ಆದಾಯ ತೆರಿಗೆದಾರರ ಗಮನಕ್ಕೆ ಈ 2 ಸುದ್ದಿಗಳು
ನವದೆಹಲಿ, ಮೇ 05: ವಾರ್ಷಿಕ ವರಮಾನ 50 ಲಕ್ಷ ರು. ಗೂ ಅಧಿಕವಿರುವ ವ್ಯಕ್ತಿಗಳು ತಾವು ಹೊಂದಿರುವ ಆಸ್ತಿಯ ಎಲ್ಲ ಮೂಲಗಳನ್ನು ಬಹಿರಂಗ ಮಾಡಬೇಕಾಗುತ್ತದೆ.
ಭೂಮಿ, ಚಿನ್ನ, ನಿವೇಶನ ಈ ಬಗೆಯ ಯಾವುದೇ ಆಸ್ತಿ ಹೊಂದಿದ್ದರೆ ಅದನ್ನು ಸರ್ಕಾರಕ್ಕೆ ತಿಳಿಸಬೇಕಾಗುತ್ತದೆ. ತೆರಿಗೆ ಕಟ್ಟುವುದರೊಂದಿಗೆ ಹೊಂದಿರುವ ಬೆಳ್ಳಿ, ಪ್ಲಾಟಿನಂ, ಅಮೂಲ್ಯ ಹರಳುಗಳ ವಿವರವನ್ನು ಸಲ್ಲಿಕೆ ಮಾಡಬೇಕಾಗುತ್ತದೆ. ಈ ಬಗ್ಗೆ ನಿರ್ದೇಶನ ನೀಡಿರುವ ನೇರ ತೆರಿಗೆಗಳ ಕೇಂದ್ರೀಯ ಮಂಡಳಿ(ಸಿಬಿಡಿಟಿ) ಆಸ್ತಿ ವಿವರದ ಮಾಹಿತಿ ನೀಡಲು ಕೇಳಿಕೊಂಡಿದೆ.[ಟ್ಯಾಕ್ಸ್ ರಿಟರ್ನ್ಸ್ ಸಲ್ಲಿಕೆಗೆ 6 ಉತ್ತಮ ವೆಬ್ ತಾಣಗಳು]
ತೆರಿಗೆ
ಬಾಕಿದಾರರ
ಗಮನಕ್ಕೆ:
ತೆರಿಗೆ
ಬಾಕಿ
ಉಳಿಸಿಕೊಂಡು
ದಂಡ
ಕಟ್ಟುವ
ಸ್ಥಿತಿ
ನಿರ್ಮಾಣವಾಗಿದ್ದು
ಅದು
5-
10
ಸಾವಿರ
ರೂ
ಒಳಗೆ
ಇದ್ದರೆ
ನಿಮಗೆ
ವಿನಾಯಿತಿ
ಸಿಕ್ಕರೂ
ಸಿಗಬಹುದು.[ಆನ್
ಲೈನ್
ನಲ್ಲಿ
ಆದಾಯ
ತೆರಿಗೆ
ತುಂಬಲು
ಸರಳ
ವಿಧಾನ]
ಬಾಕಿ ಉಳಿಸಿಕೊಂಡವರ ಮೇಲೆ ಒತ್ತಡ ಹೇರಿ ದಂಡ ವಸೂಲಿ ಮಾಡಲು ವಿನಿಯೋಗಿಸುವ ಹಣ ಮತ್ತು ಸಮಯಕ್ಕೆ ವಸೂಲಿಯಾದ ದಂಡದ ಮೊತ್ತ ಸರಿಹೋಗುತ್ತದೆ ಎಂದು ಮನಗಂಡಿರುವ ತೆರಿಗೆ ಇಲಾಖೆ ವಿನಾಯಿತಿ ನೀಡಲು ಕೋರಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಕೆ ಮಾಡಲು ಮುಂದಾಗಿದೆ.