ಸಿಬಿಐ ದಾಳಿಯಿಂದ ಕಂಗೆಟ್ಟಿದ್ದ ಮಲ್ಯಗೆ ಎಸ್ಬಿಐ ಶಾಕ್
ಮುಂಬೈ, ನವೆಂಬರ್. 21: ಸಿಬಿಐ ದಾಳಿಯಿಂದ ಕಂಗೆಟ್ಟಿದ್ದ ವಿಜಯ್ ಮಲ್ಯಗೆ ಸ್ಟೇಟ್ ಬ್ಯಾಂಕ್ ಇಂಡಿಯಾ ಮತ್ತೊಂದು ಶಾಕ್ ನೀಡಿದೆ. ಮಲ್ಯ ಸಂಕಷ್ಟದಲ್ಲಿದ್ದಾಗ ಸಾಲ ನೀಡಿ ಸಲಹಿದ್ದ ಎಸ್ ಬಿಐ ಇದೀಗ ಮಲ್ಯ ಮೇಲೆ ತನ್ನ ಹಿಡಿತ ಬಿಗಿ ಮಾಡಿದೆ.
ವಿಜಯ್ ಮಲ್ಯ ಒಡೆತನದ ಕಂಪನಿಗಳು ಬೇಕಂತಲೇ ಸಾಲ ಮರುಪಾವತಿ ಮಾಡಿಲ್ಲ ಎಂದು ಹೇಳಿದ್ದು ಮಾಲೀಕ ವಿಜಯ್ ಮಲ್ಯ ಅವರನ್ನು 'ಉದ್ದೇಶ ಪೂರ್ವಕ ಸುಸ್ತಿದಾರ' ಎಂದು ಘೊಷಿಸಿದೆ.[ವಂಚನೆ ಪ್ರಕರಣ: ಮಲ್ಯ ಮನೆ ಮೇಲೆ ಸಿಬಿಐ ದಾಳಿ]
ಬ್ಯಾಂಕ್ ಹೇಳಿಕೆ ಮತ್ತು ಆದೇಶವನ್ನು ಆಧರಿಸಿ ಜಾರಿ ನಿರ್ದೇಶನಾಲಯ ಮುಂದಿನ ಕ್ರಮ ತೆಗೆದುಕೊಳ್ಳಲಿದೆ. ಮಲ್ಯ ಮಾಲೀಕತ್ವದ ಕಿಂಗ್ಫಿಷರ್ ಏರ್ಲೈನ್ಸ್, ಯುನೈಟೆಡ್ ಬ್ರೇವರೀಸ್ ಹೋಲ್ಡಿಂಗ್ಸ್ ಈಗ ಇನ್ನಷ್ಟು ಸಂಕಷ್ಟಕ್ಕೆ ಸಿಲುಕಿಕೊಳ್ಳುವ ಸಾಧ್ಯತೆಯಿದೆ.
ಅಕ್ಟೋಬರ್ ತಿಂಗಳಲ್ಲಿ ಮಲ್ಯ ಮನೆಯ ಮೇಲೆ ಸಿಬಿಐ ಅಧಿಕಾರಿಗಳ ತಂಡ ದಾಳಿ ನಡೆಸಿತ್ತು. ಐಡಿಬಿಐ ಬ್ಯಾಂಕಿನಿಂದ 950 ಕೋಟಿ ರು ಸಾಲ ಪಡೆದುಕೊಂಡಿದ್ದ ಮಲ್ಯ ಅವರು ಹಿಂತಿರುಗಿಸಿರಲಿಲ್ಲ. ಇದರ ಆಧಾರದಲ್ಲಿ ದಾಳಿ ಮಾಡಲಾಗಿತ್ತು.