರದಾದ್ಯಂತ ಇರುವ ವೈನ್ ಪ್ರಿಯರಿಗೆ ಖುಷಿಯನ್ನು ತಂದಿದೆ.
ಮಧುಲೋಕ ಲಿಕ್ಕರ್ ಬೋಟಿಕ್ ಮತ್ತು ಎನೋಟಿಕಾದ ಸ್ಥಾಪಕರಾದ ಕೆ.ಎಸ್. ಲೋಕೇಶ್ ಅವರ ಕನಸಿನ ಕೂಸಾಗಿರುವ ವೈನ್ ಎಕ್ಸ್ ಪ್ರೆಸ್ ಭಾರತೀಯ ಮತ್ತು ಅಂತಾರಾಷ್ಟ್ರೀಯ ಎರಡೂ ಇರುವಂತಹ ಸುಮಾರು 600 ರಷ್ಟು ವೈನ್ ಲೇಬಲ್ ಗಳನ್ನು ಮಾರಾಟ ಮಾಡುತ್ತಿದೆ.
ನೀವು
ನೋಡಬಯಸುವಂತಹ
ಹಲವಾರು
ವೈನ್
ಲೇಬಲ್
ಗಳು
ಲಭ್ಯವಿರುವುದರ
ಜೊತೆಗೆ,
ವಿವಿಧ
ವೈನ್
ಗಳನ್ನು
ಆಯ್ಕೆ
ಮಾಡಲು
ಸೂಕ್ತವಾದ
ಪರಿಸರ
ಇರುವಂತೆ
ವೈನ್
ಎಕ್ಸ್
ಪ್ರೆಸನ್ನು
ವಿನ್ಯಾಸಗೊಳಿಸಲಾಗಿದೆ.
ಇಲ್ಲಿನ
ಮರದ
ಫಿನಿಶಿಂಗ್
ಸ್ವಾಗತಾರ್ಹ.
ಇಲ್ಲಿ ಒಂದು ಬಾಟಲಿಯನ್ನು ಆಯ್ಕೆ ಮಾಡಿ, ಅಲ್ಲಿಂದ ನೇರವಾಗಿ ಪಾರ್ಟಿಗೆ ಹೋಗುವವರಿದ್ದರೆ ನಿಮಗೆ ನಿಮ್ಮ ಆಯ್ಕೆಯ ವೈನ್ ಚಿಲ್ಲರ್ ಅನ್ನೂ ಒದಗಿಸಲಾಗುತ್ತದೆ. ಒಟ್ಟಿನಲ್ಲಿ ವೈನ್ ಎಕ್ಸ್ ಪ್ರೆಸ್ ನಲ್ಲಿ ಅತ್ಯಂತ ಸಣ್ಣಪುಟ್ಟ ವಿಷಯಗಳನ್ನೂ ಮುತುವರ್ಜಿಯಿಂದ ನೋಡಿಕೊಳ್ಳಲಾಗುತ್ತದೆ.
ವೈನ್ ಎಕ್ಸ್ ಪ್ರೆಸನ್ನು ಉದ್ಘಾಟಿಸಿ ಮಾತನಾಡಿದ ಕರ್ನಾಟಕ ವೈನ್ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕ ಡಾ.ಬಿ. ಕೃಷ್ಣ, "ಕರ್ನಾಟಕ ರಾಜ್ಯವು ವೈನ್ ಸ್ಥಾವರಗಳ ಅಭಿವೃದ್ಧಿಗೆ ಅನುಕೂಲಕರ ತಾಣವಾಗಿದೆ. ಕಳೆದ ಕೆಲವು ವರ್ಷಗಳಿಂದ, ಅತ್ಯದ್ಭುತ ಲೇಬಲ್ ಗಳು ಮುಂಚೂಣಿಗೆ ಬರುತ್ತಿರುವುದನ್ನು ನಾವು ನೋಡುತ್ತಿದ್ದೇವೆ.
ಒಂದೇ
ಸೂರಿನಡಿ
ಇಂತಹ
ಹಲವು
ಬಗೆಯ
ಆಯ್ಕೆಗಳನ್ನು
ಒದಗಿಸುವ
ವೈನ್
ಎಕ್ಸ್
ಪ್ರೆಸ್
ನಂತಹ
ಪ್ರದೇಶವು,
ಹೊಸ
ಹಾಗೂ
ಅನುಭವಿ
ವೈನ್
ಪ್ರೇಮಿಗಳಿಗೆ
ಈ
ಪಾನೀಯವನ್ನು
ಇನ್ನಷ್ಟು
ಪ್ರೀತಿಸುವಂತೆ
ಮಾಡುತ್ತದೆ''
ಎಂದರು.
ಈ ಸಾಯಂಕಾಲದ ಗೌರವ ಅತಿಥಿ, ಟೆಕ್ನಿಕಲರ್ ಇಂಡಿಯಾ ಪ್ರೈ.ಲಿ.ನ ಹೆಡ್ ಬಿರೇನ್ ಘೋಷ್ ಮಾತನಾಡಿ, "ಬೆಂಗಳೂರು ಒಂದು ಕಾಸ್ಮೋಪಾಲಿಟನ್ ನಗರ. ಹಾಗಾಗಿ ಇಲ್ಲಿನ ನಿವಾಸಿಗಳಲ್ಲಿ ವೈನ್ ಮೇಲಿನ ಪ್ರೀತಿ ಸ್ವಲ್ಪ ಹೆಚ್ಚೇ ಇದೆ. ನಿರಂತರ ಪಯಣ ಹಾಗೂ ಸೂಕ್ತವಾದ ಪೇರಿಂಗ್ ನಲ್ಲಿರುವ ನೈಜ ಕುತೂಹಲವು ನಗರದಲ್ಲಿ ಇದನ್ನು ಇನ್ನಷ್ಟು ಜನಪ್ರಿಯಗೊಳಿಸುತ್ತಿದೆ. ಸೂಕ್ತ ಪ್ರದೇಶದಲ್ಲಿ ಸ್ಥಾಪಿಸಲಾಗಿರುವ ಕಾರಣ ಹಾಗೂ ಲೇಬಲ್ ಗಳ ಸಾಕಷ್ಟು ಕಲೆಕ್ಷನ್ ಇರುವ ಕಾರಣ ವೈನ್ ಪ್ರೇಮಿಗಳಿಗೆ ಇದು ಮುದ ನೀಡುತ್ತದೆ'' ಎಂದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಕೆ.ಎಸ್. ಲೋಕೇಶ್, "ವೈನ್ ಎಕ್ಸ್ ಪ್ರೆಸ್ ನಲ್ಲಿ ಪ್ರತಿಯೊಂದು ವಿಚಾರದ ಮೇಲೂ ಗಮನ ಹರಿಸಲಾಗುತ್ತದೆ. ನಮ್ಮ ಅಲಂಕಾರವೇ ವೈನ್ ಮಾರಾಟಗಾರನನ್ನು ಪ್ರತಿಬಿಂಬಿಸುತ್ತದೆ. ಏಕೈಕ ದಿಮ್ಮಿಯಿಂದ ಕೆತ್ತಲಾಗಿರುವ ಬುದ್ಧನ ಪ್ರತಿಮೆಯು ಈ ಜಾಗದ ಪ್ರಶಾಂತತೆಗೆ ಮೆರುಗು ನೀಡುತ್ತಿದೆ.
ಖರೀದಿಸಲಾಗುವ ವೈನ್ ಗಳ ಆಯ್ಕೆ ಹಾಗೂ ಅದನ್ನು ಓಪನ್ ಮಾಡುವಾಗ, ನಾವು ಸರಿಯಾದ ಉಷ್ಣತೆಯಲ್ಲಿ ಅದನ್ನು ನಿರ್ವಹಿಸುವುದಿದ್ದರೆ ನಮಗೆ ಚಿಲ್ಲರ್ ಕೂಡ ಸಿಗುತ್ತದೆ. ವೈನ್ ಕುಡಿಯುವ ಸಂಸ್ಕೃತಿಯಲ್ಲಿ ದೇಶದ ಕೇಂದ್ರಭಾಗವೆಂದು ಕರೆಸಿಕೊಳ್ಳಲು ಬೆಂಗಳೂರು ಸೂಕ್ತ ಸ್ಥಳವಾಗಿದೆ. ಈ ಪ್ರದೇಶವು ಆ ದಿಕ್ಕಿನತ್ತ ಚಲಿಸುವ ಒಂದು ಹೆಜ್ಜೆಯಾಗಿದೆ'' ಎಂದರು. (ಒನ್ಇಂಡಿಯಾ ಬಿಜಿನೆಸ್)